ಪ್ರೀತಿ ಮಾಯೆ ಹುಷಾರು, ಇದು ಲವ್ ಪಾಯಿಸನ್

ಕಳೆದ ಮೂರು ತಿಂಗಳಿನಿಂದ ಕಥೆ ಹೆಣೆದಿರುವ ನಂದನ್ ಸದ್ಯಕ್ಕೆ ಫೈನಲ್ ಕಾಪಿ ಸಿದ್ಧಪಡಿಸುತ್ತಿದ್ದಾರೆ. ನಾಯಕನಾಗಿ ಹಳ್ಳಿ ಹೈದ ರಾಜೇಶ್ ಇದ್ದರೆ ಮತ್ತೊಬ್ಬ ನಾಯಕನಾಗಿ ತಬ್ಬಲಿ'ಯ ಆಕಾಶ್ಜಿತ್ ಇದ್ದಾರೆ.
ನಾಯಕಿಯಾಗಿ ಶೃತಿರಾಜ್ ಹೆಜ್ಜೆ ಹಾಕಲಿದ್ದಾರೆ. ನೀನ್ಯಾರೆ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಬೆಡಗಿ ಈಕೆ. ಕನ್ನಡದವಳೇ ಆಗಿದ್ದರೂ ಇಷ್ಟು ದಿನ ಅವಕಾಶವಿಲ್ಲದೇ ಇದ್ದದ್ದು ವಿಪರ್ಯಾಸ.
ಮತ್ತೊಬ್ಬ ನಾಯಕಿಯಾಗಿ ಮುಂಬೈನ ಬೆಡಗಿಯೊಬ್ಬಳು ಇರಲಿದ್ದಾಳೆ. ಆಯ್ಕೆ ಈಗಷ್ಟೇ ನಡೆಯುತ್ತಿದೆ.
ಶೀರ್ಷಿಕೆ ನೋಡಿದ ಮೇಲೆ ಕಥೆಯ ಬಗ್ಗೆ ಇನ್ನೇನು ಹೇಳುವ ಅವಶ್ಯಕಥೆ ಇದ್ದಂತಿಲ್ಲ. ಪ್ರೀತಿಯ ಸುತ್ತಲೇ ಗಿರಕಿ ಹೊಡೆದು ನಂತರ ಪ್ರೀತಿಯಿಂದಾಗುವ ಅನಾಹುತದ ಬಗ್ಗೆ ಹೇಳಹೊರಟಿದ್ದಾರೆ ನಂದನ್. ಕೆ.ಸೋಮಶೇಖರ್ ಎಂಬುವವರು ಹಣ ಸುರಿಯುತ್ತಿದ್ದಾರೆ.
ಸ್ವತಃ ಕತೆಯನ್ನು ನಿರ್ದೇಶಕ ನಂದನಪ್ರಭು ಅವರೇ ಹೆಣೆದಿದ್ದಾರೆ. ತಮ್ಮ ಕಂಡಕ್ಟರ್ ವೃತ್ತಿ ಜೀವನದ ಅನುಭವಗಳನ್ನೇ ಕತೆಯಾಗಿಸಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಆಗಿ ಕಂಡ ಸತ್ಯಗಳು ಶೇ.60ರಷ್ಟು ಚಿತ್ರದಲ್ಲಿರುತ್ತವೆ.


Click it and Unblock the Notifications











