Just In
- 2 min ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 51 min ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 1 hr ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 2 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
Don't Miss!
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- News
ಕಾಫಿಗೆ ಬೆಂಬಲ ಬೆಲೆ ಘೋಷಿಸಿ ಬೆಳೆಗಾರರ ಮನಗೆದ್ದ ಕೇರಳ ಸರ್ಕಾರ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಚೌಕಿದಾರ್' ಸಿನಿಮಾ ನಿಂತು ಹೋಯ್ತಾ ? : ಏನಂತಾರೆ ನಿರ್ದೇಶಕರು?
ಗೋಲ್ಟನ್ ಸ್ಟಾರ್ ಗಣೇಶ್ 'ಚೌಕಿದಾರ್' ಎಂಬ ಸಿನಿಮಾ ಮಾಡುತ್ತಾರೆ. ಎರಡು ರೀತಿಯ ಡಿಫರೆಂಟ್ ಲುಕ್ ನಲ್ಲಿ ಗಣೇಶ್ ಈ ಚಿತ್ರದಲ್ಲಿ ಇರುತ್ತಾರೆ. ಆ ಸಿನಿಮಾವನ್ನು 'ರಥಾವರ' ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಾರೆ. ಎಂಬ ವಿಷಯ ಕೆಲ ತಿಂಗಳಿನ ಹಿಂದೆ ದೊಡ್ಡ ಸುದ್ದಿ ಮಾಡಿತ್ತು.
ಆದರೆ, ಈಗ ಈ ಸಿನಿಮಾ ನಿಂತು ಹೋಗುತ್ತದೆ ಎನ್ನುವ ಮತ್ತೊಂದು ಸುದ್ದಿ ಬಂದಿದೆ. ಸಂಪೂರ್ಣ ಕಥೆ ಹೇಳಿದೆ, ಗಣೇಶ್ ಅವರ ಅಧಿಕೃತ ಒಪ್ಪಿಗೆ ಪಡೆಯದೆ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ 'ಚೌಕಿದಾರ್' ಸಿನಿಮಾ ಶುರು ಆಗುವುದಿಲ್ಲ ಎನ್ನುವ ಸುದ್ದಿ ಶುರುವಾಗಿದೆ.
ಕನ್ನಡದಲ್ಲಿ 'ಚೌಕೀದಾರ್' ಚಿತ್ರ : 55ರ ವಯಸ್ಕನ ಪಾತ್ರದಲ್ಲಿ ಗಣೇಶ್!
ಹಾಗಾದರೆ, 'ಚೌಕಿದಾರ್' ಸಿನಿಮಾ ಬರುತ್ತದೆಯೋ, ಇಲ್ವೋ? ಎನ್ನುವ ಅನುಮಾನ ಮೂಡಿದೆ. ಇದೀಗ ಈ ಗೊಂದಲದ ಬಗ್ಗೆ ಚಂದ್ರಶೇಖರ್ ಬಂಡಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದ ನಿರ್ದೇಶಕರು ಆಡಿದ ಮಾತುಗಳು ಹೀಗಿವೆ.

ನಾನು ಹೇಳಿದ್ದು ಕೂಡ ಅದೇ
ಚಿತ್ರದ ಗೊಂದಲದ ಬಗ್ಗೆ ಮಾತನಾಡಿರುವ ಚಂದ್ರಶೇಖರ್ ಬಂಡಿಯಪ್ಪ ''ನಾನು ಕೂಡ ಸಿನಿಮಾ ಇನ್ನೂ ಅಂತಿಮ ಆಗಿಲ್ಲ ಅಂತಲೇ ಹೇಳಿದ್ದೆ. ಗಣೇಶ್ ಸರ್ ಗೆ ನಾನು ಹೇಳಿದ ಲೈನ್ ಇಷ್ಟ ಆಗಿದೆ. ಆದರೆ, ಇನ್ನು ಫೈನಲ್ ರೀಡಿಂಗ್ ನೀಡುವುದು ಬಾಕಿ ಇದೆ. ಇದನ್ನೇ ನಾನು ಆಗಲೂ ಹೇಳಿದೆ.'' ಎಂದಿದ್ದಾರೆ.

'ಚೌಕಿದಾರ್' ಎನ್ನುವ ಹೆಸರೇ ಸುದ್ದಿಯಾಯ್ತು
''ಚೌಕಿದಾರ್' ಸಿನಿಮಾ ಮಾಡುತ್ತಿದ್ದೇನೆ ಎಂದು ನಾನು ಎಲ್ಲಿಯೂ ಅನೌನ್ಸ್ ಮಾಡಿರಲಿಲ್ಲ. ಸಿನಿಮಾದ ಬಗ್ಗೆ ಸಣ್ಣ ಗಾಸಿಪ್ ಬಂದಾಗ, ಹೌದು.. ಚಿತ್ರ ಮಾಡುವ ತಯಾರಿ ನಡೆದಿದೆ ಎಂದು ಆ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದೆ ಅಷ್ಟೇ. ಆದರೆ, ಬಳಿಕ 'ಚೌಕಿದಾರ್' ಎನ್ನುವ ಟೈಟಲ್ ದೊಡ್ಡ ಮಟ್ಟಿಗೆ ಪ್ರಚಾರ ಆಯ್ತು.''

ಮಾತುಕತೆಗಳು ಇನ್ನು ಮುಗಿದಿಲ್ಲ
''ಚೌಕಿದಾರ್' ಸಿನಿಮಾದ ಬಗ್ಗೆ ಗಣೇಶ್ ಸರ್ ಜೊತೆಗೆ ಮಾತುಕತೆಗಳು ಇನ್ನು ನಡೆಯುತ್ತಿದೆ. ಅವರಿಗೆ ಪೂರ್ಣ ಕಥೆ ಹೇಳಬೇಕು, ಅವರು ಆ ಪಾತ್ರವನ್ನು ಮಾಡಲು ಸಿದ್ಧರಾಗಬೇಕು, ಸಂಭಾವನೆ, ಪ್ರೊಡಕ್ಷನ್ ಟೀಮ್ ಎಲ್ಲವೂ ಅವರಿಗೂ ಸರಿ ಎನಿಸಬೇಕು. ಹೀಗೆ ಅನೇಕ ಕೆಲಸಗಳು ಬಾಕಿದೆ ಇದೆ.''

ಗಣೇಶ್ ಸಿನಿಮಾ ಮಾಡ್ತಾರಾ, ಇಲ್ವಾ?
ಹಾಗಾದ್ರೆ, 'ಚೌಕೀದಾರ್' ಸಿನಿಮಾ ಆಗುತ್ತದೆಯೇ ಇಲ್ವಾ ಎನ್ನುವ ಪ್ರಶ್ನೆಗೆ ಬಂಡಿಯಪ್ಪ ನೇರವಾಗಿ ಉತ್ತರ ನೀಡಿದ್ದಾರೆ. ''ಸಿನಿಮಾ ಆಗಬೇಕು ಎಂದು ಇದ್ದರೆ, ಖಂಡಿತ ಆಗೇ ಆಗುತ್ತದೆ. ಅದಕ್ಕೆ ಎಲ್ಲ ಕೂಡಿ ಬರಬೇಕು.'' ಎಂದಿದ್ದಾರೆ. ಗಣೇಶ್ ಜೊತೆಗೆ ಯಾವುದೇ ಮನಸ್ತಾಪ ಇಲ್ಲ ಅವರ ನಾಳೆ ಹುಟ್ಟುಹಬ್ಬಕ್ಕೂ ಹೋಗಬೇಕು ಎಂದು ತಿಳಿಸಿದ್ದಾರೆ.

ಗಣೇಶ್ ಚಿತ್ರಗಳಲ್ಲಿ ಬಂಡಿಯಪ್ಪ ಕೆಲಸ
ಚಂದ್ರಶೇಖರ್ ಬಂಡಿಯಪ್ಪ ಈ ಹಿಂದೆ ಗಣೇಶ್ ಅವರ 'ಚೆಲುವಿನ ಚಿತ್ತಾರ' ಹಾಗೂ 'ಶೈಲೂ' ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಎರಡು ವರ್ಷದಿಂದ ಗಣೀಗೆ ಒಂದು ಚಿತ್ರ ಮಾಡಬೇಕು ಎನ್ನುವ ಪ್ಲಾನ್ ಇತ್ತು. ಹೀಗಾಗಿ, 'ಚೌಕಿದಾರ್' ಸಿನಿಮಾ ಶುರು ಆಗಿತ್ತು.