Just In
Don't Miss!
- News
ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೊಟ್ಟಿದ್ದು ಒಂದು ಸಂಭಾವನೆ, ಮಾಡಿಸಿದ್ದು ಎರಡು ಚಿತ್ರದ ಕೆಲಸ: ದರ್ಶನ್
ಒಂದು ಸಿನಿಮಾ ರಿಲೀಸ್ ಆಗುವರೆಗೂ ಇನ್ನೊಂದು ಚಿತ್ರದ ಬಗ್ಗೆ ಮಾತಾಡಲ್ಲ ನಟ ದರ್ಶನ್. ಇನ್ನು ತನ್ನ ಸಿನಿಮಾಗಳು ಅಂದ್ರೆ ಅಷ್ಟೇ ಕಮಿಟ್ ಮೆಂಟ್. ಶೂಟಿಂಗ್, ಡಬ್ಬಿಂಗ್ ಹೇಳಿದ ಸಮಯಕ್ಕೆ ಮುಗಿಸಿ ಕೊಡುವ ದಾಸ ರಿಲೀಸ್ ವಿಚಾರವನ್ನ ನಿರ್ಮಾಪಕರಿಗೆ ಬಿಟ್ಟುಬಿಡುತ್ತಾರೆ.
ಹಾಗಾಗಿ, ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಸಿ ಬಹಳ ದಿನವಾದರೂ ಬಿಡುಗಡೆಯಾಗಿಲ್ಲ. ಯಾಕಂದ್ರೆ, ಮುನಿರತ್ನ ಅವರಿಗೆ ಇಷ್ಟ ಆಗುವರೆಗೂ ಜನರಿಗೆ ಕುರುಕ್ಷೇತ್ರ ತೋರಿಸಲ್ಲ ಎಂದಿದ್ದರು. ಅದರಂತೆ ಎಲ್ಲವನ್ನ ರೆಡಿ ಮಾಡಿ ಈಗ ತೆರಮೇಲೆ ತರುತ್ತಿದ್ದಾರೆ.
ಕನ್ನಡದ ಬಳಿಕ ಇತರ ಭಾಷೆಗಳಲ್ಲಿ ಬರ್ತಿದೆ 'ಕುರುಕ್ಷೇತ್ರ' ಟ್ರೇಲರ್
ಈ ಮಧ್ಯೆ ನಟ ದರ್ಶನ್ ಅವರು ಮುನಿರತ್ನ ಮೇಲೆ ಒಂದು ಆರೋಪ ವರಿಸಿದ್ದಾರೆ. ''ಕುರುಕ್ಷೇತ್ರ ಕಲಾವಿದರಿಗೆ ಒಂದು ಸಿನಿಮಾದ ಸಂಭಾವನೆ ಕೊಟ್ಟು, ಎರಡು ಚಿತ್ರದ ಕೆಲಸ ಮಾಡಿಸಿದ್ದಾರೆ'' ಎಂದು ನಿರ್ಮಾಪಕರ ಕಾಲೆಳೆದರು.
ಅಂದ್ರೆ ಕುರುಕ್ಷೇತ್ರ ಸಿನಿಮಾ 2ಡಿ ಹಾಗೂ 3ಡಿ ಯಲ್ಲಿ ತಯಾರು ಮಾಡಿದ್ದು, ಶೂಟಿಂಗ್ ಸಮಯದಲ್ಲೇ ಎಲ್ಲ ಕಲಾವಿದರು ಎರಡು ಸಲ ಅಭಿನಯಿಸಬೇಕಿತ್ತಂತೆ. ಹಾಗೆ ಡಬ್ಬಿಂಗ್ ಮಾಡಿದಾಗಲು ಎರಡೂ ಸಲ ಅಂದ್ರೆ 2ಡಿಗೆ ಒಂದು ಸಲ, 3ಡಿ ಒಂದು ಸಲ ಡಬ್ ಮಾಡಿದ್ರಂತೆ.
ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ
ಅಂದ್ಹಾಗೆ, ಈ ಮಾತನ್ನ ದರ್ಶನ್ ಗಂಭೀರವಾಗಿ ಹೇಳಿಲ್ಲ. ಸಾಮಾನ್ಯವಾಗಿ ಮಾತನಾಡುವಾಗ ನಿರ್ಮಾಪಕ ಮುನಿರತ್ನ ಅವರ ಕಾಲೆಳೆದರು. ಮುನಿರತ್ನ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತೆರೆಕಾಣುತ್ತಿದೆ.
ಇನ್ನುಳಿದಂತೆ ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮುನಿರತ್ನ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಅಂಬರೀಶ್, ಶ್ರೀನಾಥ್ ಸೇರಿದಂತೆ ಹಲವರು ನಟಿಸಿದ್ದಾರೆ.