Just In
- 1 hr ago
ಹಿಂದೂ ಭಾವನೆಗಳಿಗೆ ಧಕ್ಕೆ; ಸೈಫ್ ನಟನೆಯ 'ತಾಂಡವ್' ವೆಬ್ ಸರಣಿ ವಿರುದ್ಧ ಬಿಜೆಪಿ ನಾಯಕರ ದೂರು
- 2 hrs ago
ಕಪಾಳಮೋಕ್ಷ ಆರೋಪ; ನಟ ಮಹೇಶ್ ಮಂಜ್ರೇಕರ್ ವಿರುದ್ಧ ದೂರು ದಾಖಲು
- 3 hrs ago
ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ
- 16 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
Don't Miss!
- News
ಹಿಂದೂ ದೇವತೆಗಳ ಅವಹೇಳನೆ: 'ತಾಂಡವ್' ವಿರುದ್ಧ ಎಫ್ಐಆರ್
- Automobiles
ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಟಾಟಾ ಹೊಸ ಸಫಾರಿ ಎಸ್ಯುವಿ
- Finance
ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ ಪೆಟ್ರೋಲ್: ನಿಮ್ಮ ನಗರದಲ್ಲೆಷ್ಟು?
- Sports
ಐಎಸ್ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ
- Lifestyle
ಅಂಡಾಣು ಶೈತ್ಯೀಕರಣ: ಮಗುವನ್ನು ಪಡೆಯಲು ಈ ವಿಧಾನ ಸುರಕ್ಷಿತವೇ?
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದರ್ಶನ್ ದಂಪತಿ ಕುರಿತು ಶೀಘ್ರವೇ ಒಳ್ಳೆಯ ಸುದ್ದಿ ನೀಡುವೆ' - ಅಂಬರೀಶ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ದಂಪತಿಯ ಕಲಹ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸದ್ಯದಲ್ಲೇ ಪ್ರಕರಣಕ್ಕೆ ಸುಖಾಂತ್ಯ ಹಾಡುವ ಸೂಚನೆ ನೀಡಿದ್ದಾರೆ ರೆಬೆಲ್ ಸ್ಟಾರ್ ಅಂಬರೀಶ್.
ಇಂದು ನಟ ದರ್ಶನ್ ಜೊತೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ 'ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುವೆ' ಅಂತ ಅಂಬರೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. [ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್]
ಮೊದಲು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಎಸಿಪಿ ಕಛೇರಿಗೆ ಭೇಟಿ ಕೊಟ್ಟು, ಮೊನ್ನೆ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ ಮೆಂಟ್ ನಲ್ಲಿ ಆದ ಗಲಾಟೆ ಬಗ್ಗೆ ಪೊಲೀಸರಿಗೆ ವಿವರಣೆ ನೀಡಿದ ನಟ ದರ್ಶನ್, ಬಳಿಕ ಅಲ್ಲಿಂದ ನೇರವಾಗಿ ಜೆ.ಪಿ.ನಗರದಲ್ಲಿರುವ ಅಂಬರೀಶ್ ಮನೆ ಕಡೆಗೆ ನಡೆದರು. ಮುಂದೆ ಓದಿ...[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

'ಅಪ್ಪಾಜಿ' ಆಶೀರ್ವಾದ ಪಡೆದ ನಟ ದರ್ಶನ್
ಅಂಬರೀಶ್ ರನ್ನ 'ಅಪ್ಪಾಜಿ' ಅಂತ ಕರೆಯುವ ನಟ ದರ್ಶನ್, ಪೊಲೀಸರ ವಿಚಾರಣೆ ಬಳಿಕ ನೇರವಾಗಿ ಅಂಬರೀಶ್ ಮನೆಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆದರು. ['ಇನ್ಮುಂದೆ ಪತ್ನಿ ಜೊತೆ ಗಲಾಟೆ ಮಾಡಲ್ಲ' ಎಂದ ನಟ ದರ್ಶನ್]

ಅಂಬಿ ಜೊತೆ ಚರ್ಚೆ
ತಮ್ಮ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್ ಜೊತೆ ದರ್ಶನ್ ಚರ್ಚೆ ನಡೆಸಿದರು. ಇದೇ ವೇಳೆ ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ಹಾಜರಿದ್ದರು. [ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್]

ಮಾಧ್ಯಮಗಳ ಜೊತೆ ಮಾತನಾಡದ ನಟ ದರ್ಶನ್
ಅಂಬರೀಶ್ ಜೊತೆ ಮಾತುಕತೆ ನಡೆಸಿದ ಬಳಿಕ ದರ್ಶನ್ ಸೀದಾ ತಮ್ಮ ಕಾರು ಕತ್ತಿ ಹೊರಟರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

ಅಂಬರೀಶ್ ಏನಂದರು?
''ದರ್ಶನ್ ಕಡೆಯಿಂದ ಸಂಪೂರ್ಣ ಮಾಹಿತಿ ಕಲೆಹಾಕಿರುವೆ. ವಿಜಯಲಕ್ಷ್ಮಿ ಕಡೆಯಿಂದ ಮಾಹಿತಿ ಪಡೆಯುವೆ. ಅವರ ತಪ್ಪುಗಳು ಅವರಿಗೆ ಅರ್ಥವಾಗಿದೆ. ಎಲ್ಲವೂ ಸುಖಾಂತ್ಯ ಕಾಣುತ್ತೆ. ಅವರು ಚೆನ್ನಾಗಿರಲಿ ಅನ್ನೋದೇ ನಮ್ಮ ಹಾರೈಕೆ. ಪಾಸ್ಟ್ ಈಸ್ ಪಾಸ್ಟ್. ಶೀಘ್ರವೇ ಒಳ್ಳೆ ಸುದ್ದಿ ನೀಡುವೆ'' ಅಂತ ಅಂಬರೀಶ್, ದರ್ಶನ್ ಜೊತೆಗಿನ ಚರ್ಚೆ ಬಳಿಕ ಮಾಧ್ಯಮಗಳಿಗೆ ತಿಳಿಸಿದರು. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ನಿರ್ಮಾಪಕ ಸಂದೇಶ್ ನಾಗರಾಜ್ ಏನಂತಾರೆ?
''ಇವತ್ತು ಚರ್ಚೆ ಮಾಡಿದಾಗ ದರ್ಶನ್ ಹೇಳಿದ್ದಾರೆ, 'ನನಗೂ ವಿಜಯಲಕ್ಷ್ಮಿಗೂ ಯಾವುದೇ ಸಮಸ್ಯೆ ಇಲ್ಲ. ಬೆಳಗ್ಗೆ ಕೂಡ ಚೆನ್ನಾಗಿ ಮಾತನಾಡಿದ್ದೇವೆ. ನೀವು ಹೇಗೆ ಹೇಳ್ತೀರೋ ಹಾಗೇ ಕೇಳ್ತೀನಿ' ಅಂತ. ಆದ್ದರಿಂದ ಪ್ರಕರಣ ಸುಖಾಂತ್ಯದಲ್ಲಿ ಮುಕ್ತಾಯ ಆಗಲಿದೆ. ಮಗು ಬಿಡುವುದಕ್ಕೆ ಇಬ್ರೂ ರೆಡಿಯಿಲ್ಲ. ಹೀಗಾಗಿ ಎಲ್ಲವೂ ಶುಭಾಂತ್ಯವಾಗಲಿದೆ'' ಅಂತಾರೆ ನಿರ್ಮಾಪಕ ಸಂದೇಶ್ ನಾಗರಾಜ್. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಅಂಬರೀಶ್ ಮನೆ ಮುಂದೆ ಜನಸ್ತೋಮ
ಅಂಬರೀಶ್ ಮನೆಗೆ ದರ್ಶನ್ ಭೇಟಿ ಕೊಡುತ್ತಾರೆ ಅಂತ ತಿಳಿಯುತ್ತಿದ್ದ ಕೂಡಲೆ, ಜೆ.ಪಿ.ನಗರದಲ್ಲಿರುವ ಅಂಬರೀಶ್ ಮನೆ ಮುಂದೆ ಜನ ಜಮಾಯಿಸಿದ ಪರಿ ಇದು. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ಮನೆ ಮೇಲೂ ಜನ!
ಅಂಬರೀಶ್ ರವರ ಮನೆಯ ಅಕ್ಕ-ಪಕ್ಕದಲ್ಲೂ ಜನರು ತುಂಬಿ ತುಳುಕುತ್ತಿದ್ದರು. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

ಎಲ್ಲರಿಗೂ ಒಂದೇ ಆಸೆ
ಹಿಂದಿನಂತೆ ದರ್ಶನ್ ದಂಪತಿ ಒಂದಾಗಿ ಸುಖ ಸಂಸಾರ ನಡೆಸಲಿ ಅನ್ನೋದು ಎಲ್ಲಾ ಅಭಿಮಾನಿಗಳ ಹಾರೈಕೆ.