twitter
    For Quick Alerts
    ALLOW NOTIFICATIONS  
    For Daily Alerts

    ಸದ್ಯದಲ್ಲೆ ನಿರ್ಮಾಣವಾಗಲಿದೆ ಪುನೀತ್ ರಾಜ್‌ಕುಮಾರ್ ಪ್ರತಿಮೆ

    |

    ಖ್ಯಾತ ನಟ ಪುನೀತ್‌ರಾಜ್ ಕುಮಾರ್ ನಿಧನದಿಂದಾಗಿ ಸಾಕಷ್ಟು ಕಡೆಗಳಲ್ಲಿ ಇದೀಗ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅಭಿಮಾನಿಗಳು ವಿಭಿನ್ನವಾಗಿ ಪುನೀತ್‌ರನ್ನು ಸ್ಮರಣೆ ಮಾಡುತ್ತಿದ್ದಾರೆ. ನೆಚ್ಚಿನ ನಟನನ್ನು ಕಳೆದುಕೊಂಡಿರುವ ದುಃಖ ಒಂದು ಕಡೆಯಾದರೆ, ನಟನಿಗಾಗಿ ನಾವೇನು ಮಾಡಬೇಕು, ಅವರ ಆದರ್ಶಗಳನ್ನು ಹೇಗೆ ಅನುಸರಿಸಬೇಕು, ಅವರ ಸ್ಮರಣಾರ್ಥಕ್ಕಾಗಿ ಏನು ಮಾಡೋದು ಎಂದೆಲ್ಲಾ ಚಿಂತಿಸಲಾಗುತ್ತೆ. ಇದೀಗ ಪುನೀತ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದಿದೆ ಕಾದಿದೆ. ಆದಷ್ಟು ಬೇಗ ಬೆಂಗಳೂರಿನಲ್ಲಿ ಪುನೀತ್ ಪ್ರತಿಮೆ ತಲೆ ಎತ್ತಲಿದೆ.

    ಹೌದು, ಪುನೀತ್ ಪ್ರತಿಮೆ ನಿರ್ಮಾಣ ಅಂದುಕೊಂಡಂತೆ ಆದರೆ ಆದಷ್ಟು ಬೇಗ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗ ಪ್ರಯತ್ನ ಮಾಡುತ್ತಿರುವವರು ಬಿಬಿಎಂಪಿ ನೌಕರರು. ಪುನೀತ್ ಪ್ರತಿಮೆ ನಿರ್ಮಿಸುವಂತೆ ಸರ್ಕಾರಕ್ಕೆ ಬೇಡಿಕ್ಕೆ ಇಟ್ಟಿದ್ದಾರೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಸಿರ್ಮಿಸುವಂತೆ ಬೇಡಿಕೆ ಇಡಲಾಗಿದ್ದು, ಈ ತಿಂಗಳಲ್ಲೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಡಾ ರಾಜ್ ಪ್ರತಿಮೆಯ ಪಕ್ಕದಲ್ಲೆ ಪುನೀತ್ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲು ಮನವಿ ಮಾಡಲಾಗಿದೆ.

    ಬಿಬಿಎಂಪಿ ಆಯುಕ್ತರು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟರೇ, ಆದಷ್ಟು ಬೇಗ ಪ್ರತಿಮೆ ನಿರ್ಮಾಣ ಮಾಡಲು ಬಿಬಿಎಂಪಿ ನೌಕರರು ಮುಂದಾಗಿದ್ದಾರೆ. ಸ್ವಂತ ಖರ್ಚಿನಲ್ಲಿಯೇ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಮಾಡುತ್ತೇವೆ ಎಂದು ಕನ್ನಡ ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದ್ದಾರೆ.

    BBMP to install Puneeth Rajkumars statue at their Head Office premises

    ಬಿಬಿಎಂಪಿ ನೌಕರರ ಸಂಘ ಪುನೀತ್ ಪುತ್ಥಳಿಗೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಆಯುಕ್ತ ಗೌರವ್ ಗುಪ್ತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗೇ ಬಿಬಿಎಂಪಿ ಆವರಣದಲ್ಲಿ ಡಾ ರಾಜ್‌ಕುಮಾರ್ ಪ್ರತಿಮೆ ಪಕ್ಕದಲ್ಲೆ ಪುನೀತ್ ಕಂಚಿನ ಪ್ರತಿಮೆ ಸ್ಥಾಪಿಸುವ ಬಗ್ಗೆ ತೀರ್ಮಾಣ ಕೈಗೊಳ್ಳುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ಪ್ರತಿಮೆ ನಿರ್ಮಾಣಕ್ಕೆ ತಯಾರಿ ನಡೆಸುವ ಬಗ್ಗೆ ಪರೀಶೀಲನೆ ಮಾಡುವ ಬಗ್ಗೆ ಗೌರವ್ ಗುಪ್ತಾ ಭರವಸೆ ನೀಡಿದ್ದಾರೆ.

    ಈ ಹಿಂದೆ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರೀ ನೀಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ರು. ಈಗ ಬಿಬಿಎಂಪಿ ನೌಕರರ ಸಂಘ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದ್ದು, ಬಿಬಿಎಂಪಿ ಕಡೆಯಿಂದ ಗ್ರೀನ್ ಸಿಗ್ನಲ್‌ಗೆ ಕಾಯುತ್ತಿದ್ದಾರೆ. ಒಂದು ತಿಂಗಳಿನಲ್ಲಿ ಪುನೀತ್ ಪ್ರತಿಮೆ ಮಾಡಿ ಈ ಮೂಲಕ ನಟಸಾರ್ವಭೌಮನಿಗೆ ಗೌರವ ಸಲ್ಲಿಕೆಗೆ ಮುಂದಾಗಿದ್ದಾರೆ.

    ಪುನೀತ್ ನಿಧನದ ಬಳಿಕ ಸಾಕಷ್ಟು ಅಭಿಮಾನಿಗಳು ದುಃಖ ತಪ್ತರಾಗಿದ್ದಾರೆ. ಹಿರಿಯರಿಂದ ಹಿಡಿದು ಕಿರಿಯರ ವರೆಗೂ ಪುನೀತ್ ಅವರನ್ನು ಕಳೆದುಕೊಂಡು ಬೇಸರಗೊಂಡಿದ್ದಾರೆ. ಹೀಗಾಗಿ ಪುನೀತ್ ಅವರ ಸ್ಮರಣಿಕೆಗೆ ಏನೇನು ಮಾಡಬೇಕು, ನಮ್ಮ ಕೈಯಿಂದ ಏನು ಮಾಡಬಹುದು ಎಂದು ಚಿಂತಿಸುತ್ತಿರುವ ಅಭಿಮಾನಿಗಳು ಒಂದೊಂದೆ ಪ್ರಯತ್ನವನ್ನು ಮಾಡುತ್ತಿದ್ದಾರೆ.

    ಕುಟುಂಬ ಸದಸ್ಯರು ಕೂಡ ಪುನೀತ್ ನಿಧನದ 5ನೇ ದಿನ ಹಾಲು ತುಪ್ಪ ಕಾರ್ಯವನ್ನು ನೆರವೇರಿಸಿದ್ದಾರೆ. ಕಂಠೀರವ ಸ್ಟುಡಿಯೋನಲ್ಲಿ ಅಪ್ಪುವಿನ ಸಮಾಧಿಗೆ ತೆರಳಿದ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು, ಆಪ್ತರು, ಗೆಳೆಯರು ಪುನೀತ್ ಸಮಾಧಿಗೆ ಹಾಲು-ತುಪ್ಪ ಹೊಯ್ದರು. ಪುನೀತ್ ಮಾವ ಗೋವಿಂದ ರಾಜು ಮುಂದಾಳತ್ವದಲ್ಲಿ ಹಾಲು-ತುಪ್ಪ ಕಾರ್ಯ ನೆರವೇರಿಸಿದ್ದು ಪುನೀತ್ ಪತ್ನಿ ಅಶ್ವಿನಿ, ಮಕ್ಕಳು, ಶಿವಣ್ಣ, ರಾಘವೇಂದ್ರ ರಾಜ್‌ಕುಮಾರ್, ಅವರ ಮಕ್ಕಳು, ಪಾರ್ವತಮ್ಮ ರಾಜ್‌ಕುಮಾರ್ ತಮ್ಮ ಚಿನ್ನೇಗೌಡ ಅವರ ಮಕ್ಕಳಾದ ಶ್ರೀಮುರಳಿ, ವಿಜಯ ರಾಘವೇಂದ್ರ, ಗಣ್ಯರಾದ ಸಚಿವ ಗೋಪಾಲಯ್ಯ, ಚಿತ್ರರಂಗದ ಮುಖಂಡ ಸಾ.ರಾ.ಗೋವಿಂದು, ಪುನೀತ್ ರಾಜ್‌ಕುಮಾರ್ ಗೆಳೆಯರು ಇನ್ನೂ ಕೆಲವು ಚಿತ್ರರಂಗದ ಸೆಲೆಬ್ರಿಟಿಗಳು ಹಾಲು ತುಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    English summary
    BBMP to install bronze statue of Puneeth Rajkumar next to Dr Rajkumar, it will be built at the expense of the Kannada Sangha, the statue will be installed in two months.
    Wednesday, November 3, 2021, 10:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X