Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಜೊತೆ ಸುಗ್ರಾಸಭೋಜನಕ್ಕೆ ಸುವರ್ಣಾವಕಾಶ
ತಮ್ಮ ನೆಚ್ಚಿನ ತಾರೆಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ಅವರ ಹಸ್ತಾಕ್ಷರ ಪಡೆಯುವುದು, ಕೈಕುಲುಕುವುದು, ಸಾಧ್ಯವಾದರೆ ಒಂದು ಹಾಯ್ ಹೇಳುವುದು ಅಭಿಮಾನಿಗಳ ಪಾಲಿಗೆ ಮರೆಯಲಾಗದ ಸಂಭ್ರಮದ ಕ್ಷಣಗಳು. ಆದರೆ ತಾರೆಗಳ ಜೊತೆ ಎಂದಾದರೂ ಸುಗ್ರಾಸಭೋಜನ ಸವಿದಿದ್ದೀರಾ?
ಈ ರೀತಿಯ ಸುವರ್ಣಾವಕಾಶವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ timescity.com ಒದಗಿಸುತ್ತಿದೆ. ಕೇವಲ ಪುನೀತ್ ಜೊತೆ ಭೋಜನ ಮಾಡುವುದಷ್ಟೇ ಅಲ್ಲ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಬಹುದು, ಹಸ್ತಾಕ್ಷರ ಪಡೆಯಬಹುದು, ಹರಟೆ ಹೊಡೆಯಬಹುದು.
ಸುಮಾರು ಆರು ಮಂದಿಯ ಬಿಡ್ಡರ್ಸ್ ಗ್ರೂಪ್ ಜೊತೆ ಪುನೀತ್ ಮಾತನಾಡುತ್ತಾರೆ. ಅಂತಿಮವಾಗಿ ಗೆದ್ದವರಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಅವರು ಪುನೀತ್ ಜೊತೆ ಊಟ ಮಾಡಿ, ಫೋಟೋ ಕ್ಲಿಕ್ಕಿಸಿ, ಹಸ್ತಾಕ್ಷರ ಪಡೆಯಬಹುದು. ಜೊತೆಗೆ ಪುನೀತ್ ಅವರ ಮರೆಯಲಾಗದ ಅನುಭವಗಳನ್ನು, ಅವರ ವೃತ್ತಿಜೀವನದ ಏರಿಳಿತಗಳನ್ನು, ತಮಾಷೆ ಪ್ರಸಂಗಗಳನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳಬಹುದು.
ಇದಿಷ್ಟನ್ನು ಪುನೀತ್ ಅವರು ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಬೆಂಗಳೂರು ಕೇರ್ಸ್ ಎಂಬ ಸರ್ಕಾರೇತರ ಸಂಸ್ಥೆಗೆ ನಿಧಿ ಸಂಗ್ರಹಿಸುವ ಸಲುವಾಗಿ ಅದರೊಂದಿಗೆ ಕೈಜೋಡಿಸುತ್ತಿದ್ದಾರೆ. ಅಕ್ಟೋಬರ್ 2ರಿಂದ ಬಿಡ್ಡಿಂಗ್ ಆರಂಭವಾಗಿದ್ದು ಅಕ್ಟೋಬರ್ 7, 2013ರವರೆಗೆ ಇರುತ್ತದೆ. (ಒನ್ಇಂಡಿಯಾ ಕನ್ನಡ)