twitter
    For Quick Alerts
    ALLOW NOTIFICATIONS  
    For Daily Alerts

    'ಮನದ ಮರೆಯಲ್ಲಿ' ಅಣ್ಣಾವ್ರ ಆದರ್ಶ ಸಾಕಾರ

    By Rajendra
    |

    Manada Mareyalli still
    ವರನಟ, ಗಾನಗಂಧರ್ವ ಡಾ.ರಾಜ್ ಕುಮಾರ್ ಅವರು ನೇತ್ರದಾನದ ಬಗ್ಗೆ ಹೇಳುತ್ತಿದ್ದ ಮಾತುಗಳೇ ಚಿತ್ರವೊಂದಕ್ಕೆ ಸ್ಫೂರ್ತಿಯಾಗಿವೆ. ಕೇವಲ ನೇತ್ರದಾನ ಮಾಡಿ ಎಂದು ಅಣ್ಣಾವ್ರು ಹೇಳದೆ ಸ್ವತಃ ಅದನ್ನು ಪಾಲಿಸಿದರು. ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಆದರ್ಶ ಮೆರೆದರು.

    ನೇತ್ರದಾನದ ಬಗ್ಗೆ ಅಣ್ಣಾವ್ರ ಹೇಳಿಕೆ ಹಾಗೂ ಅವರ ಆದರ್ಶಗಳನ್ನು ಮುಖ್ಯವಾಗಿಸಿಕೊಂಡು ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ಹೆಸರು 'ಮನದ ಮರೆಯಲ್ಲಿ'. ಚಿತ್ರದ ಅಡಿಬರಹ "ನೂರೊಂದು ನೆನಪು". ಯು.ಎಂ.ಡ್ರೀಮ್ಸ್ ಮೂವೀಸ್ ಸಂಸ್ಥೆ ಲಾಂಛನದಲ್ಲಿ ಮಹೇಶ್ ಆನೇಕಲ್ ಅವರು ನಿರ್ಮಿಸುತ್ತಿರುವ ಚಿತ್ರವಿದು.

    ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಬ್ಬರೂ ಹೊಸಬರು. ವಿಂಧ್ಯಾ ಎಂಬ ಹೊಸ ಹುಡುಗಿ ಈ ಚಿತ್ರದ ಮೂಲಕ ಕನ್ನಡ ಪರಿಚಯವಾಗುತ್ತಿದ್ದಾರೆ. 'ಒಲವೇ ಮಂದಾರ'ದ ಶ್ರೀಕಾಂತ್ (ಶ್ರೀಕಿ) ಚಿತ್ರದ ನಾಯಕ ನಟ. ಇತ್ತೀಚೆಗೆ ಈ ಚಿತ್ರಕ್ಕೆ ನಾರಾಯಣ ನೇತ್ರಾಲಯದಲ್ಲಿ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆಯಿತು.

    ರಾಜ್ ಕಿಶೋರ್, ಎಚ್ ವಾಸು, ಬಿ ಮಲ್ಲೇಶ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಎ.ಹೆಚ್. ರಾಜೀವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ.

    ಖ್ಯಾತ ನಟ ಅನಂತಾನಾಗ್ ವೈದ್ಯರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನವೀನ್ ಸುವರ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತ ನೀಡುತ್ತಿದ್ದಾರೆ. ಎಂ.ಯೋಗೇಂದ್ರ ನೃತ್ಯ ನಿರ್ದೇಶನ ಹಾಗೂ ಎನ್.ಕೆ.ಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬೆಂಗಳೂರು, ಮಡಿಕೇರಿಯಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. (ಒನ್ಇಂಡಿಯಾ ಕನ್ನಡ)

    English summary
    Kannada film 'Manada Mareyalli'....Noorondu Nenapu producing by Mahesh Anekal inspired from the ideology of icon of Kannada cinema Dr Rajakumar 'Nethra Daana Maha Daana' (Eye donation is the best donation in life). The shooting of this film will be held in Bangalore, Madikeri in one schedule says director Rajeev Nethra.
    Monday, November 19, 2012, 16:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X