Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಗರುಡ ಗಮನ..' ನಂತರ ಯಾವ ಸಿನಿಮಾ? ರಾಜ್ ಬಿ ಶೆಟ್ರು ಕೊಟ್ರು ಉತ್ತರ
'ಒಂದು ಮೊಟ್ಟೆಯ ಕತೆ', 'ಗರುಡ ಗಮನ ವೃಷಭ ವಾಹನ' ಅಂಥಹಾ ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ರಾಜ್ ಬಿ ಶೆಟ್ಟಿ ಪೋಷಕ ಪಾತ್ರದಲ್ಲಿ ನಟಿಸಿರುವ '777 ಚಾರ್ಲಿ' ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ.
ದಶಕಗಳ ಕಾಲ ನೆನಪುಳಿವ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೀಡಿರುವ ರಾಜ್ ಬಿ ಶೆಟ್ಟಿಯವರ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಮನೆ ಮಾಡಿದೆ.
ವಿವಿಧ ರಾಜ್ಯಗಳ 21 ನಗರಗಳಲ್ಲಿ '777 ಚಾರ್ಲಿ' ಪ್ರೀಮಿಯರ್ ಶೋ!
'777 ಚಾರ್ಲಿ' ಸಿನಿಮಾ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ ತಮ್ಮ ಮುಂದಿನ ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ನಿಮ್ಮ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, 'ಗ್ಯಾಂಗ್ಸ್ಟರ್ ಮತ್ತು ಕಾಮಿಡಿ ಸಿನಿಮಾ ಮಾಡಬಾರದು ಎಂಬ ನಿಯಮ ಹಾಕಿಕೊಂಡಿದ್ದೇನೆ. ಆದರೆ ನನ್ನ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬುದು ನನಗೆ ಗೊತ್ತಿಲ್ಲ'' ಎಂದಿದ್ದಾರೆ.
ಗೊತ್ತಿಲ್ಲದ ವಿಷಯ ಹೆಕ್ಕಿ ಸಿನಿಮಾ ಮಾಡಬೇಕು: ರಾಜ್ ಬಿ ಶೆಟ್ಟಿ
''ಗೊತ್ತಿಲ್ಲದ ವಿಷಯವನ್ನು ಹೆಕ್ಕಿಕೊಳ್ಳಬೇಕು. ಆ ವಿಷಯಗಳು ನಿಮಗೆ ಪೂರ್ಣ ಗೊತ್ತಾಗುವವರೆಗೆ ಸಿನಿಮಾ ಪ್ರಾರಂಭ ಮಾಡಬಾರದು. ಗೊತ್ತಾದ ಮೇಲಷ್ಟೆ ಸಿನಿಮಾ ಪ್ರಾರಂಭ ಮಾಡಬೇಕು ಇದನ್ನು ನಾನು ನಂಬಿದ್ದೇನೆ. ಈ ಪ್ರಕ್ರಿಯೆಯಿಂದ ಹೊಸದನ್ನು ಕಲೀತೀರ. ಇದರಿಂದ ಸಿನಿಮಾ ಫ್ರೆಶ್ ಆಗಿ ಕಾಣುತ್ತದೆ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ನಿಯಮ ಹಾಕಿಕೊಂಡಿದ್ದೇನೆ: ರಾಜ್ ಬಿ ಶೆಟ್ಟಿ
''ಕಾಮಿಡಿ ಮತ್ತು ಗ್ಯಾಂಗ್ಸ್ಟರ್ ಎರಡೂ ನನಗೆ ಗೊತ್ತಿಲ್ಲದ ವಿಷಯ. ಅದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿದ್ದೇನೆ. ಈಗ ಮುಂದೇನು ಮಾಡುತ್ತೇನೆ ಅದೂ ನನಗೆ ಗೊತ್ತಿರಲ್ಲ. ಅದನ್ನೆಲ್ಲ ಗೊತ್ತು ಮಾಡಿಕೊಂಡು ಸಿನಿಮಾ ಮಾಡಲು ಸ್ವಲ್ಪ ಟೈಮ್ ಬೇಕು. ನನಗೆ ಒಂದರ ನಂತರ ಒಂದು ಸಿನಿಮಾ ಮಾಡಬೇಕು ಎಂಬ ತುರ್ತು ಇಲ್ಲ ಹಾಗಾಗಿ ಈಗ ಸದ್ಯಕ್ಕೆ ಆರಾಮವಾಗಿ ವಾಲಿಬಾಲ್ ಆಡಿಕೊಂಡು ಓಡಾಡಿಕೊಂಡು ಇದ್ದೀನಿ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಾಜ್ ಬಿ ಶೆಟ್ಟಿ
ನಿರ್ದೇಶನ ಬಿಡಿ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದೀರ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಬಿ ಶೆಟ್ಟಿ, ''ನಾನು ಯಾವುದೇ ಸಿನಿಮಾದಲ್ಲಿ ಬ್ಯುಸಿ ಇಲ್ಲ. ಯಾವ ಸಿನಿಮಾವನ್ನೂ ಸಹ ನಾನು ಒಪ್ಪಿಕೊಂಡಿಲ್ಲ. ನನ್ನನ್ನು ಪೂರ್ಣಗೊಳಿಸುವಂಥಹಾ ಸಿನಿಮಾಗಳನ್ನು ಮಾಡಬೇಕು ಎಂಬ ಕಾರಣಕ್ಕೆ ನಾನು ಯಾವ ಸಿನಿಮಾದಲ್ಲಿಯೂ ಮಾಡುತ್ತಿಲ್ಲ. ಅಂಥಹಾ ಕತೆಗಳು ಬಂದರೆ, ನನ್ನನ್ನು 'ಕಂಪ್ಲೀಟ್' ಮಾಡುವಂತ ಸಿನಿಮಾ ಆಗಬೇಕು. ಅಂಥಹಾ ಸಿನಿಮಾ ಸಿಗುತ್ತೆ ಅಂದುಕೊಂಡಿದ್ದೇನೆ, ಸಿಕ್ಕಾಗ ಖಂಡಿತ ಮಾಡುತ್ತೇನೆ'' ಎಂದಿದ್ದಾರೆ ರಾಜ್ ಬಿ ಶೆಟ್ಟಿ.
ಜೂನ್ 10 ಕ್ಕೆ ಬಿಡುಗಡೆ ಆಗಲಿದೆ '777 ಚಾರ್ಲಿ'
ರಾಜ್ ಬಿ ಶೆಟ್ಟಿ ಪ್ರಸ್ತುತ '777 ಚಾರ್ಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಕಿರಣ್ ರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕ ಪಾತ್ರದಲ್ಲಿ ನಟಿಸಿದ್ದು, ನಾಯಿ ಹಾಗೂ ನಾಯಕ ನಟನ ನಡುವಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವು ಜೂನ್ 10 ಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು.