Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಂಡಂ' ಅಂತ ಮತ್ತೆ ಗಾಂಧಿನಗರಕ್ಕೆ ಬಂದ 'ನಮಕ್ ಹರಾಮ್' ಮಹೇಶ್
ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮ್ಮ ಮಹೇಶ್ ಅವರ ಚೊಚ್ಚಲ ಚಿತ್ರ 'ನಮಕ್ ಹರಾಮ್' ಬಾಕ್ಸಾಫೀಸ್ ನಲ್ಲಿ ಅಷ್ಟೇನು ಸದ್ದು ಮಾಡದೇ ತೋಪೆದ್ದು ಹೋದ ನಂತರ ಅದರ ಬೆನ್ನಲ್ಲೇ 'ದುಬಾರಿ' ಎಂಬ ಚಿತ್ರಕ್ಕೂ ಸಹಿ ಹಾಕಿದ್ದು, ಇದೀಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಅಂದಹಾಗೆ ಮೊದಲ ಚಿತ್ರ ಅಷ್ಟಾಗಿ ಯಶಸ್ಸು ಗಳಿಸದಿದ್ದರು ಕೂಡ ನಟ ಮಹೇಶ್ ಅವರಿಗೆ ಚಂದನವನದಲ್ಲಿ ಬಹಳ ಬೇಡಿಕೆ ಇದೆ. ಅದಕ್ಕಾಗಿ ನಟ ಮಹೇಶ್ ಅವರಿಗೆ 'ದಂಡಂ' ಎಂಬ ಚಿತ್ರದಲ್ಲಿ ನಟಿಸಲು ಆಫರ್ ಬಂದಿದ್ದು, ಈಗಾಗಲೇ ಸಹಿ ಕೂಡ ಹಾಕಿದ್ದಾರೆ.
ನಿರ್ದೇಶಕ ಬಾಲಾ ವಿನಾಯಕ ಅವರು 'ದಂಡಂ' ಚಿತ್ರದ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದು, ನಿರ್ಮಾಪಕರಾದ ಶಿವಮಹಾದೇವಪ್ಪ ಮತ್ತು ತಿರುಮಲೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.[ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್']
'ಎದೆಗಾರಿಕೆ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಕಾಮಿಡಿ ನಟ ಸಾಧು ಕೋಕಿಲ ಅವರು ತುಂಬಾ ದಿನಗಳ ನಂತರ ಮತ್ತೆ ಸಂಗೀತ ನಿರ್ದೇಶನದತ್ತ ಹೊರಳಿದ್ದು, ಮಹೇಶ್ ಅವರ 'ದಂಡಂ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಸಖತ್ ಆಕ್ಷನ್-ಥ್ರಿಲ್ಲರ್ ಮೂವಿ ಆಗಿರುವ 'ದಂಡಂ' ಚಿತ್ರಕ್ಕೆ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ (ನವೆಂಬರ್ 27) ಚಿತ್ರದ ಸೆಟ್ಟೇರಿದೆ.
ಅದೇನೇ ಇರಲಿ ನಟ ಮಹೇಶ್ ಅವರು 'ದಂಡಂ' (ಶಿಕ್ಷೆ) ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ನಿಂತು ಈ ಸಿನಿಮಾ ಕೈ ಹಿಡಿಯುತ್ತ ಕಾದು ನೋಡಬೇಕು.