Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಕ್ಲಿಕ್ ಮಾಡಿದ ಫೋಟೋ ಶ್ರೀಮುರಳಿಗೆ ಗಿಫ್ಟ್
Recommended Video
ನಟ ಶ್ರೀಮುರಳಿ ಒಂದು ಉಡುಗೊರೆ ಪಡೆದಿದ್ದಾರೆ. 'ಮದಗಜ' ಸಿನಿಮಾದ ನಿರ್ಮಾಪಕ ಉಮಾಪತಿ ವಿಶೇಷ ಉಡುಗೊರೆಯನ್ನು ತಮ್ಮ ನಾಯಕನಿಗೆ ನೀಡಿದ್ದಾರೆ.
ಶ್ರೀಮುರಳಿ ಕೈ ಸೇರಿರುವ ಈ ಫೋಟೋ ನಟ ದರ್ಶನ್ ಕ್ಲಿಕ್ ಮಾಡಿದ್ದು. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಕಾಡಿನಲ್ಲಿ ಪ್ರಾಣಿಗಳ ಫೋಟೋಗಳನ್ನು ತೆಗೆದಿದ್ದರು. ನಂತರ ಈ ಫೋಟೋಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸುವ ಪ್ಲಾನ್ ಆಗಿತ್ತು.
ಇದೀಗ ದರ್ಶನ್ ಕ್ಲಿಕ್ ಮಾಡಿದ ಹುಲಿಯ ಫೋಟೋವನ್ನು ನಿರ್ಮಾಪಕ ಉಮಾಪತಿ ತಮ್ಮ ನಾಯಕ ಶ್ರೀಮುರಳಿಗೆ ಪ್ರೀತಿಯಿಂದ ನೀಡಿದ್ದಾರೆ. ಈ ಫೋಟೋಗೆ 10 ಸಾವಿರ ರೂಪಾಯಿಯಾಗಿದೆ. ದರ್ಶನ್ ಕ್ಲಿಕ್ ಮಾಡಿದ ಈ ಫೋಟೋ ಮುರಳಿ ಅವರಿಗೂ ಬಹಳ ಇಷ್ಟವಾಗಿದೆ. ಈ ಹಿಂದೆ 'ಹೆಬ್ಬುಲಿ' ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಈಗ ಹುಲಿಯ ಫೋಟೋವನ್ನೇ ಉಡುಗೊರೆಯಾಗಿ ನೀಡಿದ್ದಾರೆ.
ಅಂದಹಾಗೆ, ಶ್ರೀಮರಳಿ ಸದ್ಯ ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದರು. ಸದ್ಯದಲ್ಲಿಯೇ 'ಮದಗಜ' ಚಿತ್ರದ ಶೂಟಿಂಗ್ ಕೂಡ ಶುರು ಆಗಲಿದೆ. ಇದು 'ಅಯೋಗ್ಯ' ಖ್ಯಾತಿಯ ಮಹೇಶ್ ಗೌಡ ನಿರ್ದೇಶನದ ಸಿನಿಮಾವಾಗಿದೆ.