ಶೂಟಿಂಗ್ ಗೆ ಕರೆಸಿ ನಟಿ ಅಕ್ಷತಾಗೆ ಅವಮಾನ
ಮೀಟೂ ಪ್ರಕರಣ ನಂತರ ಈಗ ಮತ್ತೊಬ್ಬ ನಟಿ ತನ್ನ ಮೇಲೆ ಆದ ಅವಮಾನವನ್ನು ಹೇಳಿಕೊಂಡಿದ್ದಾರೆ. ಕನ್ನಡದ ನಟಿ ಅಕ್ಷತಾ ಶ್ರೀಧರ್ ತಮಗೆ ಆದ ಅವಮಾನದ ವಿರುದ್ಧ ಕಿಡಿಕಾರಿದ್ದಾರೆ.
ಕನ್ನಡ ನಟಿ ಅಕ್ಷತಾ ಶ್ರೀಧರ್ ತಮಗೆ ಮಲೆಯಾಳಂ ಚಿತ್ರತಂಡ ಕಿರುಕುಳ ನೀಡಿದೆ ಎಂದು ಆರೋಪ ಮಾಡಿದ್ದಾರೆ. 'ಕೊಚ್ಚಿನ್ ಶಾಧಿ ಚೆನ್ನೈ ಜಿರೋ ತ್ರಿ' ಎಂಬ ಸಿನಿಮಾದಲ್ಲಿ ಅಕ್ಷತಾ ಶ್ರೀಧರ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಹೋಗಿರುವ ಸಮಯದಲ್ಲಿ ಅಲ್ಲಿನ ಚಿತ್ರತಂಡ ಅವರನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಷತಾ ಅವರಿಗೆ ಹೋಟೆಲ್ ವೊಂದನ್ನು ನೀಡಿದ್ದು, ಅಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲವಂತೆ. ರೂಮ್ ಕ್ಲೀನ್ ಇಲ್ಲ ಯಾಕೆ ರೀತಿ ಎಂದು ಕೇಳಿದಾಗ ಅಲ್ಲಿನ ಸಿಬ್ಬಂದಿಗಳು ನಿಂದನೆ ಮಾಡಿದ್ದಾಂತೆ. ಬಳಿಕ ಚಿತ್ರತಂಡದ ಜೊತೆಗೆ ಚರ್ಚೆ ಮಾಡಿದಾಗ ಅವರು ಕೂಡ ಅವಮಾನ ಮಾಡಿದ್ದಾರಂತೆ.

ಈ ಬಗ್ಗೆ ಈಗಾಗಲೇ ಬೆಂಗಳೂರಿನ ಪೊಲೀಸ್ ಕಮಿಷನರ್ ಅವರಿಗೆ ಅಕ್ಷತಾ ದೂರು ನೀಡಿದ್ದಾರೆ.
More from Filmibeat
English summary
Kannada actress Akshatha Sreedhar harassed by 'Cochin Shadhi At Chennai 03' malayalam movie team.


Click it and Unblock the Notifications











