twitter
    For Quick Alerts
    ALLOW NOTIFICATIONS  
    For Daily Alerts

    'ಗುಜರಾತ್ ಮಾದರಿ'ಗಾಗಿ ಸಿಎಂ ಗೆ ಮನವಿ ಮಾಡಿದ ನಟ ಅನಿರುದ್ಧ

    |

    ನಟ ಅನಿರುದ್ಧ, ನಟನೆಯ ಜೊತೆಗೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣ ಬಳಸಿಕೊಂಡು ಸ್ಥಳೀಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕಾರ್ಯವನ್ನೂ ಮಾಡುತ್ತಿದ್ದಾರೆ.

    ಇದೀಗ ನಟ ಅನಿರುದ್ಧ ಅವರು, ಸಾಮಾಜಿಕ ಜಾಲತಾಣ ಮೂಲಕ ಸಿಎಂ ಯಡಿಯೂರಪ್ಪ ಬಳಿ ಮನವಿಯೊಂದನ್ನು ಮಾಡಿದ್ದಾರೆ.

    'ನಮ್ಮ ರಾಜ್ಯದಲ್ಲಿನ ತೆರೆದ ಕಾಲುವೆಗಳನ್ನ ಸೌರ ಫಲಕಗಳಿಂದ ಮುಚ್ಚಿ ಗುಜರಾತ್‌ ಮಾದರಿಯ ವಿದ್ಯುತ್ಚಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಿಸಬಹುದು ಮತ್ತು ಏರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್‌ ಗಾರ್ಡನಿಂಗ್‌ ಮಾಡಬಹುದು' ಎಂಬ ಸಲಹೆ ನೀಡಿದ್ದಾರೆ ಅನಿರುದ್ಧ.

    Anirudh Request To CM Yediyurappa For Gujarat Model Canal Top Solar PV Plant

    ದೊಡ್ಡ ನೀರಿನ ಕಾಲುವೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿದಲ್ಲಿ, ಕಾಲುವೆಗಳನ್ನು ಮುಚ್ಚಿದಂತೆ ಆಗುವ ಜೊತೆಗೆ ವಿದ್ಯುಚ್ಛಕ್ತಿ ಉತ್ಪಾದನೆಯೂ ಆಗುತ್ತದೆ. ವಿಜಯ್ ರೂಪಾಣಿ ಸಿಎಂ ಆಗಿರುವ ಗುಜರಾತ್ ರಾಜ್ಯದಲ್ಲಿ ಈಗಾಗಲೇ ಈ ಕಾರ್ಯವನ್ನು ಪ್ರಾರಂಭಿಸಲಾಗಿದೆ.

    Recommended Video

    ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲಂಸ್ | Filmibaet Kannada

    ಇದು ಮಾತ್ರವಲ್ಲದೆ, ಕಸ ತುಂಬಿಕೊಂಡ ರಸ್ತೆಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಬಿಬಿಎಂಪಿ ಗಮನ ಕೊಡುವಂತೆ ಆಗ್ರಹಿಸುತ್ತಿರುತ್ತಾರೆ ಅನಿರುದ್ಧ. ಬೇರೆ ಎಲ್ಲೆಡೆಯೇ ಕಸ ಬಿದ್ದ ದೃಶ್ಯಗಳನ್ನು ಕಂಡುಬಂದರೆ ಅದರ ಚಿತ್ರವನ್ನು ಹಂಚಿಕೊಂಡು ಸಂಬಂಧಪಟ್ಟವರನ್ನು ಸ್ವಚ್ಚತೆಗಾಗಿ ಆಗ್ರಹಿಸೋಣ ಎಂದು ಕರೆ ಸಹ ನೀಡಿದ್ದಾರೆ.

    English summary
    Actor Anirudh request CM Yediyurappa to build Gujarat model canal top solar pv plant.
    Friday, January 1, 2021, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X