Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕರ ಧರಣಿ ; ಅಂಬರೀಶ್ ನಿಲುವೇನು?
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರನೇ ದಿನವೂ ನಿರ್ಮಾಪಕರ ಧರಣಿ ಮುಂದುವರಿದಿದೆ. ಕಲಾವಿದರ ಸಂಘ ಸ್ಪಂದಿಸುವವರೆಗೂ ಸತ್ಯಾಗ್ರಹ ಮುಂದುವರಿಸುವುದಾಗಿ ನಿರ್ಮಾಪಕರ ಸಂಘ ನಿರ್ಧರಿಸಿದೆ.
ಮೂರನೇ ದಿನಕ್ಕೆ ಕಾಲಿಟ್ಟರೂ, ಕಲಾವಿದರ ಸಂಘದಿಂದ ಯಾರೂ ಕ್ಯಾರೆ ಅಂದಿಲ್ಲ. ನಟ ರೆಬೆಲ್ ಸ್ಟಾರ್ ಅಂಬರೀಶ್, ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಸಭೆಯಲ್ಲಿ ಪಾಲ್ಗೊಂಡು ಒಮ್ಮತ ನಿರ್ಧಾರಕ್ಕೆ ಬರಲಾಗುತ್ತೆ ಅಂತ ನಿರ್ಮಾಪಕ ಮುನಿರತ್ನ ಹೇಳಿಕೆ ನೀಡಿದ್ದರು. ಆದ್ರೆ, ನಿನ್ನೆ ನಡೆದ ಸಭೆಯಲ್ಲಿ ಇಬ್ಬರೂ ಪತ್ತೆ ಇರಲಿಲ್ಲ. [ಕೆ.ಎಫ್.ಸಿ.ಸಿಗೆ ನಿರ್ಮಾಪಕ ಎ.ಗಣೇಶ್ ಬರೆದಿರುವ ಪತ್ರದಲ್ಲೇನಿದೆ?]
ನಿರ್ಮಾಪಕರ ಸಮಸ್ಯೆಗಳನ್ನ ಬಗೆಹರಿಸುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಮಿತಿಗಳನ್ನ ರಚಿಸಿದೆ. ನಟಿ ತಾರಾ, ನವರಸ ನಾಯಕ ಜಗ್ಗೇಶ್, ಹಿರಿಯ ನಟಿ ಪ್ರಮೀಳಾ ಜೋಷಾಯಿ, ಸಾರಾ ಗೋವಿಂದು ಸೇರಿದಂತೆ ಹಲವರು ವಿವಿಧ ಸಮಿತಿಗಳಲಿದ್ದಾರೆ. [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]
ನಿರ್ಮಾಪಕರ ಹಿತಾಸಕ್ತಿಗಾಗಿ ಕೈಜೋಡಿಸಿರುವ ನಟ ಜಗ್ಗೇಶ್ ನೇತೃತ್ವದಲ್ಲಿ ನಿನ್ನೆ ನಟಿ ತಾರಾ, ಪ್ರಮೀಳಾ ಜೋಷಾಯಿ, ಉಮೇಶ್ ಬಣಕರ್ ಮತ್ತು ಸಾರಾ ಗೋವಿಂದು, ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]
ಅಂಬಿ ಮಾಮನ ಜೊತೆ ನಟ ಜಗ್ಗೇಶ್ ನೇತೃತ್ವದ ಸಮಿತಿ ಎಲ್ಲಾ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದೆ. ಜೂನ್ 7ನೇ ತಾರೀಖು ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರ ಸಂಘದ ಜೊತೆ ಮಾತುಕತೆ ನಡೆಸುವುದಕ್ಕೆ ಅಂಬರೀಶ್ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಕೂಡ ಮಾಡಿದ್ದಾರೆ. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]
ಚಿತ್ರೋಧ್ಯಮದ
ಎಲ್ಲರು
ಒಂದು
ತಾಯಿ
ಮಕ್ಕಳಂತೆ
ಬಾಳುತ್ತೇವೆ
:)ಅದಕ್ಕೆ
ಪೀಠಿಕೆ
ಅಂಬಿ
ಅಣ್ಣನ
ಮನೆಯಿಂದ
ಶುರುವಾಯಿತು:)
ನಂಬಿಕೆಯಿಂದ
ಶುಭಸಂಜೆ..
pic.twitter.com/IdZCLcXOjK
—
Jaggesh
(@jaggesh2)
June
2,
2015
ಅಂಬರೀಶ್ ಕೈಜೋಡಿಸುವವರೆಗೂ ಯಾವ ಸಮಸ್ಯೆ ಕೂಡ ಪರಿಹಾರ ಆಗುವುದಿಲ್ಲ ಅನ್ನೋದು ಗಾಂಧಿನಗರದ ಹಲವರ ಮಾತು. ಇದುವರೆಗೂ ವಾಣಿಜ್ಯ ಮಂಡಳಿಯಲ್ಲಿದ್ದ ಈ ಸಮಸ್ಯೆ ಇದೀಗ ಅಂಬರೀಶ್ ಮನೆಯಂಗಳಕ್ಕೆ ತಲುಪಿದೆ. ಕನ್ವರ್ ಲಾಲ್ ನಿರ್ಧಾರದ ಮೇಲೆ ಈಗ ಎಲ್ಲರ ಚಿತ್ತ.