Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಹಾಯ ಮಾಡಿ ಹಿರಿಯ ನಟನೊಬ್ಬನ ಜೀವ ಕಾಪಾಡಿದ ಪ್ರಕಾಶ್ ರೈ
ಪಂಚ ಭಾಷಾ ನಟ ಪ್ರಕಾಶ್ ರೈ ತಮ್ಮ ಅಭಿನಯದ ಜೊತೆಗೆ, ಸಾಮಾಜಿಕ ಕಳಕಳಿ, ಬರವಣಿಗೆ, ಮಾತುಗಾರಿಕೆಯಿಂದಲೂ ಗುರುತಿಸಿಕೊಂಡವರು. ರಾಜಕೀಯದ ಬಗ್ಗೆಯೂ ಅತೀವ ಆಸಕ್ತಿಯುಳ್ಳ ಪ್ರಕಾಶ್ ರಾಜ್ ಚುನಾವಣೆಗೂ ಸ್ಪರ್ಧಿಸಿದ್ದರು.
ಇವಿಷ್ಟೆ ಅಲ್ಲದೆ ಕಲಾವಿದರ ಅಭಿವೃದ್ಧಿ, ಭದ್ರತೆ ಬಗ್ಗೆಯೂ ಪ್ರಕಾಶ್ ರೈ ಗೆ ಅತೀವ ಕಾಳಜಿ. ಪ್ರಕಾಶ್ ರೈ ಅವರ ಇದೇ ಕಾಳಜಿ ನಟನೊಬ್ಬನ ಜೀವ ಉಳಿಯುವಂತೆ ಮಾಡಿದೆ. ನಟರೊಬ್ಬರು ಪ್ರಕಾಶ್ ರೈ ಹೇಗೆ ಹಿರಿಯ ನಟರೊಬ್ಬರ ಜೀವ ಉಳಿಸಿದರು ಎಂಬುದನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ತೆಲುಗು ನಟ ಶಿವಾಜಿ ರಾಜಾ ಅವರು ಇತ್ತೀಚೆಗೆ ಮಾಧ್ಯಮಗಳ ಸಂದರ್ಶನದಲ್ಲಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಆತ್ಮಹತ್ಯೆ ನಿರ್ಣಯ ಮಾಡಿದ್ದ ತೆಲುಗು ಸಿನಿರಂಗದ ಹಿರಿಯ ನಟರೊಬ್ಬರ ಜೀವವನ್ನು ಪ್ರಕಾಶ್ ರೈ ಹೇಗೆ ಉಳಿಸಿದರು ಎಂದು ವಿವರಿಸಿದ್ದಾರೆ. ವಿವರಗಳಿಗಾಗಿ ಮುಂದೆ ಓದಿ...
ಸಾಲ ಮಾಡಿಕೊಂಡಿದ್ದ ಹಿರಿಯ ನಟ
ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು ಸುಮಾರು 50 ಲಕ್ಷ ಸಾಲ ಮಾಡಿಕೊಡ್ಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಒದ್ದಾಡಿದ್ದ ಅವರು ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ನಿರ್ಣಯ ಮಾಡಿದ್ದರಂತೆ.
ಶಿವಾಜಿ ರಾಜಾ ಗೆ ಕರೆ ಮಾಡಿದ್ದ ಪ್ರಕಾಶ್ ರೈ
ಇದು ಪ್ರಕಾಶ್ ರೈ ಅವರ ಗಮನಕ್ಕೆ ಬಂದು, ಶಿವಾಜಿ ರಾಜಾ ಅವರಿಗೆ ಕರೆ ಮಾಡಿ, ಆ ಹಿರಿಯ ನಟರನ್ನು ಕರೆತರುವಂತೆ ಹೇಳಿದ್ದಾರೆ. ಅದರಂತೆ ಶಿವಾಜಿ ರಾಜಾ ಆ ಹಿರಿಯ ನಟರನ್ನು ಪ್ರಕಾಶ್ ರೈ ಅವರಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.
ಭಾರಿ ಮೊತ್ತದ ಹಣ ಸಹಾಯ ಮಾಡಿದ ಪ್ರಕಾಶ್ ರೈ
ಹಿರಿಯ ನಟರ ಕಷ್ಟವನ್ನೆಲ್ಲಾ ಕೇಳಿದ ಪ್ರಕಾಶ್ ರೈ, ಐವತ್ತು ಲಕ್ಷ ಹಣವನ್ನು ಅವರಿಗೆ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ, ಹಿರಿಯ ನಟರಿಗೆ ಧೈರ್ಯ ತುಂಬಿ ಕಷ್ಟಕ್ಕೆ ಸಹಾಯ ಮಾಡುವುದಾಗಿ ಹೇಳಿ ಕಳುಹಿಸಿದ್ದಾರೆ.
ಇಷ್ಟು ದಿನವಾದರೂ ಹಣ ವಾಪಸ್ ಪಡೆದಿಲ್ಲ ಪ್ರಕಾಶ್ ರೈ
ಹಿರಿಯ ನಟ ಸಾಲವನ್ನೆಲ್ಲಾ ತೀರಿಸಿ ಆರಾಮವಾಗಿದ್ದಾರೆ. ನಟ ಪ್ರಕಾಶ್ ರೈ ಇಷ್ಟು ದಿನವಾದರೂ ಆ ಹಿರಿಯ ನಟನಿಂದ ಐವತ್ತು ಲಕ್ಷ ಹಣವನ್ನು ವಾಪಸ್ ಪಡೆದಿಲ್ಲ ಎಂದು ಹೇಳಿದ್ದಾರೆ ಶಿವಾಜಿ ರಾಜಾ.
ಪ್ರಕಾಶ್ ರೈ ಮಾನವೀಯತೆ ಉದಾಹರಣೆ ಈ ಘಟನೆ
ತಮ್ಮ ಸಿಟ್ಟಿನ ವರ್ತನೆಯಿಂದ ಕೆಲ ಬಾರಿ ತೆಲುಗು ಸಿನಿರಂಗದಿಂದ ಬಹಿಷ್ಕಾರ ಅನುಭವಿಸಿರುವ ನಟ ಪ್ರಕಾಶ್ ರೈ, ಆಂತರ್ಯದಲ್ಲಿ ಮೃದು ಮನಸ್ಸಿನ, ಮನುಷ್ಯ ಪ್ರೀತಿಯ ನಟ ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆ.