Just In
Don't Miss!
- News
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರು ದೇಣಿಗೆ ನೀಡಿದ ಗೌತಮ್ ಗಂಭೀರ್
- Sports
ಏರ್ಪೋರ್ಟ್ನಿಂದ ನೇರವಾಗಿ ತಂದೆಯ ಸಮಾಧಿ ಬಳಿ ತೆರಳಿದ ವೇಗಿ ಸಿರಾಜ್
- Lifestyle
ಡಾರ್ಕ್ ಸರ್ಕಲ್ ವಿರುದ್ಧ ಉತ್ತಮವಾಗಿ ಹೋರಾಡುತ್ತೆ ಈ ಎಣ್ಣೆ...
- Finance
ರಿಲಯನ್ಸ್ ಇಂಡಸ್ಟ್ರೀಸ್- ಫ್ಯೂಚರ್ ಸಮೂಹದ ವ್ಯವಹಾರಕ್ಕೆ ಸೆಬಿ ಸಮ್ಮತಿ
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಜಾರ್' ಹುಡುಗನ 2ನೇ ಚಿತ್ರಕ್ಕೆ ಜೊತೆಯಾದ 'ಬಹದ್ದೂರ್' ಡೈರೆಕ್ಟರ್
'ಬಜಾರ್' ಸಿನಿಮಾದ ಮೂಲಕ ನಟ ಧನ್ವೀರ್ ಗೌಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಸಿಂಪಲ್ ಸುನಿ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿದ್ದರು.
ಈ ಸಿನಿಮಾದ ನಂತರ ಈಗ ಧನ್ವೀರ್ ತಮ್ಮ ಎರಡನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ವಿಶೇಷ ಅಂದರೆ, ಈ ಸಿನಿಮಾದ ಕಥೆ, ಚಿತ್ರಕಥೆ, ಸಾಹಿತ್ಯವನ್ನು 'ಬಹದ್ದೂರ್' ಚೇತನ್ ಕುಮಾರ್ ಬರೆಯುತ್ತಿದ್ದಾರೆ.
ಸುನಿ ತೋರಿಸಿದ 'ಬಜಾರ್' ವಿಮರ್ಶಕರಿಗೆ ಇಷ್ಟ ಆಯ್ತಾ.?
ಧನ್ವೀರ್ ಮುಂದಿನ ಸಿನಿಮಾವನ್ನು 'ಭರಾಟೆ' ನಿರ್ಮಾಪಕ ಸುಪ್ರೀತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಚೇತನ್ ತಮ್ಮ ಬರವಣಿಗೆಯ ಮೂಲಕ ಸಾಥ್ ನೀಡುತ್ತಿದ್ದಾರೆ.
ಚೇತನ್ ಕಥೆ ಮತ್ತು ಚಿತ್ರಕತೆ ಸಿದ್ಧವಾಗಿದ್ದು, ಬೇರೆ ನಿರ್ದೇಶಕರ ಕೈನಲ್ಲಿ ಸಿನಿಮಾ ಮಾಡಿಸುವ ಪ್ಲಾನ್ ಇದೆ. ಈಗಾಗಲೇ, ಒಂದರೆಡು ಸಿನಿಮಾ ಮಾಡಿರುವ ಕನ್ನಡದ ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ಡೈರೆಕ್ಟ್ ಮಾಡಲಿದ್ದಾರೆ.
ಅಂದಹಾಗೆ, ಈ ಸಿನಿಮಾದ ತಂತ್ರಜ್ಞರು ಮತ್ತು ಕಲಾವಿದರನ್ನು ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದಂತೆ. ಮೊದಲ ಬಾರಿಗೆ ಚೇತನ್ ಕುಮಾರ್ ಕಥೆಗೆ ಬೇರೊಬ್ಬರು ನಿರ್ದೇಶನ ಮಾಡುತ್ತಿದ್ದಾರೆ.