Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಎ' ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಹೊಸ ಸಾಹಸ ಉಪ್ಪಿ 50
'ಎ' ಚಿತ್ರದ ನಿರ್ಮಾಪಕ ಬಿಜಿ ಮಂಜುನಾಥ್ ಅಲಿಯಾಸ್ ಸಿಲ್ಕ್ ಮಂಜು ಅವರು ಮತ್ತೊಮ್ಮೆ ಭರ್ಜರಿ ಚಿತ್ರದೊಂದಿಗೆ ಗಾಂಧಿನಗರದಲ್ಲಿ ಕಾಲಿಡುತ್ತಿದ್ದಾರೆ. ಉಪ್ಪಿ ಅಭಿನಯದ 50ನೇ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಸುಮಾರು 18 ವರ್ಷಗಳ ಹಿಂದೆ 25 ಕೋಟಿಗೂ ಮೀರಿ ಹಣ ಮಾಡಿದ ಐತಿಹಾಸಿಕ 'ಎ' ಚಿತ್ರದ ನಿರ್ಮಾಪಕ ಬಿ.ಜಿ ಮಂಜುನಾಥ್ ಅಲಿಯಾಸ್ ಸಿಲ್ಕ್ ಮಂಜು ಅವರು ಮತ್ತೊಮ್ಮೆ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ, ಉಪೇಂದ್ರ ಅವರ 50ನೇ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ.
20 ಸಿನಿಮಾ ಮಂದಿರಗಳಲ್ಲಿ ರಜತೋತ್ಸವ ಆಚರಿಸಿದ, ಉಪೇಂದ್ರರನ್ನು ಸೂಪರ್ ಸ್ಟಾರ್ ಮಟ್ಟಕ್ಕೆ ಏರಿಸಿ, ಅವರಿಗೆ ರಾಜ್ಯ ಶ್ರೇಷ್ಟ ನಟ ಪ್ರಶಸ್ತಿ ಬರಲು ಕಾರಣರಾದ ಹಾಗೂ ಪ್ರೀತಿಯಿಂದ 'ಸಿಲ್ಕ್ ಮಂಜು' ಎಂದು ಕರೆಯಲ್ಪಡುವ ಬಿಜಿ ಮಂಜುನಾಥ್ ಅವರು ಯಶಸ್ಸಿನಿಂದ ದೂರಸರಿದಿದ್ದರು. ಚಿತ್ರದ ವಿತರಣೆ ಹಕ್ಕನ್ನು ಕೂಡಾ ಮಾರಾಟ ಮಾಡಿ ಅಚ್ಚರಿ ಮೂಡಿಸಿದ್ದರು.
'ಎ' ಮೂಲಕ ಗುರುಕಿರಣ್ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಮಾಡಿ, ಅವರೂ ಸಹ ಪ್ರಶಸ್ತಿ ಗಿಟ್ಟಿಸಿಕೊಂಡರು. ವೇಣು ಛಾಯಾಗ್ರಾಹಕರಾಗಿ ಮೊದಲ ಬಾರಿ ಪಾದಾರ್ಪಣೆ ಮಾಡಿ ಚಿತ್ರರಸಿಕರ ಮನಸೂರೆಗೊಂಡು ತೆಲುಗು ಹಾಗೂ ತಮಿಳು ಭಾಗಳಲ್ಲೂ ಈ ಚಿತ್ರ ನಿರ್ಮಾಣವಾಯಿತು.
1998ರಲ್ಲಿ ಬಿಡುಗಡೆಯಾದ 'ಎ', ಈ ಸಹಸ್ರಮಾನದ ಪ್ರೇಕ್ಷಕರಿಗೆ ಮಾನಸಿಕವಾಗಿ ಕಾಡಿತು. ಒಬ್ಬ ಚಿತ್ರ ನಿರ್ದೇಶಕ ಹಾಗೂ ಒಬ್ಬ ನಟಿಯ ನಡವೆ ಪ್ರೀತಿ ಮುರಿದ ಕಥೆಯನ್ನು ಫ್ಲಾಷ್ ಬ್ಯಾಕ್ ಮೂಲಕ ಸುಂದರವಾದ ನಿರೂಪಣೆಯಿಂದ ಕೂಡಿದ ಚಿತ್ರ ಬಿಗಿಯಾದ ಚಿತ್ರಕಥೆ ಹೊಂದಿತ್ತು.
ಈ ಚಿತ್ರದಲ್ಲಿ ನಿರ್ದೇಶಕನಾಗಿ ಉಪೇಂದ್ರ, ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಪುಟ್ಟಣ ಕಣಗಾಲ್ ಅವರನ್ನು ನೆನಪಿಗೆ ತಂದರು. ಪ್ರೇಕ್ಷಕರನ್ನು ಕೊನೆಯವರೆಗೆ ಗೂಢತೆಯಲ್ಲಿ ಮುಳುಗಿಸಲು ಉಪ್ಪಿ, ಹಿಮ್ಮುಖ ಚಿತ್ರಕಥೆ ಶೈಲಿ ಅಳವಡಿಸಿದ್ದರು. ಇದರಿಂದ ಪ್ರೇಕ್ಷಕರು ಮತ್ತೆ ಮ ಚಿತ್ರ ನೋಡಲು ಬರುವಂತಾಯಿತು.
ಚಿತ್ರದಷ್ಟೇ ನಿಗೂಢ: 'ಎ' ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗ ಅಕ್ಷರಶಃ ಉಪ್ಪಿಯ ತಾಳಕ್ಕೆ ಕುಣಿಯಿತು. ಆದರೆ ಸಿಲ್ಕ್ ಮಂಜು ಮಾತ್ರ ಸುಮಾರು ಎರಡು ದಶಕಗಳ ಕಾಲ ಹಿನ್ನೆಲೆಯಲ್ಲೇ ಉಳಿಯಲು ನಿರ್ಧರಿಸಿದರು. ಇದೂ ಸಹ, ಅವರು ನಿರ್ಮಿಸಿದ ಚಿತ್ರದಷ್ಟೇ ನಿಗೂಢ.
ಆದರೆ ಸಿಲ್ಕ್ ಮಂಜುಗೆ ಮಾತ್ರ ಇದರಲ್ಲಿ ಯಾವ ನಿಗೂಢತೆಯೂ ಇಲ್ಲ ಎಂದೇ ಭಾವನೆ. ಅವರ ವ್ಯಾಪಾರ ವಹಿವಾಟು ಅಥವಾ 'ಎ' ಚಿತ್ರ ಕಾಡಿದಂತೆ ಇನ್ನಾವ ಚಿತ್ರಕಥೆಯೂ ಅವರಿಗೆ ಕಾಡಲಿಲ್ಲ ಎನ್ನುವುದೂ ಕಾರಣವಿರಬಹುದು.
ಬಹುಶ: ಈಗ ವಿಧಿಯೇ ಅವರನ್ನು ಸರಿಯಾದ ಸಮಯಕ್ಕೆ ಅವರನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಳೆದು ತಂದಿದೆ. ಈ ಬಾರಿ ಅದು, ಕನ್ನಡ ಚಿತ್ರರಂಗದಲ್ಲಿ ಉಪ್ಪಿಯ ಸ್ವರ್ಣೋತ್ಸವ ಆಚರಿಸಲು ಉಪ್ಪಿಗಾಗಿ ಮತ್ತೊಂದು ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಉಪ್ಪಿಯ ಅನನ್ಯ ಶೈಲಿಗೆ ಸರಿಹೊಂದುವಂಥ ಚಿತ್ರಕಥೆಗೆ ಮಂಜು ಹುಡುಕಾಟ ನಡೆಸಿದ್ದಾರೆ. ಇದು ಉಪ್ಪಿಯ 50ನೇ ಚಿತ್ರವಾಗಿ ಮತ್ತೊಂದು ಇತಿಹಾಸ ನಿರ್ಮಿಸಬೇಕು ಎನ್ನುವುದು ಅವರ ಆಸೆ. ಮುಂಬರುವ ಚಿತ್ರ ಕಮರ್ಶಿಯಲ್ ಥ್ರಿಲ್ಲರ್ ಎನ್ನುವುದನ್ನು ಬಿಟು ಅವರು ಬೇರೇನೂ ಬಹಿರಂಗಪಡಿಸುತ್ತಿಲ್ಲ. ಆದರೆ ಇದು ಉಪ್ಪಿಯ ಚಿತ್ರ ಎನ್ನುವ ಭರವಸೆ ನೀಡುತ್ತಾರೆ. ಅನಿರೀಕ್ಷಿತಯ ನಿರೀಕ್ಷೆ ಮಾಡಿ. ಈ ಚಿತ್ರಕ್ಕೆ ಸಂಗೀತ ಒದಗಿಸಲು ಇಳಯರಾಜ ಅವರನ್ನು ಕೋರಲಾಗಿದೆ.
ಸಿಲ್ಕ್ ಮಂಜು ಅವರ ರೇಷ್ಮೆಯ ಸ್ಪರ್ಶ ಇದೆ ಎಂದ ಮೇಲೆ, ಒಂದಂತೂ ಖಚಿತ. ಉಪ್ಪಿ @50, ಬಾಕ್ಸ್ ಆಫೀಸ್ ದಾಖಲೆ ನಿರ್ಮಾಣ ನಿರೀಕ್ಷಿಸಬಹುದು. ಸಿಲ್ಕು ಮಂಜುಗೆ ಒಂದು ಸಾಲು ಬರೆಯಬೇಕೆ? ನಿಮ್ಮ ಅನಿಸಿಕೆಯನ್ನು ಅವರಿಗೆ ಇಮೇಲ್ ಮಾಡಿ