'ನಟ ಸಾರ್ವಭೌಮ' ಪೋಸ್ಟರ್ ಗೆ ಬಿಯರ್ ಅಭಿಷೇಕ: ಪುನೀತ್ ಏನಂತಾರೆ.?
Recommended Video

ನೆಚ್ಚಿನ ನಟನ ಚಿತ್ರ ಬಿಡುಗಡೆಯಾದಾಗ, ಆ ಚಿತ್ರದ ಪೋಸ್ಟರ್ ಗೆ ಬೃಹತ್ ಹೂವಿನ ಹಾರ ಹಾಕುವುದು, ಹೂವಿನ ಅಭಿಷೇಕ ಮಾಡುವುದು, ಹಾಲಿನ ಅಭಿಷೇಕ ಮಾಡುವುದು ಕಾಮನ್. ಆದ್ರೆ, ಅಪ್ಪು ಅಭಿಮಾನಿಯೊಬ್ಬ ಎಲ್ಲಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ 'ನಟ ಸಾರ್ವಭೌಮ'ನ ಪೋಸ್ಟರ್ ಗೆ ಬಿಯರ್ ಅಭಿಷೇಕ ಮಾಡಿದ್ದ.
ಹೌದು, ಫೆಬ್ರವರಿ 7 ರಂದು ಗ್ರ್ಯಾಂಡ್ ರಿಲೀಸ್ ಆದ 'ನಟ ಸಾರ್ವಭೌಮ' ಚಿತ್ರದ ಪೋಸ್ಟರ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ ಬಿಯರ್ ಅಭಿಷೇಕ ಮಾಡಿದ್ದ. ಅದು ಮೆಜೆಸ್ಟಿಕ್ ನ ತ್ರಿವೇಣಿ ಚಿತ್ರಮಂದಿರದಲ್ಲೇ.!
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಪುನೀತ್ ರಾಜ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

''ಬಿಯರ್ ಅಭಿಷೇಕ ಮಾಡುವುದು ಬೇಡ. ಸಿನಿಮಾದಲ್ಲಿ ನಾವು ಏನೇನೋ ಮಾಡುತ್ತೇವೆ. ಅದನ್ನೆಲ್ಲ ನಿಜ ಜೀವನದಲ್ಲಿ ಮಾಡಲು ಸಾಧ್ಯವೇ.? ಸಮಾಜಕ್ಕೆ ನೀಡುವ ಒಳ್ಳೆಯ ಸಂದೇಶಗಳನ್ನು ಮಾತ್ರ ಸ್ವೀಕರಿಸಿ'' ಎಂದು ತಮ್ಮ ಅಭಿಮಾನಿಗಳಲ್ಲಿ ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ.
ಅಂದ್ಹಾಗೆ, ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸರೋಜ ದೇವಿ, ಚಿಕ್ಕಣ್ಣ, ರವಿಶಂಕರ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











