Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುನಿಯಾ ವಿಜಯ್ ಕಿವಿಮಾತು; ಪ್ರೇಮಿಗಳು ಕೇಳಲೇಬೇಕು
'ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು' ಅನ್ನುವ ಕಾಲವೊಂದಿತ್ತು. ಆದ್ರೀಗ, ಕಾಲ ಬದಲಾಗಿದೆ. ಪ್ರೀತಿ-ಪ್ರೇಮ ಅಂತ ತಲೆ ಕೆಡಿಸಿಕೊಳ್ಳೋರ ಸಂಖ್ಯೆ ಕಡಿಮೆ. ಈಗೇನಿದ್ದರೂ, ಮೀಟಿಂಗ್-ಡೇಟಿಂಗ್ ಮತ್ತು ಬ್ರೇಕಪ್ ಯುಗ.
ಫಾಸ್ಟ್ ಟ್ರ್ಯಾಕ್ ನಲ್ಲಿರುವ ಈಗಿನ ಯುವ ಜನಾಂಗದಲ್ಲಿ ಮನಸ್ಸಿನಿಂದ ಪ್ರೀತಿ ಮಾಡುವವರು ಬಹಳ ವಿರಳ. ಅಂತವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ನಮ್ಮ 'ಕರಿಚಿರತೆ' ದುನಿಯಾ ವಿಜಯ್, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುವವರನ್ನ ಭೇಟಿಯಾಗಲು ನಿರ್ಧರಿಸಿದ್ದಾರೆ. ['RX ಸೂರಿ' ಚಿತ್ರ ನೋಡಿ ಸೀಟಿ ಹೊಡೆದ ಶಿವಣ್ಣ]
ಅಂತಹ ನಿಜವಾದ ಪ್ರೇಮಿಗಳನ್ನ ಮೀಟ್ ಮಾಡಿ, ಜೀವನವನ್ನ ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವ ಬಗ್ಗೆ ಕಿವಿಮಾತು ಹೇಳಲು ದುನಿಯಾ ವಿಜಯ್ ನಿರ್ಧರಿಸಿದ್ದಾರೆ.
ದುನಿಯಾ ವಿಜಯ್ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ 'RX ಸೂರಿ' ಸಿನಿಮಾ. ''RX ಸೂರಿ' ಚಿತ್ರದ ನಾಯಕಿ ಪಾತ್ರದಲ್ಲಿ ತುಂಬಾ ಮುಗ್ಧತೆ ಇದೆ. ಇದು ಕಾಲ್ಪನಿಕ ಪಾತ್ರ ಅಲ್ಲ. ಬೆಂಗಳೂರಿನ ಹುಡುಗಿಯೊಬ್ಬಳ ನೈಜ ಕಥೆ. ಆಕೆ ಅಷ್ಟು ನಿಯತ್ತಿನಿಂದ ಪ್ರೀತಿ ಮಾಡ್ತಿದ್ರು. ಹುಡುಗ ರೌಡಿ ಅನ್ನೋದು ಗೊತ್ತಿದ್ದರೂ, ಮನಸ್ಸಿನ ಮಾತು ಕೇಳಿದ್ರು.'' [ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ]
''ಕೊನೆಗೆ ಹುಡುಗ ತೀರಿಕೊಂಡಿದ್ದನ್ನ ಸಹಿಸಿಕೊಳ್ಳುವುದಕ್ಕೆ ಆಗದೆ, ಆಕೆ ಆತ್ಮಹತ್ಯೆ ಮಾಡಿಕೊಂಡರು. ಈ ಕಥೆ ಕೇಳಿ ನನ್ನ ಮನಸ್ಸಿಗೆ ಬೇಸರವಾಯ್ತು. ಪ್ರೀತಿ ಮಾಡುವವರು ಮೊದಲು ಆಯ್ಕೆ ಸರಿಯಾಗಿ ಮಾಡಿಕೊಳ್ಳಬೇಕು. ಏನೇ ಆದರೂ, ಬದುಕಿ ತೋರಿಸಬೇಕು. ಇದೇ ಕಾರಣಕ್ಕೆ ಲವ್ವರ್ಸ್ ನ ಮೀಟ್ ಮಾಡಬೇಕು ಅಂದುಕೊಂಡಿದ್ದೇನೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ದುನಿಯಾ ವಿಜಯ್ ತಿಳಿಸಿದರು. ['ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ನೀಡಿದ ಬ್ರೇಕಿಂಗ್ ನ್ಯೂಸ್.!]
ದುನಿಯಾ ವಿಜಯ್ ಜೊತೆ ಮಾತನಾಡುವ ಆಸಕ್ತಿ ಇದ್ರೆ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....