'ಭರಾಟೆ' ಮೆಚ್ಚಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ
ಕಿಚ್ಚ ಸುದೀಪ್, ಟಾಲಿವುಡ್ ನಟ ಮಹೇಶ್ ಬಾಬು ರನ್ನು ಭೇಟಿ ಮಾಡಿದ್ದ ಶ್ರೀಮುರಳಿ ಅದರ ಜೊತೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿರನ್ನು ಸಹ ಮೀಟ್ ಮಾಡಿದ್ದಾರೆ.
'ಭರಾಟೆ' ಚಿತ್ರದ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈ ವೇಳೆ ಮೂರು ನಟರನ್ನು ಶ್ರೀಮುರಳಿ ಭೇಟಿ ಮಾಡಿದ್ದಾರೆ. ಸುನೀಲ್ ಶೆಟ್ಟಿ 'ಪೈಲ್ವಾನ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಶೂಟಿಂಗ್ ಬಿಡುವಿನ ವೇಳೆ ಸುನೀಲ್ ಶೆಟ್ಟಿ ಹಾಗೂ ಶ್ರೀಮುರಳಿ ಕೆಲಕಾಲ ಮಾತುಕತೆ ನಡೆಸಿದರು. ಈ ವೇಳೆ 'ಭರಾಟೆ' ಸಿನಿಮಾದ ಟೀಸರ್ ಅನ್ನು ಸಹ ಸುನೀಲ್ ಶೆಟ್ಟಿ ವೀಕ್ಷಿಸಿ ಮೆಚ್ಚಿಕೊಂಡರು. ಸುನೀಲ್ ಶೆಟ್ಟಿ 'ಪೈಲ್ವಾನ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಅಂದಹಾಗೆ, 'ಭರಾಟೆ' ಸಿನಿಮಾದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಚೇತನ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಲೀಲಾ ಚಿತ್ರದ ನಾಯಕಿಯಾಗಿದ್ದಾರೆ. ಸದ್ಯ 'ಭರಾಟೆ' ಹಾಗೂ 'ಮದಗಜ' ಸಿನಿಮಾಗಳಲ್ಲಿ ಶ್ರೀಮುರಳಿ ಬ್ಯುಸಿ ಇದ್ದಾರೆ.
English summary
Kannada actor Sri Murali met Sunil Shetty in Ramoji film city Hyderabad.


Click it and Unblock the Notifications