Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಠ ಗುರುಪ್ರಸಾದ್ ಕಣ್ಣು ಸಾ.ರಾ.ಗೋವಿಂದ್ ಮಗನ ಮೇಲೆ ಬಿದ್ಬಿಟೈತೆ
ಗುರುಪ್ರಸಾದ್ ಅಂದ್ರೆ ಮಾತಿನ ಮಲ್ಲ... ಸಿನಿಮಾದಲ್ಲೇ ಆಗಲಿ, ರಿಯಲ್ ಆಗಿಯೇ ಆಗಲಿ... ಅವ್ರನ್ನ ಮಾತಿನಲ್ಲಿ ಸೋಲಿಸೋದು ಕಷ್ಟ. 'ಎರಡನೇ ಸಲ' ಸಿನಿಮಾ ಮಾಡಿ ತಮ್ಮದೇ ಚಿತ್ರತಂಡದೊಂದಿಗೆ ಫೈಟ್ ಮಾಡಿದ್ದ ಗುರು ಈಗ ಮತ್ತೊಂದು ಹೊಸ ಸಿನಿಮಾ ಮಾಡ್ತಿದ್ದಾರೆ.
ಗುರುಪ್ರಸಾದ್ 'ಎರಡನೇ ಸಲ' ಸಿನಿಮಾ ರಿಲೀಸ್ ಆಗೋಕ್ಕೂ ಮುಂಚೆನೇ 'ಅದೇಮಾ' ಅನ್ನೋ ಸಿನಿಮಾ ಮಾಡೋದಾಗಿ ಪ್ರಚಾರ ಮಾಡಿದ್ರು. ಅದ್ರೀಗ ಈ ಸಿನಿಮಾ ಸೆಟ್ಟೇರುತ್ತಿದೆ.
'ಅದೇಮಾ' ಸಿನಿಮಾದ ಮುಹೂರ್ತ ಇದೇ ತಿಂಗಳು 24ಕ್ಕೆ ಅಂದ್ರೆ ಡಾ.ರಾಜ್ ಕುಮಾರ್ ಅವ್ರ ಹುಟ್ಟುಹಬ್ಬದಂದು ನಡೆಯಲಿದೆ. ವಿಶೇಷ ಅಂದ್ರೆ ಈ ಸಿನಿಮಾದ ನಾಯಕನಾಗಿ ಆಯ್ಕೆ ಆಗಿರೋದು ಸಾ.ರಾ.ಗೋವಿಂದ್ ಪುತ್ರ ಅನೂಪ್.
ಗುರುಪ್ರಸಾದ್ ನಿರ್ದೇಶನದಲ್ಲಿ ಅನೂಪ್ ಸಾ.ರಾ.ಗೋವಿಂದ್ ಸಿನಿಮಾ ಮಾಡೋದು ಪಕ್ಕಾ ಅಂತೆ. ಈ ವಿಷಯವನ್ನ ಸ್ವತಃ ಅನೂಪ್ ಫಿಲ್ಮಿ ಬೀಟ್ ಗೆ ಕನ್ಫರ್ಮ್ ಮಾಡಿದ್ದಾರೆ. ಜೊತೆಗೆ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾ ಲಾಂಚ್ ಆಗಿರೋದು ತುಂಬನೇ ಖುಷಿ ಕೊಟ್ಟಿದೆ ಎಂದಿದ್ದಾರೆ.
'ಅದೇಮಾ' ಸಿನಿಮಾ ಶ್ರೀಧರ್ ರೆಡ್ಡಿ ತಮ್ಮ ಶ್ರೀ ವಿಜಯ ಗಣಧಿಪತಿ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಮುಹೂರ್ತ ಇದೇ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಗ್ರ್ಯಾಂಡ್ ಆಗಿ ನೆರವೇರಲಿದೆ. ಸದ್ಯ 'ಮಿಸ್ಟರ್ ಪರ್ಫೆಕ್ಟ್' ಮತ್ತು 'ಸುಬ್ಬ ಸುಬ್ಬಿ' ಸಿನಿಮಾದಲ್ಲಿ ಅನೂಪ್ ಸಖತ್ ಬಿಜಿಯಾಗಿದ್ದಾರೆ.