twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

    |

    Recommended Video

    Ambareesh : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದೆ ದರ್ಶನ್ | Oneindia Kannada

    ಅಂಬರೀಶ್ ಅವರ ಅಂತಿಮ ದರ್ಶನಕ್ಕಾಗಿ ಸ್ವೀಡನ್ ನಿಂದ ಬರುತ್ತಿದ್ದ ನಟ ದರ್ಶನ್ ಇಂದು ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಮಂಡ್ಯದಿಂದ ಅಂಬಿ ಪಾರ್ಥಿವ ಶರೀರವನ್ನ ಬೆಂಗಳೂರಿಗೆ ವಾಪಸ್ ತರಲಾಗುತ್ತಿದೆ. ಹಾಗಾಗಿ, ದರ್ಶನ್ ಕಂಠೀರವ ಸ್ಟೇಡಿಯಂನಲ್ಲೇ ದರ್ಶನ ಪಡೆಯಬಹುದು.

    ಅಂಬರೀಶ್ ನಿಧನ ಸುದ್ದಿ ಕೇಳಿದ ಕೂಡಲೇ ಸ್ಪೀಡನ್ ನಲ್ಲಿ ನಡೆಯುತ್ತಿದ್ದ 'ಯಜಮಾನ' ಚಿತ್ರೀಕರಣವನ್ನ ನಿಲ್ಲಿಸಿ, ತಕ್ಷಣ ಬೆಂಗಳೂರಿಗೆ ಬರುತ್ತಿರುವುದಾಗಿ ಸ್ವತಃ ನಟ ದರ್ಶನ್ ಟ್ವೀಟ್ ಮಾಡಿದ್ದರು. ಈಗಾಗಲೇ ದರ್ಶನ್ ಬೆಂಗಳೂರಿಗೆ ಆಗಮಿಸಿದ್ದು, ಅಂಬಿ ಅಪ್ಪಾಜಿಯ ಅಂತಿಮ ದರ್ಶನ ಪಡೆಯಲಿದ್ದಾರೆ.

    ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.? ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

    ಅಂದ್ಹಾಗೆ, ಸ್ವೀಡನ್ ನಿಂದ ಭಾರತಕ್ಕೆ ಎರಡು ದಿನದಲ್ಲಿ ಬರುವುದು ಸಾಮನ್ಯ ವಿಷ್ಯವಲ್ಲ. ಅದರಲ್ಲೂ ಸರಿಯಾದ ಸಮಯಕ್ಕೆ ವಿಮಾನ ಸಿಕ್ಕಿ, ಅದಕ್ಕೆ ಟಿಕೆಟ್ ಬುಕ್ ಮಾಡಿ ಬರಬೇಕು. ಬಟ್, ಈ ಎಲ್ಲಾ ಸಾಹಸಗಳನ್ನ ಮೀರಿ ಡಿ-ಬಾಸ್ ಬೆಂಗಳೂರಿಗೆ ಬಂದಿದ್ದಾರೆ.. ಅಷ್ಟಕ್ಕೂ, ದರ್ಶನ್ ಸ್ವೀಡನ್ ನಿಂದ ಬೆಂಗಳೂರಿಗೆ ಬರುವ ಮಧ್ಯೆ ಎದುರಾದ ಕಷ್ಟಗಳೇನು.? ಮುಂದೆ ಓದಿ.....

    7000ಕ್ಕೂ ಅಧಿಕ ಕಿ.ಮೀ ಪ್ರಯಾಣ

    7000ಕ್ಕೂ ಅಧಿಕ ಕಿ.ಮೀ ಪ್ರಯಾಣ

    ಭಾರತ ಮತ್ತು ಸ್ವೀಡನ್ ದೇಶಕ್ಕೆ ನೇರವಾಗಿ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್ ನಿಂದ ಭಾರತಕ್ಕೆ ಅಂದಾಜು 7000 ಕಿಲೋ ಮೀಟರ್ ಗಳಷ್ಟು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿದೆ. ಸ್ವೀಡನ್ ನಿಂದ ದುಬೈ, ದುಬೈನಿಂದ ಬೆಂಗಳೂರು ಮಾರ್ಗವಾಗಿ ದರ್ಶನ್ ಬಂದಿದ್ದಾರೆ..

    ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.! ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    ನಾಲ್ಕೈದು ದೇಶಗಳನ್ನ ದಾಟಿ ಬರಬೇಕು

    ನಾಲ್ಕೈದು ದೇಶಗಳನ್ನ ದಾಟಿ ಬರಬೇಕು

    ಸ್ವೀಡನ್ ನಿಂದ ಭಾರತಕ್ಕೆ ಬರುವ ಮಾರ್ಗದಲ್ಲಿ ಹಲವು ದೇಶಗಳನ್ನ ದಾಟಿ ಬರಬೇಕು. ಪ್ರಮುಖ ದೇಶಗಳನ್ನ ಗಮನಿಸುವುದಾದರೇ, ಭಾರತದಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಇನ್ನು ಹಲವು ದೇಶಗಳನ್ನ ದಾಟಿ ಸ್ವೀಡನ್ ಗೆ ಹೋಗಿದ್ದರು. ಈಗ ಅಲ್ಲಿಂದ ವಾಪಸ್ ಬಂದಿರುವುದು ನಿಜಕ್ಕೂ ದೊಡ್ಡ ಶ್ರಮ ತೆಗೆದುಕೊಂಡಂತೆ.

    ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.? ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

    ಟಿಕೆಟ್ ಪಡೆಯುವಲ್ಲಿ ಹರಸಾಹಸ

    ಟಿಕೆಟ್ ಪಡೆಯುವಲ್ಲಿ ಹರಸಾಹಸ

    ಆರಂಭದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ಸೇರಿದಂತೆ ಇಡೀ ತಂಡ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಅಂತಿಮವಾಗಿ ದರ್ಶನ್ ಒಬ್ಬರೇ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ದಿಢೀರ್ ಅಂತ ಟಿಕೆಟ್ ಪಡೆಯುವಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಮತ್ತು ವಿಮಾನಕ್ಕಾಗಿ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾದು ಕುಂತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್ ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್

    ಅಂಬಿಯ ಮಗನಂತಿದ್ದ ದರ್ಶನ್

    ಅಂಬಿಯ ಮಗನಂತಿದ್ದ ದರ್ಶನ್

    ನಟ ದರ್ಶನ್ ಮತ್ತು ಅಂಬರೀಶ್ ಅವರ ಸಂಬಂಧ ಒಂದು ರೀತಿ ತಂದೆ-ಮಗನಂತೆ ಇತ್ತು. ದರ್ಶನ್ ಕೂಡ ಅಂಬಿಯ ಮಾತನ್ನ ಎಲ್ಲಿಯೂ ಅಲ್ಲೆಗಳೆದಿಲ್ಲ. ಅಂಬಿ ಮಾತು ಅಂದ್ರೆ, ದಾಸ ಬಹಳ ಅಚ್ಚುಕಟ್ಟಾಗಿ ನಡೆದುಕೊಳ್ಳುತ್ತಿದ್ದರು. ಅಂಬರೀಶ್ ಅವರ ಪ್ರತಿಯೊಂದು ಬರ್ತಡೇಗೂ ಮೊದಲ ಕೇಕ್ ದರ್ಶನ್ ತರುತ್ತಿದ್ದರು. ಇಂತಹ ಸಂಬಂಧ ಹೊಂದಿದ್ದ ದರ್ಶನ್, ಅಂಬರೀಶ್ ಅವರನ್ನ ಕಳೆದುಕೊಂಡಿರುವುದು ಅವರಿಗೆ ಹೆಚ್ಚು ನೀಡಿದೆ.

    English summary
    Kannada actor challenging star darshan arrived bangalore from sweden. now he going to madya for ambareesh last rites.
    Monday, November 26, 2018, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X