Don't Miss!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- News ಬೆಂಗಳೂರಿನಲ್ಲಿ ಖಾಲಿ ಚೊಂಬು ಹಿಡಿದು ಕಾಂಗ್ರೆಸ್ ಪ್ರತಿಭಟನೆ
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವರನಾಡಿನತ್ತ ಅಂಬಿ ಪ್ರಯಾಣ, ಏನಿದರ ಕಾರಣ?
Recommended Video
ರೆಬಲ್ ಸ್ಟಾರ್ ಅಂಬರೀಶ್. ಸದ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದುಕೊಂಡು ಆರಾಮಾಗಿ ಸ್ನೇಹಿತರ ಮನೆಗೆ ಭೇಟಿ ನೀಡುತ್ತಾ. ಆಪ್ತರನ್ನು ಮನೆಗೆ ಕರೆಸಿಕೊಂಡು ಔತಣ ಕೊಟ್ಟು ಕುಟುಂಬದ ಜೊತೆಯಲ್ಲಿ ಸಮಯ ಕಳೆಯುತ್ತಿದ್ದಾರೆ.
ಇವುಗಳ ಜೊತೆಯಲ್ಲಿ ಮಗನ ಸಿನಿಮಾಗಾಗಿ ಬೇಕಿರುವ ಎಲ್ಲಾ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅಂಬರೀಶ್ ದೇವರನಾಡಿನತ್ತ ಪ್ರಯಾಣ ಬೆಳೆಸಿದ್ದಾರಂತೆ. ಅರೆ ದೇವರ ನಾಡು ಅಂದರೆ ಯಾವುದು ಎಂದು ತಲೆ ಕೆಡಿಸಿಕೊಳ್ಳಬೇಡಿ.
ಅಂಬಿ ಪ್ರಯಾಣ ಬೆಳೆಸಿರುವ ದೇವರ ನಾಡು ಕೇರಳ. ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರತಂಡ ಸಿನಿಮಾದ ಕೊನೆಹಂತದ ಚಿತ್ರೀಕರಣಕ್ಕಾಗಿ ಕೇರಳಾಗೆ ಇಂದು ಪ್ರಯಾಣ ಬೆಳೆಸಿದೆ.
ಫೋಟೋ ಶೂಟ್ ಮುಗಿಸಿದ ಅಭಿಷೇಕ್ : ಅಂಬಿ ಬರ್ತ್ ಡೇಗೆ ಚಿತ್ರ ಲಾಂಚ್
ಅಂಬರೀಶ್ ಹಾಗೂ ಸುಹಾಸಿನಿ ಅಭಿನಯದ ಹಾಡಿನ ಚಿತ್ರೀಕರಣ ಕೇರಳದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಸಿನಿಮಾತಂಡ ನಿರ್ಧರಿಸಿದ್ದು ನಿರ್ಮಾಪಕ ಜಾಕ್ ಮಂಜು, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅಂಬರೀಶ್ ಮುಂಜಾನೆಯೇ ವಿಮಾನ ಏರಿದ್ದಾರೆ.
ನವ ನಿರ್ದೇಶಕ ಗುರುದತ್ ಗಾಣಿಗ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಅಂಬರೀಶ್, ಸುಹಾಸಿನಿ, ಸೇರಿದಂತೆ ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.