Don't Miss!
- News ಆರ್ಥಿಕ ಸಾಮರ್ಥ್ಯ ಆಧರಿಸಿ ಮಗು ಸುಪರ್ದಿ ನಿರ್ಧರಿಸಲಾಗುವುದಿಲ್ಲ-ಹೈಕೋರ್ಟ್ ಆದೇಶ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆದ್ದು ಸೋತ ಚಿತ್ರ : ಕ್ಯಾಕರಿಸಿ ನಕ್ಕ ಗಾಂಧಿನಗರ
ದಂಡುಪಾಳ್ಯ ಚಿತ್ರ ಚೆನ್ನಾಗಿಯೇ ಓಡಿತಾದರೂ ಐವತ್ತು ದಿನದ ಹೊತ್ತಿಗೆ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆ ಚಿತ್ರವನ್ನು ಹೆಚ್ಚು ಪ್ರೊಮೋಟ್ ಮಾಡಬೇಡಿ ಎಂದು ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟರು.
ಹಾಗಾಗಿ ಊರು ತುಂಬಾ ಬಿದ್ದಿದ್ದ ಪೋಸ್ಟರ್ ಗಳು ಎರಡೇ ದಿನದಲ್ಲಿ ಮೋರಿ ಪಾಲಾದವು.
ನಂತರ ಐವತ್ತು ದಿನದ ಕಾರ್ಯಕ್ರಮ ಕೂಡ ಕ್ಯಾನ್ಸಲ್ ಮಾಡಬೇಕಾದ ಅನಿವಾರ್ಯತೆ ಬಂತು. ಕಾರಣ ಊರು ತುಂಬಾ ದಂಡುಪಾಳ್ಯ ಮಾದರಿಯ ಕೊಲೆ-ಸುಲಿಗೆಗಳು ಆಗತೊಡಗಿದವು.ಆ ಕಾರಣಕ್ಕೆ ದಂಡುಪಾಳ್ಯ ಒಂಥರಾ ಗೆದ್ದು ಸೋತ ಚಿತ್ರ ಎಂದು ಗಾಂಧಿನಗರ ಕ್ಯಾಕರಿಸಿ ನಗತೊಡಗಿತು.
ಈ ಎಲ್ಲಾ ಕಾರಣಕ್ಕೆ ಶ್ರೀನಿವಾಸರಾಜು ಒಂಥರಾ ಗೆದ್ದು ಸೋತ ನಿರ್ದೇಶಕರಾಗಿಬಿಟ್ಟರು. ಒಳ್ಳೆ ಸಿನಿಮಾ ಮಾಡಿ ಹೆಸರು ಮಾಡೋದು ಬೇರೆ. ಸೆಕ್ಸ್-ರೇಪ್-ಮರ್ಡರ್ ಮಿಸ್ಟರಿಯನ್ನು ಹೈಲೈಟ್ ಮಾಡಿ ಕಾಸು ಮಾಡುವುದು ಬೇರೆ ಎಂದು ಚಿತ್ರೋದ್ಯಮ ನಿರ್ಧರಿಸಿಬಿಟ್ಟಿತು.
ಈ ಎಲ್ಲಾ ಕಾರಣಕ್ಕೆ ಟಿವಿ ರೈಟ್ಸ್ ಕೂಡಾ ಕೇಳುವವರಿಲ್ಲ. ಕ್ರೈಮ್ ಸಿನಿಮಾ ಟೀವಿಯಲ್ಲಿ ಬರಬೇಕಾದರೆ ಮತ್ತೆ ಸೆನ್ಸಾರ್ ಮಾಡಬೇಕು. ಯು ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಅವೆಲ್ಲಾ ಸಹವಾಸವೇ ಬೇಡ ಎಂದು ಚಾನೆಲುಗಳು ಸುಮ್ಮನಾಗಿಬಿಟ್ಟವು.
ತೆಲುಗು ತಮಿಳಲ್ಲಿ ಡಬ್ ಅಥವಾ ರೀಮೇಕ್ ಮಾಡುವುದನ್ನು ಬಿಟ್ಟರೆ ಶ್ರೀನಿವಾಸ ರಾಜು ಸದ್ಯ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಉಪ್ಪಿಯ ಡೇಟ್ ಇದೆ. ದುನಿಯಾ ವಿಜಿ ಕಾಲ್ಶೀಟ್ ಕೊಟ್ಟಿದ್ದಾರೆ. ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೇವೆ ಎಂದಷ್ಟೇ ಹೇಳಿಕೊಂಡು ಶ್ರೀನಿವಾಸರಾಜು ಓಡಾಡುತ್ತಿದ್ದಾರೆ.