KPL ಕ್ರಿಕೆಟ್ ಲೀಗ್ ಗೆ ಬಾಯ್ ಬಾಯ್ ಹೇಳ್ತಾರ ಕಿಚ್ಚ ಸುದೀಪ್?
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂಥರಾ ಆಲ್ ರೌಂಡರ್ ಅಂದ್ರೂ ತಪ್ಪಿಲ್ಲ. ಯಾಕೆಂದರೆ ಇವರು ಬರೀ ನಟ ಮಾತ್ರವಲ್ಲದೇ, ನಿರ್ದೇಶನ-ನಿರ್ಮಾಣದ ಜೊತೆಗೆ ಇವರಲ್ಲೊಬ್ಬ, ಉತ್ತಮ ಕ್ರಿಕೆಟ್ ಆಟಗಾರ ಇದ್ದಾನೆ.
(ಕೆಪಿಎಲ್) ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ರಾಕ್ ಸ್ಟಾರ್' ಕೂಡ ಭಾಗವಹಿಸಿತ್ತು. ಆದರೆ ಈ ಬಾರಿ ಸುದೀಪ್ ಸಾರಥ್ಯದ 'ರಾಕ್ ಸ್ಟಾರ್' ಸೋಲುಂಡಿತ್ತು.[ಕೆಪಿಎಲ್ 2016: ಯಾವ ತಂಡಕ್ಕೆ ಎಷ್ಟು ಮೊತ್ತ ಬಹುಮಾನ?]

ಇದೀಗ ಕಿಚ್ಚ ಸುದೀಪ್ ಅವರ ಕಡೆಯಿಂದ ಬಂದಿರೋ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, ಸುದೀಪ್ ಅವರು ಕೆ.ಪಿ.ಎಲ್ ಕ್ರಿಕೆಟ್ ಲೋಕವನ್ನು ತೊರೆಯುತ್ತಾರಂತೆ. ಈ ವಿಚಾರವನ್ನು ಖುದ್ದು ಸುದೀಪ್ ಅವರ ಟ್ವೀಟ್ ಮಾಡುವ ಮೂಲಕ, ಅಭಿಮಾನಿಗಳಿಗೆ ಸಣ್ಣ ಸುಳಿವು ಕೊಟ್ಟಿದ್ದಾರೆ.

"ಬಹುಶಃ ಇದು ನನ್ನ ಕೊನೆಯ ಕೆ.ಪಿ.ಎಲ್ ಜರ್ನಿ. ಮತ್ತು ನಾಳೆ ನಡೆಯುವ ಪಂದ್ಯ ನನ್ನ ಕೊನೆಯ ಆಟ. ನಾನು ಇಷ್ಟರವರೆಗೆ ಅಗಾಧ ಪ್ರತಿಭೆಗಳ ಜೊತೆ ಕಳೆದ ಆ ಪ್ರತಿಯೊಂದು ಕ್ಷಣ ಕೂಡ ಅದ್ಭುತ. ನನಗೆ ಈ ಅವಕಾಶ ಕೊಟ್ಟ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಧನ್ಯವಾದ" ಅಂತ ಖುದ್ದು ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿದ್ದಾರೆ.[ಕಿಚ್ಚ ಸುದೀಪ್ 'ಸ್ಟಾರ್ಸ್' ವಿರುದ್ಧ ರಾಗಿಣಿ 'ಟಸ್ಕರ್ಸ್' ಗೆ ಜಯ]

ಕಿಚ್ಚ ಸುದೀಪ್ ಅವರ ಈ ನಿರ್ಧಾರ ಸಾವಿರಾರು ಅಭಿಮಾನಿಗಳಿಗೆ ಬೇಸರ ತರಿಸಿದೆ. ಕಿಚ್ಚ ಸುದೀಪ್ ಸಾರಥ್ಯದ ರಾಕ್ ಸ್ಟಾರ್ ತಂಡದಲ್ಲಿ ಹಲವು ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್ ಆಟಗಾರರು ಸ್ಥಾನ ಪಡೆದುಕೊಂಡಿದ್ದರು. ಇನ್ನು ಕಿಚ್ಚ ಸುದೀಪ್ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಮೂಲ ಕಾರಣ ಏನು ಅನ್ನೋದು ಇನ್ನೂ ಬಹಿರಂಗವಾಗಿಲ್ಲ.


Click it and Unblock the Notifications











