Don't Miss!
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Finance ತನ್ನ ಯುಪಿಐ ಬಳಕೆದಾರರನ್ನು ನಾಲ್ಕು ಬ್ಯಾಂಕ್ಗಳಿಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದ Paytm
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಿರ್ದೇಶಕರಿವರು
'ಆಕ್ಷನ್... ಕಟ್...' ಈ ಎರಡು ಪದಗಳ ನಡುವೆ ನಡೆಯುವ ಜಾದು ಸಿನಿಮಾ. ಈ ರೀತಿ ಸಣ್ಣ ಸಣ್ಣ ಜಾದುವನ್ನು ಅದ್ಭುತವಾಗಿ ಪರದೆ ಮೇಲೆ ತಂದು ತೋರಿಸುವವನೇ ನಿರ್ದೇಶಕ.
ಇನ್ನು ಪ್ರತಿ ವರ್ಷ ಕೂಡ ಹೊಸ ಹೊಸ ನಿರ್ದೇಶಕರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ತಮ್ಮ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷವೂ ಅನೇಕ ನಿರ್ದೇಶಕರು ಪಾದಾರ್ಪಣೆ ಮಾಡಿದರು. ಇವರಲ್ಲಿ ಕೆಲವರು ಗೆದ್ದರು, ಕೆಲವರು ಸೋತರು, ಇನ್ನು ಕೆಲವರು ಪ್ರಯತ್ನಗಳನ್ನು ಮುಂದುವರೆಸಿದರು.
ಚೊಚ್ಚಲ ನಿರ್ದೇಶನದಲ್ಲಿ ಜೈಕಾರ ಹಾಕಿಸಿಕೊಂಡ ಡೈರೆಕ್ಟರ್ಸ್
ಅಂದಹಾಗೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ಬಂದ ಹೊಸ ನಿರ್ದೇಶಕರ ವಿವರ ಮುಂದಿದೆ ಓದಿ...
ಮಹೇಶ್ ಗೌಡ (ಅಯೋಗ್ಯ)
ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಸಾಲಿಗೆ ಸೇರುವುದು 'ಅಯೋಗ್ಯ'. ಯೋಗರಾಜ್ ಭಟ್ ಜೊತೆಗೆ ಕೆಲಸ ಕಲಿತ ಮಹೇಶ್ ಈ ಸಿನಿಮಾದ ಮೂಲಕ ನಿರ್ದೇಶಕನ ಪಟ್ಟ ಪಡೆದರು. ಮಾತ್ರವಲ್ಲದೆ, ಅದನ್ನು ಯಶಸ್ವಿಯಾಗಿ ನಿಭಾಯಿಸಿದರು. ಈ ಸಿನಿಮಾ ನೂರು ದಿನ ಪ್ರದರ್ಶನ ಕಂಡಿತು. ಜನರು ಮಂಡ್ಯದ ಬೆಲ್ಲದಂತೆ ಚಿತ್ರವನ್ನು ಸವಿದರು.
ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?
ಗುರುದತ್ ಗಾಣಿಗ (ಅಂಬಿ ನಿಂಗೆ ವಯಸ್ಸಾಯ್ತೋ)
ನಟ ಸುದೀಪ್ ಅವರ ಬಳಗದಲ್ಲಿ ಇದ್ದ ಗುರುದತ್ ಗಾಣಿಗ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಮೂಲಕ ಡೈರೆಕ್ಟರ್ ಆದರು. ಈ ಸಿನಿಮಾ ಚೆನ್ನಾಗಿ ಇದ್ದರೂ ತಕ್ಕ ಫಲ ಸಿಗಲಿಲ್ಲ. ಅದೆನೇ ಇದ್ದರೂ, ಈ ವಯಸ್ಸಿನಲ್ಲಿ ಅಂಬರೀಶ್ ಮತ್ತು ಸುದೀಪ್ ರೀತಿಯ ದಿಗ್ಗಜರಿಗೆ ಆಕ್ಷನ್ ಕಟ್ ಹೇಳಿದ ಗುರು ಸಾಹಸ ಮೆಚ್ಚಬೇಕು.
ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು?
ಸೆನ್ನಾ ಹೆಗ್ಡೆ (ಕಥೆಯೊಂದು ಶುರುವಾಗಿದೆ)
'ಕಥೆಯೊಂದು ಶುರುವಾಗಿದೆ' ಸಿನಿಮಾದ ಮೂಲಕ ಸೆನ್ನಾ ಹೆಗ್ಡೆ ನಿರ್ದೇಶಕನಾದರು. ಈ ಸಿನಿಮಾ ಒಂದು ಬ್ಯೂಟಿಫುಲ್ ಫೀಲ್ ನೀಡಿತ್ತು. ಮೇಕಿಂಗ್ ಹಾಗೂ ನಿರೂಪಣೆಯಲ್ಲಿ ಸೆನ್ನಾ ಹೆಗ್ಡೆ ಹೊಸತನವನ್ನು ತೋರಿಸಿದ್ದರು. ದಿಗಂತ್ ಗೆ ಈ ಚಿತ್ರ ಒಂದು ಬ್ರೇಕ್ ನೀಡಿತು.
ಜರ್ನಾಧನ್ ಚಿಕ್ಕಣ್ಣ (ಗುಳ್ಟು)
'ಗುಳ್ಟು' ರೀತಿಯ ಒಂದು ಸಿನಿಮಾವನ್ನು ಕನ್ನಡದಲ್ಲಿ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟವರು ಜರ್ನಾಧನ್ ಚಿಕ್ಕಣ್ಣ. ಕನ್ನಡದಲ್ಲಿ ಬರುತ್ತಿರುವ ವಿಭಿನ್ನ ಸಿನಿಮಾಗಳ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿತು. ತಂತ್ರಜ್ಙಾನದ ಕಥೆಯನ್ನು ಸಾಮಾನ್ಯ ಪ್ರೇಕ್ಷಕನಿಗೆ ತಲುಪಿಸಿ ಜರ್ನಾಧನ್ ಚಿಕ್ಕಣ್ಣ ಗೆಲುವು ಸಾಧಿಸಿದರು. ಸಿನಿಮಾ ನೂರು ದಿನ ಓಡಿತು.
ವಿಜಯ ರಾಘವೇಂದ್ರ (ಕಿಸ್ಮತ್)
ವಿಜಯ್ ರಾಘವೇಂದ್ರ ಅವರಿಗೆ ಈ ವರ್ಷ ಒಂದು ವಿಶೇಷಕ್ಕೆ ಸಾಕ್ಷಿಯಾಗಿದೆ. ಕಾರಣ, ಹೀರೋ ಆಗಿದ್ದ ವಿಜಯ ರಾಘವೇಂದ್ರ ಈ ವರ್ಷ ನಿರ್ದೇಶಕ ಸಹ ಆದರು. ಅವರ ಬಹುದಿನದ ಕನಸು 'ಕಿಸ್ಮತ್' ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟರು. ಆದರೆ, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಸೋಲು ಅನುಭವಿಸಿತು.
ರಿಶಿಕಾ ಶರ್ಮಾ (ಟ್ರಂಕ್)
ರಿಷಿಕಾ ಶರ್ಮಾ ಕನ್ನಡದ ಖ್ಯಾತ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮ್ಮಗಳು. ಇವರ ಮೊದಲ ನಿರ್ದೇಶಕನದ ಸಿನಿಮಾ 'ಟ್ರಂಕ್'. ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯಲಿಲ್ಲ. 'ಟ್ರಂಕ್' ಒಂದು ಕಂಪ್ಲಿಟ್ ಹಾರರ್ ಶೋ, ಥ್ರಿಲ್ ಜಾಸ್ತಿ ನೀಡಿತ್ತು.