Just In
Don't Miss!
- News
ಆಕ್ಸಿಜನ್ ವ್ಯರ್ಥವಾಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸೂಚನೆ
- Sports
ಐಪಿಎಲ್ 2021: ಶಹ್ಬಾಜ್ ಪ್ರದರ್ಶನಕ್ಕೆ ಸಿರಾಜ್ ಮೆಚ್ಚುಗೆಯ ಮಾತು
- Finance
25,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಇನ್ಫೋಸಿಸ್
- Automobiles
ಹೊಸ ಫೀಚರ್ಸ್ಗಳೊಂದಿಗೆ ಬಜಾಜ್ ಸಿಟಿ110ಎಕ್ಸ್ ಬೈಕ್ ಬಿಡುಗಡೆ
- Education
Kalaburagi Mahanagara Palike Recruitment 2021: 219 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ರಂಜಾನ್ 2021: ಉಪವಾಸದ ಈ ತಿಂಗಳಿನಲ್ಲಿ ಹೀಗೆ ಮಾಡಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅರಣ್ಯ ರಕ್ಷಣೆಗೆ ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗದಲ್ಲಿ ನಂ ಒನ್ ಸ್ಟಾರ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟ. ಕಲಾವಿದ ಅಂದ ಮಾತ್ರಕ್ಕೆ ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದಷ್ಟೇ ಅಲ್ಲ, ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನೂ ಮಾಡಬೇಕು ಎನ್ನುವ ಮನಸ್ಸಿರುವ ನಟ. ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಪ್ರಾಣಿ ಪ್ರಿಯ ತಮ್ಮ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ.
ದರ್ಶನ್ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ. ಈಗಾಗಲೇ ಒತ್ತುವರಿ ವಿಚಾರದಲ್ಲಿ ಅರಣ್ಯವೆಲ್ಲಾ ನಾಶವಾಗಿ ಹೋಗಿದೆ. ಬೇಸಿಗೆ ಬಂತು ಅಂದರೆ ಕಡ್ಗಿಚ್ಚಿನ ರೂಪದಲ್ಲಿ ಇರುವ ಅರಣ್ಯವೂ ನಾಶವಾಗುತ್ತದೆ. ಆದ್ದರಿಂದ ಅರಣ್ಯ ಇಲಾಖೆ ದರ್ಶನ್ ಅವರಿಂದ ರಾಜ್ಯದ ಜನತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದೆ.
ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು
ದರ್ಶನ್ ಅವರಿಂದ ವಿಡಿಯೋ ಬೈಟ್ ತೆಗೆದುಕೊಂಡು ಕಾಡಿನ ರಕ್ಷಣೆ ಹೇಗೆ ಮಾಡುವುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದೆ. ದರ್ಶನ್ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು ಜನರು ಕೂಡ ತಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ವಿಡಿಯೋದಲ್ಲಿ ದರ್ಶನ್ "ಕಾಡಿನಲ್ಲಿ ಒಂದು ಮರ ಬೆಳೆದರೆ ನಾಡಿನಲ್ಲಿ ಒಂದು ಮಗು ಬದುಕುತ್ತದೆ. ಕಾಡನ್ನ ಬೆಂಕಿಯಿಂದ ರಕ್ಷಿಸಿದರೆ ನಾಡು ಚೆನ್ನಾಗಿರುತ್ತದೆ. ಬನ್ನಿ ಕಾಡನ್ನ ಬೆಂಕಿಯಿಂದ ರಕ್ಷಿಸೋಣ ದೇಶ ಕಾಯೋಣ" ಎಂದಿದ್ದಾರೆ.
ಕಲಾವಿದರು ಎಂದರೆ ಕೇವಲ ತೆರೆ ಮೇಲೆ ರಂಜಿಸುವುದಷ್ಟೇ ಕೆಲಸವಲ್ಲ ಎನ್ನುವುದನ್ನ ತಿಳಿದುಕೊಂಡಿರುವ ಅಧಿಕಾರಿಗಳು ಪರಿಸರ ಉಳಿವಿಗೂ ಅವರನ್ನ ಬಳಸಿಕೊಳ್ಳುತ್ತಿರುವುದು ಖುಷಿಯ ವಿಚಾರ.
ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.?