ಚಂದನ್ ಶೆಟ್ಟಿಯನ್ನು ಏಕವಚನದಲ್ಲಿ ನಿಂದಿಸಿದ ಅಹೋರಾತ್ರ: ಕಾರಣ ಏನು?

ಅಹೋರಾತ್ರ ಈ ಹೆಸರು ನಿಮಗೆ ಪರಿಚಯ ಇರಬಹುದು. ಇಲ್ಲದೇನು ಇರ ಬಹುದು. ಕಳೆದ ಬಾರಿ ನಟ ಸುದೀಪ್ ಬಗ್ಗೆ ಮಾತನಾಡಿದಾಗಲೇ ಈ ವ್ಯಕ್ತಿ ಯಾರು ಎನ್ನುವುದು ಹಲವರಿಗೆ ಗೊತ್ತಾಗಿದ್ದು. ನಟ ಸುದೀಪ್ ವಿಚಾರದಲ್ಲಿ ಏನೇನೋ ಮಾತನಾಡಿ ಸುದ್ದಿ ಆಗಿದ್ದರು. ಈಗ ಮತ್ತೆ ಅಹೋರಾತ್ರ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಚಂದನ್ ಶೆಟ್ಟಿ. ಈ ಹಿಂದೆ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದ ರಮ್ಮಿ ಜಾಹೀರಾತು.

ಹೌದು, ಇದ್ದಕ್ಕಿದ್ದ ಹಾಗೆ ಚಂದನ್ ಶೆಟ್ಟಿಯನ್ನು ನಿಂದಿಸಿ ವಿಡಿಯೋ ಒಂದನ್ನು ಹರಿ ಬಿಟ್ಟಿದ್ದಾರೆ ಅಹೋರಾತ್ರ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಂದನ್ ಶೆಟ್ಟಿ ಜೊತೆಗೆ ನಿವೇದಿತಾ ಗೌಡ ಬಗ್ಗೆಯೂ ಈ ವಿಡಿಯೋದಲ್ಲಿ ಮಾತನಾಡಲಾಗಿದೆ.

ಚಂದನ್ ಶೆಟ್ಟಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯೂಸಿ ಆಗಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಅಹೋರಾತ್ರ ಚಂದನ್ ಶೆಟ್ಟಿ ವಿಡಿಯೋ ಮಾಡಿ, ವಿಡಿಯೋದಲ್ಲಿ ಚಂದನ್ ಶೆಟ್ಟಿಯನ್ನು ನಿಂದಿಸಿ ಫೇಸ್‌ಬುಕ್‌ನಲ್ಲಿ ಹರಿ ಬಿಟ್ಟಿದ್ದಾರೆ. ಇದಕ್ಕೆ ಸಾಕಷ್ಟು ಪರ ವಿರೋಧ ಕಮೆಂಟ್‌ಗಳು ಬಂದಿವೆ.

ಚಂದನ್ ಶೆಟ್ಟಿ ನಿಂದಿಸಿ ಅಹೋರಾತ್ರ ವಿಡಿಯೋ!

ವಿಡಿಯೋದಲ್ಲಿ ಅಹೋರಾತ್ರ ಹೇಳಿದ್ದು ಹೀಗೆ. "ಹೇ ಚಂದನ್ ಶೆಟ್ಟಿ ಇತ್ತೀಚೆಗೆ ಮದುವೆ ಆಗಿದ್ದೀಯಾ, ಮದುವೆ ಆಗಿರೋ ಗಂಡಸು, ಗಂಡಸು ತರ ಬದುಕಬೇಕು. ಹೆಂಡತಿ ಮುಂದೆ ತಲೆ ಎತ್ತಿ ನಿಲ್ಲೋ ತರ ಬದುಕಬೇಕು. ನಾನು ಜೂಜು ಆಡಿಸಿದ್ದೀನಿ. ಅದರಿಂದ ಜನ ಸಾಯುತ್ತಾರೆ. ಅವರು ರಕ್ತ ಹರಿಸಿ, ದುಡಿದಿರುವ ಹಣ ಅದು. ಅದನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ದುಡ್ಡಲ್ಲಿ ನಿನಗೆ ನೆಕ್ಲೆಸ್ ತಂದಿದ್ದೀನಿ ಅಂತ ಯಾವ ಮುಖ ಇಟ್ಟುಕೊಂಡು ಹೇಳುತ್ತೀರೊ." ಎಂದು ವಿಡಿಯೋದಲ್ಲಿ ಕಿಡಿಕಾರಿದ್ದಾರೆ.

ಚಂದನ್ ಶೆಟ್ಟಿ ಕುಟುಂಬದ ಬಗ್ಗೆಯೂ ಅಹೋರಾತ್ರ ಕಿಡಿ!

ಚಂದನ್ ಶೆಟ್ಟಿ ಕುಟುಂಬದ ಬಗ್ಗೆಯೂ ಅಹೋರಾತ್ರ ಕಿಡಿ!

"ತಲೆ ಹರಟೆಗಳು ಇದು ಒಳ್ಳೆಯದಲ್ಲ, ಹೇಳಿದಷ್ಟು ಹೆಚ್ಚು ಮಾಡುತ್ತಾ ಇದ್ದೀರಲ್ಲಾ ನೀವು. ಜುಜಾಡಿ ಅಂತ ಕರ್ನಾಟಕದ ಜನರನ್ನು ಹಾಳು ಮಾಡುತ್ತಿದ್ದೀರ ನೀವು. ಜೂಜಾಡಿ ಜೂಜಾಡಿ ಅಂತ ಸಾಯ್ತಾ ಇದ್ದಿರಲ್ಲಾ ನೀವು. ಇದು ಒಳ್ಳೆಯದಲ್ಲ." ಎಂದು ತಮ್ಮ ವಿಡಿಯೋ ಮೂಲಕ ಅಹೋರಾತ್ರ ಕಿಡಿ ಕಾರಿದ್ದಾರೆ. ಇದಕ್ಕೆ ನೆಟ್ಟಿಗರು ಅಹೋರಾತ್ರನನ್ನು ಪ್ರಶ್ನೆ ಮಾಡಿದ್ದಾರೆ.

ಇದ್ದಕ್ಕಿದ್ದ ಹಾಗೆ ವಿಡಿಯೋ ವೈರಲ್!

ಇದ್ದಕ್ಕಿದ್ದ ಹಾಗೆ ವಿಡಿಯೋ ವೈರಲ್!

ಚಂದನ್ ಶೆಟ್ಟಿ ಈ ಹಿಂದೆ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅಹೋರಾತ್ರ ಈ ವಿಡಿಯೋ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈಗ ಯಾಕೆ ಈ ವಿಡಿಯೋ ವೈರಲ್ ಆಗುತ್ತಿದೆ. ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಅಥವಾ ಇದು ಈ ಹಿಂದೆ ಹರಿ ಬಿಟ್ಟಿದ್ದ ವಿಡಿಯೋನಾ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಈ ಬಗ್ಗೆ ಚಂದನ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಧ್ರುವ ಸರ್ಜಾನನ್ನು ಹೊಗಳಿದ ಅಹೋರಾತ್ರ!

ಧ್ರುವ ಸರ್ಜಾನನ್ನು ಹೊಗಳಿದ ಅಹೋರಾತ್ರ!

ಇನ್ನು ವಿಡಿಯೋದಲ್ಲಿ ಮಾತನಾಡುತ್ತಾ ಅಹೋರಾತ್ರ ನಟ ಧ್ರುವ ಸರ್ಜಾ ಬಗ್ಗೆ ಕೂಡ ಮಾತನಾಡಿದ್ದಾರೆ. ಧ್ರುವ ಬಾಡಿ ಬಿಲ್ಡಿಂಗ್ ಬಗ್ಗೆ ಮಾತನಾಡಿದ್ದು, ಪ್ಯಾನ್ ಇಂಡಿಯಾ ಅಲ್ಲ ಇಂಟರ್‌ನ್ಯಾಷನಲ್ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ನಿಮ್ಮ ಗ್ಯಾಂಗ್‌ನಿಂದ ಚಂದನ್ ಶೆಟ್ಟಿಯನ್ನು ಹೊರಹಾಕು ಅಂತಾನೂ ಹೇಳಿದ್ದಾರೆ. ಚಂದನ್ ಶೆಟ್ಟಿ ಬಗ್ಗೆ ಅಹೋರಾತ್ರ ಇದ್ದಕ್ಕಿದ್ದ ಹಾಗೆ ಇಷ್ಟೆಲ್ಲಾ ಟೀಕೆ ಮಾಡಿರೋದ್ಯಾಕೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ.

More from Filmibeat

English summary
Ahoratra, Who Badly Insulted Chandan Shetty in video, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X