Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವನ ಬರೆದು ಹಂಸಲೇಖ ಹುಟ್ಟುಹಬ್ಬಕ್ಕೆ ಶುಭಕೋರಿದ ಜಗ್ಗೇಶ್
ಕನ್ನಡ ಚಿತ್ರರಂಗದ ಸಂಗೀತ ಸಾಮ್ರಾಟ, ದೇಸಿ ದೊರೆ, ನಾದಬ್ರಹ್ಮ ಹಂಸಲೇಖ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಚಿತ್ರರಂಗದ ಆಪ್ತರು ಹಾಗೂ ರಾಜಕಾರಣಿಗಳು ಶುಭಕೋರಿದ್ದಾರೆ.
70ನೇ ವರ್ಷದ ಜನುಮದಿನ ಆಚರಿಸಿಕೊಳ್ಳುತ್ತಿರುವ ದಿಗ್ಗಜ ತಂತ್ರಜ್ಞನ ಬಗ್ಗೆ ಹಿರಿಯ ನಟ ಜಗ್ಗೇಶ್ ಸಂತಸ ಹಂಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಕವನ ಬರೆಯುವುದರ ಮೂಲಕ ಹಂಸಲೇಖ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?
''ಬರದ್ಬುಟ್ರೆ ಹಾಡು ಹಂಸ
ಅದುರೋಯ್ತದೆ ಮೈಕು!
ಅದರಲ್ಲಿ ನಂಗಿಷ್ಟದ್ದು ಹಾಡು ರಂಗು ಕಲ್ಸೂ ನಂಗು ಬೈಕು!
ಹೊಂಬಾಳೆ ಹಾಡಂತು ಒಂಥರ ಮೈಸೂರ್ ಪಾಕು!
ಹುಟ್ಟುದ್ರೆ ಕನ್ನಡ್ನಾಡಲ್ಲಿ ಮಾತ್ರ
ಕನ್ನಡ ಅಂತ ಮೂಗ್ ಮುರ್ದೌವ್ಗೆ
ಬಾಕು!
ಲೇಖ್ನೀ ಹಿಡ್ದು ಎದ್ದ್ ಬಂದ್ ಬರ್ದು ಕನ್ನಡ್ದ್ ಎದೆಗೆ ಹಾಕ್ ದೇವ್ರು ಲಾಕು!
ಹುಟ್ಟಿದ್ ದಿನಕ್ಕೆ ನಮ್ದು ಒಂದ್ ನಮಸ್ಕಾರ'' ಎಂದು ಜಗ್ಗೇಶ್ ಶುಭಕೋರಿದರು. ಮುಂದೆ ಓದಿ...
ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ
''ಸರಸ್ವತಿ ಪುತ್ರ, ಅಕ್ಷರಗಳ ಮಿತ್ರ.. ಕಲೆಗೆ ಸಂಗೀತಕ್ಕೆ ತುಂಬ ಹತ್ರ.. ಇವರು ಎಂದಿಗೂ ಭಾಷೆ ಭಾವನೆಗಳಿಗೆ ದೇಸಿ ಸೂತ್ರ ಅವರೇ ಶ್ರೀ ಹಂಸಲೇಖ ಅನ್ನೋ ಜ್ಞಾನದ, ತಂತ್ರಜ್ಞಾನದ, ನಾದದ, ವೇದದ, ಪದ್ಯದ, ಗದ್ಯದ, ಜಾನಪದದ, ಜನಪದದ ಸೊಗಡಿನ ಪ್ರತಿಭಾ ಸಾಗರ ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ'' ಎಂದು ನಿರ್ದೇಶಕ ರಘುರಾಮ್ ಶುಭಾಶಯ ತಿಳಿಸಿದರು.
ಚಂದನವನಕ್ಕೆ ಹೊಸ ಮೆರುಗು
''ಅತ್ಯದ್ಭುತ ಸಂಗೀತ ಸಂಯೋಜನೆ ಹಾಗೂ ಅರ್ಥಗರ್ಭಿತ ಸಾಹಿತ್ಯ ರಚನೆಯ ಮೂಲಕ ಕನ್ನಡದ ಚಂದನವನಕ್ಕೆ ಹೊಸ ಮೆರುಗು ನೀಡಿದ ಖ್ಯಾತ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ, ನಾದಬ್ರಹ್ಮ ಡಾ. ಹಂಸಲೇಖ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.'' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹಂಸಲೇಖರಿಗೆ ಶುಭಕೋರಿದ್ದಾರೆ.
ಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳು
ಸಂಗೀತ ಲೋಕದ ದಿಗ್ಗಜ
''ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರು, ಸ್ವರ ಮಾಂತ್ರಿಕ, ಸಂಗೀತ ಲೋಕದ ದಿಗ್ಗಜ, ನಾದ ಬ್ರಹ್ಮ ಡಾ ಹಂಸಲೇಖ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು'' ಎಂದು ಸಚಿವ ಆರ್ ಅಶೋಕ ಶುಭಕೋರಿದರು.
Recommended Video
ಗಾಯಕ ರಾಜೇಶ್ ಕೃಷ್ಣನ್
''ನಾದಬ್ರಹ್ಮ ಡಾ ಹಂಸಲೇಖ ಅವರಿಗೆ 70ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.'' ಎಂದು ಗಾಯಕ ರಾಜೇಶ್ ಕೃಷ್ಣನ್ ವಿಶ್ ಮಾಡಿದ್ದಾರೆ.