Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗ್ನಿ ಶ್ರೀಧರ್ ಜೊತೆ ದುನಿಯಾ ಸೂರಿ 'ದಾದಾಗಿರಿ'
ನಿರ್ದೇಶಕ ದುನಿಯಾ ಸೂರಿ ಹಳೇ ಫಾರ್ಮ್ ಗೆ ಮರಳಿದ್ದಾರೆ. 'ಕಡ್ಡಿಪುಡಿ' ಚಿತ್ರದ ನಂತ್ರ ಅನೇಕ ಕಾರಣಗಳಿಂದಾಗಿ ನಾಪತ್ತೆಯಾಗಿದ್ದ ದುನಿಯಾ ಸೂರಿ ಈಗ 'ಕೆಂಡಸಂಪಿಗೆ'ಯನ್ನ ಹೊತ್ತು ಬಂದಿರುವುದು ನಿಮಗೆ ಗೊತ್ತಿದೆ.
'ಅಣ್ಣಾ ಬಾಂಡ್' ಮತ್ತು 'ಕಡ್ಡಿಪುಡಿ' ಚಿತ್ರಗಳು ನಿರೀಕ್ಷೆಗಳನ್ನೆಲ್ಲಾ ಹುಸಿಗೊಳಿಸಿದ ಕಾರಣ, ಈ ಬಾರಿ ಎಸ್.ಸುರೇಂದ್ರನಾಥ್ ಅವರ ಕಥೆಯನ್ನಿಟ್ಟುಕೊಂಡು ಸೂರಿ 'ಕೆಂಡಸಂಪಿಗೆ' ಮಾಡಿದ್ದಾರೆ. ರಿಸ್ಕ್ ಇಲ್ಲದೇ ನೀರಿಗಿಳಿದಿರುವ ದುನಿಯಾ ಸೂರಿ, ಅದೇ ಹಾದಿಯಲ್ಲಿ ಮತ್ತೊಂದು ಪ್ಲಾನ್ ಮಾಡಿದ್ದಾರೆ. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]
ಅಗ್ನಿ ಶ್ರೀಧರ್ ಜೊತೆ ಒಂದು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ ನಿರ್ದೇಶಕ ದುನಿಯಾ ಸೂರಿ. ಅಗ್ನಿ ಶ್ರೀಧರ್ ರವರ ಕಥೆಯನ್ನಿಟ್ಟುಕೊಂಡು ಅವರ ಬ್ಯಾನರ್ ನಲ್ಲೇ ಚಿತ್ರ ನಿರ್ದೇಶಿಸಲಿದ್ದಾರೆ ನಿರ್ದೇಶಕ ಸೂರಿ. [ಖಡಕ್ ಅಗ್ನಿ ಶ್ರೀಧರ್ ಮತ್ತೆ ಎದೆಗಾರಿಕೆಯೊಂದಿಗೆ ಹಾಜರ್]
ಈ ಬಗ್ಗೆ ಅಗ್ನಿ ಶ್ರೀಧರ್ ಜೊತೆ ಮಾತುಕತೆ ನಡೆಸಿರುವ ದುನಿಯಾ ಸೂರಿ, ಚಿತ್ರಕಥೆ ಬಗ್ಗೆ ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಮೊದಲೇ ಸೂರಿ ರೌಡಿಸಂ ಸಿನಿಮಾಗಳು, ರಿಯಲಿಸ್ಟಿಕ್ ಚಿತ್ರಗಳನ್ನ ಮಾಡುವುದರಲ್ಲಿ ಎತ್ತಿದ ಕೈ. ಇನ್ನೂ ಅಗ್ನಿ ಶ್ರೀಧರ್, ಬೆಂಗಳೂರು ಅಂಡರ್ ವರ್ಲ್ಡ್ ನ ಕರಾಳ ಅಧ್ಯಾಯದ ಬಗ್ಗೆ 'ದಾದಾಗಿರಿಯ ದಿನಗಳು' ಅನ್ನುವ ಪುಸ್ತಕವನ್ನ ರಚಿಸಿದ್ದಾರೆ.
ಕಥೆಗಾಗಿ ಅಗ್ನಿ ಶ್ರೀಧರ್ ಮೊರೆ ಹೋಗಿರುವ ದುನಿಯಾ ಸೂರಿ, ಹಳೇ ಬೆಂಗಳೂರಿನ ದಾದಾಗಿರಿಯ ದಿನಗಳನ್ನ ತೆರೆಮೇಲೆ ತಂದರೂ ಅಚ್ಚರಿ ಇಲ್ಲ. ಆದ್ರೆ, ಅದೆಲ್ಲಾ ಆಗಬೇಕು ಅಂದ್ರೆ ಮೊದಲು ಪುನೀತ್ ಅಭಿನಯದ 'ದೊಡ್ಮನೆ ಹುಡುಗ' ಕಂಪ್ಲೀಟ್ ಆಗಬೇಕು. ಆಮೇಲೆ 'ದಾದಾಗಿರಿ'ಯೋ ಇಲ್ಲಾ 'ಗಾಂಧಿಗಿರಿ'ಯೋ ನಿರ್ಧಾರವಾಗುತ್ತೆ. (ಏಜೆನ್ಸೀಸ್)