Don't Miss!
- Automobiles ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಯುವರತ್ನ' ಚಿತ್ರದಲ್ಲಿ 'ಸಾಹೋ' ಸಾಹಸ ನಿರ್ದೇಶಕ
Recommended Video
'ಯುವರತ್ನ' ಚಿತ್ರತಂಡಕ್ಕ ಇತ್ತೀಚಿಗಷ್ಟೆ ನಟ ಪ್ರಕಾಶ್ ರೈ ಆಗಮನ ಆಗಿತ್ತು. ಈಗ ಸಿನಿಮಾದ ತಾಂತ್ರಿಕ ತಂಡಕ್ಕೆ ಸಾಹಸ ನಿರ್ದೇಶಕರ ಎಂಟ್ರಿಯಾಗಿದೆ. 'ಸಾಹೋ' ಚಿತ್ರದ ಸಾಹಸ ನಿರ್ದೇಶಕ 'ಯುವರತ್ನ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದಿದೆ. ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ದಿಲೀಪ್ ಸುಬ್ಬರಾಯನ್. ಇವರು ಈಗ' ಯುವರತ್ನ' ಸಿನಿಮಾ ಮಾಡುತ್ತಿದ್ದಾರೆ.
'ಯುವರತ್ನ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ಪ್ರಕಾಶ್ ರೈ
ದಿಲೀಪ್ ಸುಬ್ಬರಾಯನ್ ಚಿತ್ರತಂಡ ಸೇರಿಕೊಂಡ ವಿಷಯವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಸದ್ಯ 'ಯುವರತ್ನ' ಚಿತ್ರದ ಸಾಹಸ ನಿರ್ದೇಶನ ಧಾರವಾಡದಲ್ಲಿ ನಡೆಯುತ್ತಿದೆ.
ಪುನೀತ್ ರಾಜ್ ಕುಮಾರ್ ಅದ್ಬುತವಾಗಿ ಆಕ್ಷನ್ ಮಾಡುತ್ತಾರೆ. ಇಂತಹ ನಟನಿಗೆ ಅಷ್ಟೇ ಪ್ರತಿಭಾವಂತ ಫೈಟ್ ಮಾಸ್ಟರ್ ಸಿಕ್ಕಿದ್ದು, ಸಾಹಸ ದೃಶ್ಯಗಳು ಚೆನ್ನಾಗಿ ಬರುವುದರಲ್ಲಿ ಡೌಟೆ ಇಲ್ಲ.
ಧಾರವಾಡ ಕಡೆ ಪಯಣ ಬೆಳೆಸಿದ ಪುನೀತ್ ರಾಜ್ ಕುಮಾರ್ : ಕಾರಣ ಇಲ್ಲಿದೆ
'ಸಾಹೋ' ಮಾತ್ರವಲ್ಲದೆ ತಮಿಳಿನ 'ತೇರಿ', 'ವಿಶ್ವಾಸಂ', 'ಪುಲಿ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ದಿಲೀಪ್ ಸುಬ್ಬರಾಯನ್ ಆಕ್ಷನ್ ಡೈರೆಕ್ಟರ್ ಆಗಿದ್ದಾರೆ.