twitter
    For Quick Alerts
    ALLOW NOTIFICATIONS  
    For Daily Alerts

    ಬುಲೆಟ್ ಪ್ರಕಾಶ್ ಬಿಟ್ಟುಹೋದ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್

    |

    ಹಾಸ್ಯ ನಟ ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿ ಮಿತ್ರರನ್ನು ಅವರು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.

    ಒಂದು ಕಾಲದಲ್ಲಿ ದಿನಕ್ಕೂ ಮೂರು-ನಾಲ್ಕು ಸಿನಿಮಾಗಳ ಶೂಟಿಂಗ್‌ ನಲ್ಲಿ ಭಾಗಿಯಾಗುತ್ತಿದ್ದ ಬುಲೆಟ್ ಇತ್ತೀಚೆಗೆ ಅನಾರೋಗ್ಯದ ಸಮಸ್ಯೆಯಿಂದ ಅವಕಾಶಗಳಿಲ್ಲದೆ ಕೊರಗಿದ್ದರು.

    ಕನಸು ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್ಕನಸು ಈಡೇರಿಸಿಕೊಳ್ಳದೆ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್

    ಬುಲೆಟ್ ಪ್ರಕಾಶ್ ಮಾನಸಿಕವಾಗಿ, ದೈಹಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿ ಕುಸಿದಿದ್ದರು. ಕೊನೆಗೆ ಇಂದು ಕಿಡ್ನಿ, ಲಿವರ್ ವೈಫಲ್ಯದಿಂದ ನಿಧನರಾಗಿದ್ದಾರೆ.

    ಬುಲೆಟ್ ಪ್ರಕಾಶ್ ನಿಧನ ಹೊಂದಿದ್ದಾರಾದರೂ ಅವರ ಗೆಳೆಯರು ಅವರ ಕುಟುಂಬದ ಕೈ ಬಿಟ್ಟಿಲ್ಲ. ಸ್ಟಾರ್ ನಟ ಬುಲೆಟ್ ಮಗಳ ಮದುವೆ ಜವಾಬ್ದಾರಿ ಹೊತ್ತಿದ್ದಾರೆ.

    ದರ್ಶನ್ ಸಿನಿಮಾದಲ್ಲಿ ಬುಲೆಟ್‌ಗೆ ಪಾತ್ರ ಮೀಸಲು

    ದರ್ಶನ್ ಸಿನಿಮಾದಲ್ಲಿ ಬುಲೆಟ್‌ಗೆ ಪಾತ್ರ ಮೀಸಲು

    ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಆತ್ಮೀಯರಾಗಿದ್ದರು. ದರ್ಶನ್ ಅಭಿನಯಿಸುವ ಪ್ರತಿ ಸಿನಿಮಾದಲ್ಲಿ ಬುಲೆಟ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು. ಇತ್ತೀಚೆಗೆ ಇಬ್ಬರೂ ದೂರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

    ಅತಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್

    ಅತಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್

    ಆದರೆ ದರ್ಶನ್ ಬೇರಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ, ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಬುಲೆಟ್ ಪ್ರಕಾಶ್ ಮಗಳ ಮದುವೆಯ ಅತಿ ದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡಿದ್ದಾರೆ.

    BIG BREAKING: ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶBIG BREAKING: ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶ

    ದಿನಕರ್ ತೂಗುದೀಪ್-ಬುಲೆಟ್ ಪ್ರಕಾಶ್ ವಿವಾದ

    ದಿನಕರ್ ತೂಗುದೀಪ್-ಬುಲೆಟ್ ಪ್ರಕಾಶ್ ವಿವಾದ

    ದರ್ಶನ್ ಸಿನಿಮಾವನ್ನು ತಾವು ನಿರ್ದೇಶಿಸಬೇಕು ಎಂಬ ಆಸೆ ಬುಲೆಟ್ ಪ್ರಕಾಶ್‌ ಗೆ ಇತ್ತು, ಅದಕ್ಕಾಗಿ ಅವರು ದರ್ಶನ್ ಕಾಲ್‌ಶೀಟ್ ಪಡೆದಿರುವುದಾಗಿಯೂ ಹೇಳಿದ್ದರು. ಇದು ದರ್ಶನ್ ತಮ್ಮ ದಿನಕರ್ ಮತ್ತು ಬುಲೆಟ್ ನಡುವೆ ಜಗಳಕ್ಕೆ ಕಾರಣವಾಯಿತು. ದಿನಕರ್ ತಮ್ಮನ್ನು ಹೊಡೆದಿದ್ದಾಗಿಯೂ ಬುಲೆಟ್ ಹೇಳಿಕೊಂಡಿದ್ದರು. ಘಟನೆ ನಂತರ ದರ್ಶನ್-ಬುಲೆಟ್ ದೂರಾದರು.

    ಈಡೇರಲೇ ಇಲ್ಲ ಬುಲೆಟ್ ಪ್ರಕಾಶ್ ಆಸೆ

    ಈಡೇರಲೇ ಇಲ್ಲ ಬುಲೆಟ್ ಪ್ರಕಾಶ್ ಆಸೆ

    ಆದರೆ ಕಳೆದ ಬಾರಿ ಬುಲೆಟ್‌ ಪ್ರಕಾಶ್ ಆಸ್ಪತ್ರೆ ಸೇರಿದಾಗ ದರ್ಶನ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬುಲೆಟ್ ಪ್ರಕಾಶ್‌ ಗೆ ಧೈರ್ಯ ತುಂಬಿದ್ದರು. ಆದರೆ ದರ್ಶನ್ ಸಿನಿಮಾ ನಿರ್ದೇಶಿಸಬೇಕು ಎಂಬ ಬುಲೆಟ್ ಆಸೆ ಈಡೇರಲೇ ಇಲ್ಲ.

    English summary
    Actor Darshan announce that he will take Bullet Prakash's daughter's marriage responsibility. Bullet and Darshan were good friends.
    Tuesday, June 30, 2020, 11:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X