twitter
    For Quick Alerts
    ALLOW NOTIFICATIONS  
    For Daily Alerts

    ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್

    |

    Recommended Video

    ದರ್ಶನ್ ಹೇಗೆ ಹಾಲು ಕರೆಯುತ್ತಾರೆ ನೋಡಿ..

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಗೆ ಹೋದ ಕಡೆಯಲೆಲ್ಲಾ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಗುರುವಾರ ಕೆಆರ್ ಪೇಟೆಯಲ್ಲಿ ಪ್ರಚಾರ ಮಾಡಿದ ದರ್ಶನ್, ಅಭಿಮಾನಿಗಳ ಸಮ್ಮುಖದಲ್ಲಿ ಹಸವಿನ ಹಾಲು ಕರೆದು ಗಮನ ಸೆಳೆದರು.

    ಕೆಆರ್ ಪೇಟೆಯ ಸೋಮನಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ, ಹಸುವಿನ ಹಾಲು ಕರೆದು ನಾನೊಬ್ಬ ರೈತ ಎಂದು ಸಾಬೀತುಪಡಿಸಿದ್ದಾರೆ. ದರ್ಶನ್ ಅವರ ಹಾಲು ಕರೆಯುವುದನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

    ಬುಧವಾರ ಪ್ರಚಾರ ಮಾಡುತ್ತಿದ್ದಾಗ ಹಳ್ಳಿಯೊಂದರಲ್ಲಿ ದರ್ಶನ್ ಪ್ರಯಾಣಿಸುತ್ತಿದ್ದ ವಾಹನಕ್ಕೆ ಗೂಳಿ ಎದುರಾಯಿತು. ನಂತರ ವಾಹನದಿಂದ ಕೆಳಗೆ ಇಳಿದ ದರ್ಶನ್, ಗೂಳಿಯ ಮೈ ಸವರಿ ಅದಕ್ಕೆ ಪಕ್ಕಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

    Darshan proved he is a farmer

    ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು? ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

    ಇದೀಗ, ಸಾರ್ವಜನಿಕವಾಗಿ ಹಸುವಿನ ಹಾಲು ಕರೆದು ಪರೋಕ್ಷವಾಗಿ ಸಿಎಂಗೆ ತಿರುಗೇಟು ನೀಡಿದರು. ಇತ್ತೀಚಿಗಷ್ಟೆ ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದರು. 'ಛತ್ರಿ ಹಿಡ್ಕೊಂಡು ನೆರಳಲ್ಲಿ ಶೂಟಿಂಗ್ ಮಾಡ್ತಿದ್ರು. ಬಿಸಿಲಿಗೆ ಬಂದಿದ್ದಾರೆ, ರೈತರ ಕಷ್ಟ ಏನು ಅಂತ ಗೊತ್ತಾಗಲಿ' ಎಂದಿದ್ದರು.

    ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು? ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?

    ಅಂದ್ಹಾಗೆ, ನಟ ದರ್ಶನ್ ಪ್ರಾಣಿಪ್ರಿಯರು ಮತ್ತು ಮೂಲತಃ ರೈತರು ಕೂಡ ಹೌದು. ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದು ಅನೇಕ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಕುದುರೆ, ಹಸು, ಕುರಿ, ಮೇಕೆ, ಕೋಳಿ ಹೀಗೆ ಬಹುತೇಕ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ ದರ್ಶನ್.

    English summary
    Kannada actor, challenging star darshan proved he is a farmer. Today, Darshan campaigned in KR Pete Somanahalli.
    Thursday, April 11, 2019, 18:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X