Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನತಾ ಕರ್ಪ್ಯೂ ದಿನ ಜನ ಮೆಚ್ಚುವ ಕಾರ್ಯ ಮಾಡಿದ ಲೂಸಿಯಾ ಪವನ್ ಕುಮಾರ್
ಲೂಸಿಯಾ ಸಿನಿಮಾ ಮೂಲಕ ತಾವೊಬ್ಬ ಭಿನ್ನ ಹಾದಿ ತುಳಿಯುವ ನಿರ್ದೇಶಕರೆಂದು ರುಜುವಾತು ಮಾಡಿದ್ದ ಪವನ್ ಕುಮಾರ್ ಸಿನಿಮಾವನ್ನು ಪ್ರೀತಿಸುವಷ್ಟೆ ಸಿನಿಮಾಕ್ಕಾಗಿ ದುಡಿಯುವವರ ಬಗ್ಗೆಯೂ ಕಾಳಜಿ ಹೊಂದಿರುವವರು.
ಜನತಾ ಕರ್ಪ್ಯೂ ದಿನ ಬೇರೆ ನಟರು, ನಿರ್ದೇಶಕರು ಮನೆಯಲ್ಲಿ ಕೂತು ಸಿನಿಮಾ ನೋಡಿಯೋ, ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ ಆದರೆ ಪವನ್ ಕುಮಾರ್ ಮಾತ್ರ ಈ ದಿನವನ್ನು ಇತರರಿಗೆ ಸಹಾಯ ಮಾಡುತ್ತಾ ಕಳೆದಿದ್ದಾರೆ.
ಹೌದು, ಜನತಾ ಕರ್ಪ್ಯೂ ದಿನ ಮನೆಯಲ್ಲೇ ಕುಳಿತರೂ ಸಹ ಹಲವರಿಗೆ ಸಹಾಯ ಮಾಡುವ ಕಾರ್ಯವನ್ನು ಪವನ್ ಕುಮಾರ್ ಮಾಡಿದ್ದಾರೆ. ಕೊರೊನಾ ಕಾರಣದಿಂದ ಚಿತ್ರರಂಗ ಬಂದ್ ಆಗಿದ್ದು, ಈ ಬಂದ್ ನಿಂದ ಸಿನಿಮಾಕ್ಕಾಗಿ ದುಡಿಯುವ ದಿನಗೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದು, ಅವರ ಸಹಾಯಕ್ಕಾಗಿ ಇಂದಿನ ದಿನವನ್ನು ಪವನ್ ಕುಮಾರ್ ಮೀಸಲಿಟ್ಟಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡುತ್ತಲೇ ಇರುವ ಪವನ್ ಕುಮಾರ್
ಇಂದು ಬೆಳಿಗ್ಗೆ 10 ಗಂಟೆಯಿಂದ ಸತತವಾಗಿ ವಿವಿಧ ನಟ-ನಟಿಯರೊಂದಿಗೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಲೈವ್ ಸಂದರ್ಶನ, ಲೈವ್ ಸ್ಕ್ರಿಪ್ಟ್ ರೀಡಿಂಗ್ ಇತರೆ ಕಾರ್ಯಗಳನ್ನು ಮಾಡುತ್ತಲೇ ಇರುವ ಪವನ್ ಕುಮಾರ್, ಈ ನಡುವೆ ದಿನಗೂಲಿ ನೌಕರರಿಗೆ ಸಹಾಯವನ್ನೂ ಮಾಡುತ್ತಿದ್ದಾರೆ.
ಆನ್ಲೈನ್ನಲ್ಲಿ ಹಣ ಒಟ್ಟು ಮಾಡಿದ ಪವನ್ ಕುಮಾರ್
ಚಿತ್ರೀಕರಣ ಬಂದ್ ಆಗಿರುವುದರಿಂದ ಸಾವಿರಾರು ಮಂದಿ ದಿನಗೂಲಿ ನಂಬಿದ್ದ ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸಹಾಯ ಮಾಡಿರೆಂದು ಪವನ್ ಕುಮಾರ್ ಮನವಿ ಮಾಡಿ, ಆನ್ಲೈನ್ನಲ್ಲಿ ಹಣ ಕಳಿಸುವಂತೆ ಮನವಿ ಮಾಡಿದ್ದರು.
ಪವನ್ ಗೆ ಹಣ ಕಳುಹಿಸಿದ್ದಾರೆ ಹಲವರು
ಪವನ್ ಕುಮಾರ್ ಅವರ ಮನವಿಗೆ ಸ್ಪಂದಿಸಿದ ಹಲವು ಮಂದಿ ತಮ್ಮ ಕೈಲಿ ಆದಷ್ಟು ಹಣವನ್ನು ಪವನ್ ಕುಮಾರ್ ನೀಡಿದ್ದ ಖಾತೆಗೆ ಕಳುಹಿಸಿದ್ದಾರೆ. ಇನ್ನೂ ಕಳುಹಿಸುತ್ತಿದ್ದಾರೆ. ಹಣ ಕಳಿಸಿದವರ ಪಟ್ಟಿಯನ್ನು ಪವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಚಿತ್ರರಂಗದಲ್ಲಿ ಕೆಲಸ ಮಾಡುವ ದಿನಗೂಲಿ ನಂಬಿಕೊಂಡ ಸಿಬ್ಬಂದಿಗಳಿಗೆ ನೀಡಲಾಗುವುದೆಂದು ಪವನ್ ಕುಮಾರ್ ಹೇಳಿದ್ದಾರೆ.
ನಟ ಧನಂಜಯ್, ಶ್ರದ್ಧಾ ಶ್ರೀನಾಥ್ ಜೊತೆ ಲೈವ್
ಪವನ್ ಕುಮಾರ್ ಅವರು ಬೆಳಿಗ್ಗಿನಿಂದ ನಟ ಧನಂಜಯ್, ನಟಿ ಶ್ರದ್ಧಾ ಶ್ರೀನಾಥ್ ಸೇರಿ ಹಲವು ಮಂದಿಯ ಜೊತೆ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರದ್ಧಾ ಅವರೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಅನ್ನು ಅವರು ಮಾಡಿದರು.