Just In
Don't Miss!
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಾ ರಾಜ್ ಯೋಗ ಕೇಂದ್ರ ಸ್ಥಾಪನೆಗೆ ಮುಂದಾದ ಸಿದ್ದರಾಮಯ್ಯ ಸರ್ಕಾರ
ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ ರಾಜ್ ಕುಮಾರ್ ಸ್ಮಾರಕದ ಬಳಿ ಯೋಗ ಕೇಂದ್ರ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಸರ್ಕಾರ ಸ್ಮಾರಕ್ಕಾಗಿ ನೀಡಿದ್ದ ಜಾಗದಲ್ಲಿ ಡಾ ರಾಜ್ ಕುಮಾರ್ ಅವರ ವಸ್ತು ಸಂಗ್ರಹಾಲಯ ಮಾಡಬೇಕಾಗಿ ಡಾ ರಾಜ್ ಕುಟುಂಬದವರು ಯೋಚನೆ ಮಾಡಿದ್ದರು.
ಡಾ ರಾಜ್ ಕುಮಾರ್ ಪ್ರತಿನಿತ್ಯ ಯೋಗ ಮಾಡುತ್ತಿದ್ದರು ನಾಯ್ಕರ್ ಎನ್ನುವವರು ಅಣ್ಣಾವ್ರಿಗೆ ಯೋಗವನ್ನು ಕಲಿಸುತ್ತಿದ್ದರು. ತಮ್ಮ ಆತ್ಮೀಯರಿಗೂ ಯೋಗ ಕಲಿಯುವಂತೆ ತಿಳಿಸುತ್ತಿದ್ದರು. ಇದೇ ಉದ್ದೇಶವನ್ನು ಇಟ್ಟುಕೊಂಡು ಡಾ ರಾಜ್ ಸ್ಮಾರಕದ ಬಳಿ ಯೋಗ ಕೇಂದ್ರವನ್ನ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಫಿಲ್ಮಿ ಬೀಟ್ ಜೊತೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ "ವಿಚಾರ ಕೇಳಿ ತುಂಬಾ ಖುಷಿ ಆಗಿದೆ. ಅಪ್ಪಾಜಿ ಅವರೇ ಇದನ್ನ ಮಾಡಿಸಿಕೊಳ್ಳುತ್ತಾರೆ ಅಂದರೆ ಅವರಿಗಿರುವ ಖ್ಯಾತಿ ಮತ್ತು ಅಭಿಮಾನಿಗಳಿಂದ ಅವರಿಗೆ ಸಲ್ಲಬೇಕಾದದ್ದು ಎಲ್ಲವೂ ಸಲ್ಲುತ್ತದೆ ಎನ್ನುವುದು ತಿಳಿದಿದ್ದು. ಇದಕ್ಕಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ.
ಯೋಗ ಕೇಂದ್ರ ಸ್ಥಾಪನೆ ಆದರೆ ಅಣ್ಣಾವ್ರಂತೆ ಅವರ ಅಭಿಮಾನಿಗಳು ಕೂಡ ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ. ಕಂಠೀರವ ಸ್ಟುಡಿಯೋ ಸುತ್ತಾ ಮುತ್ತ ಇರುವ ಸಾಮಾನ್ಯ ಜನರು ಇದರ ಲಾಭ ಪಡೆದುಕೊಳ್ಳಬಹುದು.