Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಇಬ್ಬರು ಶಂಕಿತರ ಸುಳಿವು ಕೊಟ್ಟರೆ ₹20 ಲಕ್ಷ ಬಹುಮಾನ
- Sports RCB VS KKR: ಟಾಸ್ ಗೆದ್ದ ಕೆಕೆಆರ್ ಫೀಲ್ಡೀಂಗ್ ಆಯ್ಕೆ: ಆರ್ಸಿಬಿ ತಂಡದಲ್ಲಿ ಇಲ್ಲ ಬದಲಾವಣೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಐಂದ್ರಿತಾ ರೇ ಕೋಪಕ್ಕೆ ಕಾರಣವಾದ ಹೋಟೆಲ್ ಸಿಬ್ಬಂದಿ.!
ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರ ಹೋಟೆಲ್ ವೊಂದರ ವಿರುದ್ಧ ಬೇಸರ ಮಾಡಿಕೊಂಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದಲ್ಲಿರುವ 'ಟಿಫೆನ್ ಸೆಂಟರ್ ರೆಸ್ಟೋರೆಂಟ್' ವಿರುದ್ಧ ಐಂದ್ರಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಹೋಟೆಲ್ ವಿರುದ್ಧ ಕಿಡಿಕಾರಿರುವ ಐಂದ್ರಿತಾ ಹೋಟೆಲ್ ಗೆ ಹೋಗುವ ಜನರಿಗೆ ಸಿಬ್ಬಂದಿಯವರು ಯಾವುದೇ ರೀತಿಯಲ್ಲಿ ಸಹಕಾರಿಯಾಗುವಂತೆ ವರ್ತಿಸುವುದಿಲ್ಲ. ಉತ್ತಮ ಸೇವೆಯನ್ನ ಒದಗಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾ
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಐಂದ್ರಿತಾ ರೇ ''ಟಿಫೆನ್ ಸೆಂಟರ್ ರೆಸ್ಟೋರೆಂಟ್ ಸಿಬ್ಬಂದಿ ತುಂಬ ಅಸಡ್ಡೆಯ ವರ್ತನೆ ತೋರುತ್ತಾರೆ. ಹಣ ನೀಡಿ ಕಾಯುವಂತಾಗಿದೆ. ಇದರಿಂದ ವಿಮಾನಕ್ಕೂ ತಡವಾಗುತ್ತೆ. ವಿಮಾನಕ್ಕೆ ವಿಳಂಬವಾಗಿದ್ದರೂ ತಿಂಡಿ ನೀಡಲು ತಡ ಮಾಡ್ತಾರೆ. ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ'' ಎಂದು ಆಂಡಿ ಬೇಸರ ವ್ಯಕ್ತಪಡಿಸಿದ್ದಾರೆ.
Extremely rude and arrogant staff at the Tiffin Centre restaurant in the airport mistreating customers who've paid and anxiously wait for their orders b4 boarding a flight ..Disgusted pic.twitter.com/O9WSMsc2IS
— Aindrita Ray (@AindritaR) May 10, 2018
ಅಂದ್ಹಾಗೆ, ಇದು ಯಾವ ವಿಮಾನ ನಿಲ್ದಾಣದಲ್ಲಿ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಹುಶಃ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರಬಹುದು ಎನ್ನಲಾಗಿದೆ. ಯಾಕಂದ್ರೆ, ಬೇರೆ ದೇಶ ಅಥವಾ ರಾಜ್ಯದ ಏರ್ ಪೋರ್ಟ್ ಆಗಿದ್ರೆ ಖಂಡಿತಾ ಹೆಸರು ನಮೂದಿಸುತ್ತಿದ್ದರು.
ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ
ಸದ್ಯ, ಐಂದ್ರಿತಾ ರೇ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿರುವ 'Rambo 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದನ್ನ ಬಿಟ್ಟರೇ ನಟ ದಿಗಂತ್ ಜೊತೆ ಸೇರಿ ಪರಿಸರ ಕಾಳಜಿ ತೋರುವ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.