Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧ್ಯರಾತ್ರಿ ವಿಚಿತ್ರ ಶಬ್ದ: ನಟ ಜಗ್ಗೇಶ್ ಗೆ ನಿದ್ರೆಯೇ ಇಲ್ಲ
ನಟ ಜಗ್ಗೇಶ್ ನಿನ್ನೆ ರಾತ್ರಿ ಸರಿಯಾಗಿ ನಿದ್ರೆ ಮಾಡಲು ಆಗಲಿಲ್ಲ. ಕಾರಣ ಮಧ್ಯರಾತ್ರಿ ಕೇಳಿಸುತ್ತಿದ್ದ ಒಂದು ವಿಚಿತ್ರ ಶಬ್ದ.
ರಾತ್ರಿ ಮನೆಯಲ್ಲಿ ಮಲಗಿದ್ದ ಜಗ್ಗೇಶ್ ಗೆ ವಿಚಿತ್ರ ಶಬ್ದವೊಂದು ಕೇಳಿಸಿತು. ಅದು ಅವರ ನಿದ್ರೆಯನ್ನು ಕಡೆಸಿತು. ಇದರಿಂದ ಏನಿದು ನೋಡೋಣ ಎಂದು ಸಿಸಿ ಟಿವಿ ಪರಿಶೀಲನೆ ಮಾಡಿದರು. ಆಗ ಬೀದಿ ನಾಯಿಗಳು ಜಗ್ಗೇಶ್ ಕಾರ್ ಮೇಲೆ ಹತ್ತಿ ಗಲಾಟೆ ಮಾಡುತ್ತಿದ್ದವು.
ಚಿಕಿತ್ಸೆಗೂ ಹಣ ಇಲ್ಲ: ಸಾವು ಬದುಕಿನ ನಡುವೆ ನಟ ಕಿಲ್ಲರ್ ವೆಂಕಟೇಶ್ ಹೋರಾಟ
ಇದನ್ನು ನೋಡಿದ ಜಗ್ಗೇಶ್ ಕಾರ್ ಮೇಲೆ ನಾಯಿಗಳು ಇದ್ದರೂ ಪರವಾಗಿಲ್ಲ. ಮನುಷ್ಯನಾಗಲಿ ಪ್ರಾಣಿಯಾಗಲಿ ಅದರ ಸಂತೋಷ ಕೆಡಿಸಬಾರದು ಎಂದು ಸುಮ್ಮನಾದರು. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಹಂಚಿಕೊಂಡಿದ್ದಾರೆ.
''ಮಧ್ಯರಾತ್ರಿ ವಿಚಿತ್ರ ಶಬ್ಧಕ್ಕೆ ನಿದ್ರೆ ಮಾಯ..! ಏನು ಎಂದು cctv ನೋಡಿದರೆ ಬೀದಿ ನಾಯಿಗಳು ನನ್ನ ಕಾರನ್ನೆ ಆಟದ ಮೈದಾನ ಮಾಡಿಕೊಂಡು ಆಡುತ್ತಿವೆ.. ಯಾಕೋ ಓಡಿಸಲು ಮನಸ್ಸು ಬರಲಿಲ್ಲ.. ಮನುಷ್ಯನಿಗಾಗಲಿ ಪ್ರಾಣಿಗಾಗಲಿ ಅವರ ಸಂತೋಷವನ್ನು ಕೆಡಿಸುವುದು ಮಹಾ ಪಾಪ ಅನ್ನಿಸಿತು. ರಕ್ಕಸ ಗುಣದ ಯಾಂತ್ರಿಕ ಜಗತ್ತಿನಲ್ಲಿ ಇಂದು ಮನುಷ್ಯ ಪ್ರಾಣಿಗಳಿಗೆ ಸಂತೋಷ ಮರೀಚಿಕೆ. ಸಂತೋಷವಾಗಿ ಬದುಕುವುದು ಎಲ್ಲಾ ಶ್ರೀಮಂತಿಕೆಗಿಂತ ಶ್ರೇಷ್ಠ. ಇಂದು ಯಾರು ಬೇಕಾದರು ದುಡ್ಡು ಸಂಪಾದನೆ ಮಾಡಬಹುದು. ಆದರೆ ಸಂತೋಷ ಮತ್ತು ಸಮಯ ಯಾರಿಂದಲು ಸಂಪಾದನೆ ಮಾಡಲಾಗದು. ಬದಲಿಗೆ ಸರಿಯಾಗಿ ಸಮಯ ಬಳಸಿ ಸಂತೋಷ ಪಡೆಯಬಹುದು. ಶುಭ ಮಧ್ಯರಾತ್ರಿ.'' ಎಂದು ಜಗ್ಗೇಶ್ ಘಟನೆ ವಿವರಿಸಿದ್ದಾರೆ.
ಚಿತ್ರರಂಗಕ್ಕೆ ಜಗ್ಗೇಶ್ ಕುಟುಂಬದಿಂದ ಮತ್ತೊಂದು ಪ್ರತಿಭೆ ಎಂಟ್ರಿ!
View this post on InstagramA post shared by 𝐉𝐀𝐆𝐆𝐄𝐒𝐇 𝐒𝐇𝐈𝐕𝐀𝐋𝐈𝐍𝐆𝐀𝐏𝐏𝐀 (@actor_jaggesh) on
ನಾಯಿಯನ್ನು ಮನುಷ್ಯನಂತೆ ಕಂಡ ಜಗ್ಗೇಶ್ ರನ್ನು ಅವರ ಅಭಿಮಾನಿಗಳ ಹೊಗಳಿದ್ದಾರೆ. ಟ್ವಿಟ್ಟರ್ ನಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.