ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ತೆಲುಗು ನಟ ಬಾಲಕೃಷ್ಣ
ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ನಿನ್ನೆ (ಆಗಸ್ಟ್ 16) ಆಂಧ್ರ ಪ್ರದೇಶದ ನಂದ್ಯಾಳ್ ದಲ್ಲಿ ನಡೆದಿದೆ.
ನಂದ್ಯಾಳ್ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣಾ ಪ್ರಚಾರದ ವೇಳೆ ಟಿಡಿಪಿ ಅಭ್ಯರ್ಥಿ ಪರ ಮತಯಾಚನೆಗೆ ಬಂದಿದ್ದ ನಟ ಬಾಲಕೃಷ್ಣರ ಬಳಿ, ಬಂದ ಅಭಿಮಾನಿಯೊಬ್ಬರು ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ರೊಚ್ಚಿಗೆದ್ದ ಬಾಲಕೃಷ್ಣ, ಸಾರ್ವಜನಿಕವಾಗಿ ಆ ಅಭಿಮಾನಿಗೆ ಕಪಾಳಕ್ಕೆ ಹೊಡೆದು ಮುಂದೆ ಸಾಗಿದ್ದಾರೆ.

ಬಾಲಕೃಷ್ಣ ಅವರು ಅಭಿಮಾನಿಗಳ ಮೇಲೆ ಈ ರೀತಿ ವರ್ತನೆ ಮಾಡಿರುವುದು ಇದೇ ಮೊದಲಲ್ಲ. ಇದಕ್ಕು ಮುಂಚೆ ಅನೇಕ ಬಾರಿ ಇಂತಹ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಚಿತ್ರೀಕರಣ ವೇಳೆ ತಮ್ಮ ಸಹಾಯಕ, ಕಾಲಿಗೆ ಸರಿಯಾಗಿ ಚಪ್ಪಲಿ ಹಾಕಿಲ್ಲವೆಂಬ ಕಾರಣಕ್ಕೆ ತಲೆಯ ಮೇಲೆ ಹೊಡೆದು ಟೀಕೆಗೆ ಗುರಿಯಾಗಿದ್ದರು. ಅದಕ್ಕೂ ಮುಂಚೆ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ವೇಳೆಯೂ ಕೂಡ ಅಭಿಮಾನಿಯೊಬ್ಬರನ್ನ ಹೊಡೆಯಲು ಮುಂದಾಗಿದ್ದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.


Click it and Unblock the Notifications











