Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಗೆ ಸಿಎಂ ರಿಂದ ಸನ್ಮಾನ
ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡ ನಟ ಸಂಚಾರಿ ವಿಜಯ್ ಗೆ ಇಂದು ಸಿ.ಎಂ.ಸಿದ್ಧರಾಮಯ್ಯ ಸನ್ಮಾನ ಮಾಡಿದರು. ಇವತ್ತು ಮಧ್ಯಾಹ್ನ ವಿಧಾನಸೌಧದಲ್ಲಿ ನಟ ಸಂಚಾರಿ ವಿಜಯ್ ಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು.
ಅಸಲಿಗೆ ನಟ ಸಂಚಾರಿ ವಿಜಯ್ ಗೆ ಮುಖ್ಯಮಂತ್ರಿಗಳಿಂದ ಆಹ್ವಾನ ಇರ್ಲಿಲ್ಲ. ತಮಗೆ ರಾಷ್ಟ್ರ ಪ್ರಶಸ್ತಿ ನೀಡಿದ 'ನಾನು ಅವನಲ್ಲ ಅವಳು' ಚಿತ್ರವನ್ನ ಸಿ.ಎಂ ವೀಕ್ಷಿಸಬೇಕು ಅನ್ನುವ ಆಶಯ ಸಂಚಾರಿ ವಿಜಯ್ ಗಿದೆ. ಈ ಬಗ್ಗೆ ಮನವಿ ಮಾಡುವುದಕ್ಕೆ ಆಪ್ತರ ಮುಖಾಂತರ ಮುಖ್ಯಮಂತ್ರಿಗಳನ್ನ ಸಂಚಾರಿ ವಿಜಯ್ ಇಂದು ಭೇಟಿ ಮಾಡಿದರು.
ಸಂಚಾರಿ ವಿಜಯ್ ಅವರ ಮನವಿ ಮೇರೆಗೆ 'ನಾನು ಅವನಲ್ಲ ಅವಳು' ಚಿತ್ರವನ್ನ ವೀಕ್ಷಿಸುವುದಾಗಿ ಸಿ.ಎಂ ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ತಮ್ಮ ಅತ್ತ್ಯುತ್ತಮ ನಟನೆಗೆ ಸಂದ ಪುರಸ್ಕಾರಕ್ಕೆ ಸಿ.ಎಂ, ತಮ್ಮ ಚೇಂಬರ್ ನಲ್ಲೇ ಸನ್ಮಾನಿಸಿದರು. ಸಚಿವ ಆಂಜನೇಯ ಉಪಸ್ಥಿತರಿದ್ದರು. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]
ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡಿದ ಸಂಚಾರಿ ವಿಜಯ್, ''ಸಮಾಜಕ್ಕೆ ಉತ್ತಮ ಸಂದೇಶ ಸಾರುವ 'ನಾನು ಅವನಲ್ಲ ಅವಳು' ಚಿತ್ರವನ್ನ ಮುಖ್ಯಮಂತ್ರಿಗಳು ನೋಡಲಿ ಅನ್ನೋದು ನನ್ನ ಆಶಯವಾಗಿತ್ತು. ಅವರನ್ನ ಕೇಳಿದ್ದೀನಿ. ನೋಡುತ್ತೇನೆ ಅಂದಿದ್ದಾರೆ. ಸನ್ಮಾನ ಮಾಡಿದ್ದು ಖುಷಿಯಾಯ್ತು'' ಅಂದರು.