'ಕುರುಕ್ಷೇತ್ರ' ಉತ್ತರೆಗೆ ಕನ್ನಡದಲ್ಲಿ ಸಿಕ್ತು ಮತ್ತೊಂದು ಬಿಗ್ ಪ್ರಾಜೆಕ್ಟ್
'ಕುರುಕ್ಷೇತ್ರ' ಸಿನಿಮಾದಲ್ಲಿ ಉತ್ತರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅದಿತಿ ಆರ್ಯ. ಇದು ಅದಿತಿ ಆರ್ಯ ಮೊದಲ ಕನ್ನಡ ಸಿನಿಮಾವಾಗಿತ್ತು. ಆ ಸಿನಿಮಾದ ನಂತರ ಇದೀಗ ಮತ್ತೊಂದು ದೊಡ್ಡ ಅವಕಾಶ ಅವರಿಗೆ ಸಿಕ್ಕಿದೆ.
Recommended Video
ಮತ್ತೆ ಶುರುವಾಯ್ತು ಪುಟ್ಟಗೌರಿ ಹವಾ | KANNADATHI | RANJINI | FILMIBEAT KANNADA
'ರವಿಚಂದ್ರ' ಸಿನಿಮಾಗೆ ಮೂರನೇ ನಾಯಕಿಯಾಗಿ ಅದಿತಿ ಆರ್ಯ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ಉಪೇಂದ್ರ ನಾಯಕರು. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ರವಿಚಂದ್ರನ್ ಹಾಗೂ ಉಪ್ಪಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಈಗಾಗಲೇ ಇಬ್ಬರು ಹೀರೋಯಿನ್ ಗಳು ಇದ್ದಾರೆ. ಶಾನ್ವಿ ಶ್ರೀವತ್ಸವ್ ಹಾಗೂ ನಿಮಿಕಾ ರತ್ನಕರ್ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಮೂರನೇ ನಾಯಕಿ ಆಗಮನವಾಗಿದೆ. ಉಪೇಂದ್ರಗೆ ಅದಿತಿ ಆರ್ಯ ಜೋಡಿಯಾಗಿದ್ದಾರೆ.

ಓಂ ಪ್ರಕಾಶ್ ರಾವ್ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ 'ಬಲುಪು' ಸಿನಿಮಾದ ರಿಮೇಕ್ ಇದಾಗಿದೆ. ಕನಕಪುರ ಶ್ರೀನಿವಾಸ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.
More from Filmibeat
English summary
Actress Aditi Arya will be female lead for Ravichandra kannada movie.


Click it and Unblock the Notifications











