Don't Miss!
- News ಪಿಎಸ್ ಐ ಪರೀಕ್ಷೆ ಅಕ್ರಮ ಆರೋಪಿ ಮನೆಗೆ ಉಮೇಶ್ ಜಾಧವ ಭೇಟಿ : ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Finance Shilpa Shetty: ಇಡಿಯಿಂದ ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಅವರ 98 ಕೋಟಿ ಮೌಲ್ಯದ 2 ಫ್ಲಾಟ್, ಷೇರು ವಶ
- Technology Realme: ರಿಯಲ್ಮಿ C65 5G ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! 6.67″ 120Hz ಡಿಸ್ಪ್ಲೆ...
- Lifestyle ಮಾಲ್ನೊಳಗೆ ನುಗ್ಗಿದ 100ಕ್ಕೂ ಹೆಚ್ಚು ನಾಯಿಗಳು..! ಕೋಳಿ ಕಾಲು ತೋರಿಸಿ ಹಿಡಿದ ಜನ..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ಸ್ಟಾರ್ ರಜನಿಕಾಂತ್ 10 ಕೋಟಿ ಕೊಟ್ಟಿದ್ದು ನಿಜಾನಾ?
ಸಹಾಯ ಹಸ್ತ ಚಾಚುವುದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಂಬರ್ 1. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೆಷ್ಟೋ ನಿರ್ಮಾಪಕರ ಪಾಲಿಗೆ ಆಪತ್ಬಂಧವರಾಗಿರುವ ರಜನಿ, ಚೆನ್ನೈನಲ್ಲಿನ ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡುವುದರಲ್ಲಿ ಹಿಂದು ಮುಂದು ನೋಡ್ತಾರಾ?
ಶ್ರೀ ರಾಘವೇಂದ್ರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಿ.ಎಂ ಪರಿಹಾರ ನಿಧಿಗೆ ರಜನಿಕಾಂತ್ ಈ ಹಿಂದೆ 10 ಲಕ್ಷ ರೂಪಾಯಿ ನೀಡಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
ಇದರಿಂದ ಎಚ್ಚೆತ್ತ ರಜನಿಕಾಂತ್ ಇದೀಗ ಬರೋಬ್ಬರಿ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಅಂತ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ರಜನಿಕಾಂತ್ 10 ಕೋಟಿ ರೂಪಾಯಿ ನೀಡಿದ್ದಾರಾ ಅಂತ ಕನ್ಫರ್ಮ್ ಮಾಡಿಕೊಳ್ಳೋಕೆ ಹೊರಟರೆ, ಮೂಲಗಳಿಂದ ಸಿಗುವ ಉತ್ತರ 'ಇಲ್ಲ'.![ಚೆನ್ನೈ ಮಳೆ: ಹೆದರಬೇಡಿ ನಿಮಗೆ ನಾವಿದ್ದೇವೆ ಎಂದ ಕಾಲಿವುಡ್ ಸ್ಟಾರ್ಸ್..!]
ಹೌದು, ಒನ್ ಇಂಡಿಯಾ ಸಿಬ್ಬಂದಿ ರಜನಿಕಾಂತ್ ಆಪ್ತ ವಲಯವನ್ನ ಸಂಪರ್ಕ ಮಾಡಿದಾಗ 10 ಕೋಟಿ ರೂಪಾಯಿ ದೇಣಿಗೆ ವಿಷಯ 'ಸುಳ್ಳು ಸುದ್ದಿ' ಅಂತ ತಿಳಿದುಬಂದಿದೆ. ಹಾಗಂತ ರಜನಿಕಾಂತ್ ಸುಮ್ಮನೆ ಕೂತಿದ್ದಾರೆ ಅಂತಲ್ಲ. ಬಲಗೈ ಮಾಡಿದ್ದು ಎಡಗೈಗೆ ಗೊತ್ತಾಗದಂತೆ ಚೆನ್ನೈ ನಾಗರೀಕರಿಗೆ ನೆರವು ನೀಡಿದ್ದಾರೆ ರಜನಿ.
ತಮ್ಮ ಇಬ್ಬರು ಸುಪುತ್ರಿಯರ ಉಸ್ತುವಾರಿಯಲ್ಲಿ ಚೆನ್ನೈ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ ರಜನಿಕಾಂತ್. ತಮ್ಮ ಒಡೆತನದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದಾರೆ 'ತಲೈವಾ' ರಜನಿ.
ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಂದ ಬರುತ್ತಿರುವ ಪರಿಹಾರ ಸಮಾಗ್ರಿಗಳನ್ನ ಒಟ್ಟುಗೂಡಿಸಿ ಅದನ್ನ ಸಂತ್ರಸ್ತರಿಗೆ ರವಾನೆ ಮಾಡುವ ಕೆಲಸದಲ್ಲೂ ರಜನಿ ಪುತ್ರಿಯರು ತೊಡಗಿದ್ದಾರೆ.
ಯಾವುದೇ ಪಬ್ಲಿಸಿಟಿ ಇಲ್ಲದೆ ಇಷ್ಟೆಲ್ಲಾ ಕೆಲಸವನ್ನ ರಜನಿ ಮತ್ತು ಕುಟುಂಬ ಮಾಡುತ್ತಿದೆ. ಸುಮ್ಮನ್ನೆ 10 ಕೋಟಿ ಕೊಟ್ಟು ಕೈತೊಳೆದುಕೊಳ್ಳುವ ಬದಲು ಇಡೀ ರಜನಿ ಕುಟುಂಬ ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವುದು ಕಣ್ಣರಳಿಸುವ ವಿಷಯ ಅಲ್ಲವೇ?