Don't Miss!
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಅಖಾಡಕ್ಕೆ
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಡಿದ ಮತ್ತಿನಲ್ಲಿ ರಾಗಿಣಿಗೆ ಉಮೇಶ್ ಎಸ್ಎಂಎಸ್
ನಟಿ ರಾಗಿಣಿ ಅವರಿಗೆ ಅಶ್ಲೀಲ ಎಸ್ಎಂಎಸ್ ಕಳುಹಿಸಿ ಸಿಕ್ಕಿಬಿದ್ದಿದ್ದ ಸಹಾಯಕ ನಿರ್ದೇಶಕ ಉಮೇಶ್ ಕ್ಷಮೆಯಾಚಿಸಿದ್ದಾನೆ. ಕುಡಿದ ಮತ್ತಿನಲ್ಲಿ ಈ ತಪ್ಪಾಯಿತು ಎಂದು ಚಲನಚಿತ್ರ ವಾಣಿಜ್ಯ ಮoಡಳಿ ಅಧ್ಯಕ್ಷ ಬಿ.ವಿಜಯಕುಮಾರ್, ರಾಗಿಣಿ ಹಾಗೂ ಇತರೆ ಪದಾಧಿಕಾರಿಗಳ ಸಮ್ಮುಖದಲ್ಲಿ ಕ್ಷಮೆಯಾಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಮೇಶ್ ವಿರುದ್ಧ ಫಿಲಂ ಚೇಂಬರ್ ನಾಲ್ಕು ತಿಂಗಳು ಕಾಲ ಚಿತ್ರರಂಗದಿಂದ ನಿಷೇಧ ಹೇರಿದೆ. ನಾಲ್ಕು ತಿಂಗಳ ಕಾಲ ಉಮೇಶ್ ಅವರಿಗೆ ಚಿತ್ರರಂಗದಲ್ಲಿ ಯಾರೂ ಕೆಲಸ ಕೊಡಬಾರದು ಎಂದು ಆದೇಶಿಸಿದೆ.
ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ನಟಿ ರಾಗಿಣಿ, "ಪೊಲೀಸರು ಹಾಗೂ ವಾಣಿಜ್ಯ ಮಂಡಳಿ ಉಮೇಶ್ ವಿರುದ್ಧ ತಕ್ಷಣ ಕ್ರಮಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಯಾವುದೇ ಹೆಣ್ಣುಮಕ್ಕಳಿಗೂ ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ಈ ದಿಟ್ಟ ನಿಲುವು ಕೈಗೊಂಡೆ" ಎಂದರು.
ಉಮೇಶ್ ಅವರು ಪ್ರೀತಂ ಗುಬ್ಬಿ, ಆನಂದ್ ಪಿ ರಾಜು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವುದಾಗಿ ತಿಳಿಸಿದ್ದರು. ಈತ ರಾತ್ರಿ 11.30 ರಿಂದ 2.13ರ ಸಮಯದಲ್ಲಿ ರಾಗಿಣಿ ಅವರ ತಾಯಿಗೆ ಪದೇ ಪದೇ ಕರೆ ಮಾಡಿ ತಾನು ಸಹಾಯಕ ನಿರ್ದೇಶಕ ಎಂದು ಹೇಳಿಕೊಂಡು ಅಶ್ಲೀಲವಾಗಿ ಮಾತನಾಡಿ ಕಿರಿಕಿರಿ ಮಾಡುತ್ತಿದ್ದ ಎಂದು ರಾಗಿಣಿ ಆರೋಪಿಸಿದ್ದರು. (ಏಜೆನ್ಸೀಸ್)