Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಭಿನ್ನತೆ, ಕೌತುಕತೆ, ಭಯಾನಕದ ಪ್ರತಿರೂಪ ಈ ಚಿತ್ರಕಥಾ ಟ್ರೈಲರ್
ಹೊಸ ಪ್ರಯತ್ನಗಳು, ವಿಭಿನ್ನ ಕಥೆಗಳು, ತಾಂತ್ರಿಕವಾಗಿ ಹೊಸತನ ತುಂಬಿದ ಮೇಕಿಂಗ್ ಹೊಂದಿರುವ ಹಲವು ಚಿತ್ರಗಳು ಇತ್ತೀಚಿನ ದಿನದಲ್ಲಿ ಗಮನ ಸೆಳೆಯುತ್ತಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾದ ಮತ್ತೊಂದು ಸಿನಿಮಾ ಚಿತ್ರಕಥಾ.
ನೈಜ ಘಟನೆಗಳನ್ನ ಆಧರಿಸಿ ಮಾಡಿರುವ ಈ ಸಿನಿಮಾ ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥಾಹಂದರ ಹೊಂದಿದೆ. ಟ್ರೈಲರ್ ಹಾಗೂ ಪೋಸ್ಟರ್ ನೋಡಿದ್ರೆ ಇದು ಪಕ್ಕಾ ಹಾರರ್ ಸಿನಿಮಾ ಎಂಬ ಭಾವನೆ ಮೂಡಿಸುತ್ತಿದೆ. ಬಟ್, ನೋಡಿದ್ಮೇಲೆ ಅಷ್ಟೇ ಈ ಚಿತ್ರಕಥೆಯ ಅಸಲಿ ಕಥೆ ಏನು ಎಂಬುದು ತಿಳಿಯುತ್ತೆ.
ಇತ್ತೀಚಿಗಷ್ಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರಕಥಾ ಟ್ರೈಲರ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು 3 ಲಕ್ಷಕ್ಕೂ ಅಧಿಕ ವೀಕ್ಷಕರು ಟ್ರೈಲರ್ ನೋಡಿದ್ದಾರೆ. ಅಂದ್ಹಾಗೆ, ಇದು ಸಿನಿಮಾ ಕಲಾವಿದನ ಬದುಕಿನ ಸುತ್ತ ನಡೆಯುವ ಕಥೆ. ಸಿನಿಮಾ, ನಿರ್ದೇಶನ, ಚಿತ್ರಕಲಾವಿದ, ಭೂತದ ಮನೆ, ವೈದ್ಯೆ, ಹೀಗೆ ಇಡೀ ಚಿತ್ರಕಥೆಯಲ್ಲಿ ಕೌತುಕತೆ ಎದ್ದು ಕಾಣುತ್ತಿದೆ.
ಜಾಲಿ ಪ್ರೊಡಕ್ಷನ್ ಲಾಂಛನದಡಿ ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿರುವ ಈ ಚಿತ್ರವನ್ನ ಯಶಸ್ವಿ ಬಾಲಾಧಿತ್ಯ ನಿರ್ದೇಶನ ಮಾಡಿದ್ದಾರೆ. ಸುಜಿತ್ ರಾಥೋಡ್, ಸುಧಾರಾಣಿ, ದಿಲೀಪ್ ರಾಜ್, ಬಿ ಜಯಶ್ರೀ, ತಬಲಾ ನಾಣಿ, ಅನುಷಾ ರಾವ್ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಚೇತನ್ ಕುಮಾರ್ ಸಂಗೀತ ಮತ್ತು ತನ್ವಿಕ್ ಛಾಯಾಗ್ರಹಣ, ಕೀರ್ತಿ ಬಿಎಂ ಅವರ ಸಂಭಾಷಣೆ, ಮಧು ಅವರ ಸಂಕಲನ ಟ್ರೈಲರ್ ನಲ್ಲೇ ಗಮನ ಸೆಳೆಯುತ್ತಿದೆ. ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿರುವ ಸಿನಿಮಾತಂಡ ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದ್ದಾರೆ.