Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಕಂಪನದಿಂದ ನಟಿ ಲೀಲಾವತಿ ಮನೆ ಬಿರುಕು.! ವಿನೋದ್ ರಾಜ್ ಗೆ ನಡುಕ.!
ಇಂದು (ಏಪ್ರಿಲ್ 18) ಬೆಳಗ್ಗೆ ಸಂಭವಿಸಿದ ಭೂಕಂಪನದ ಬೆಂಗಳೂರಿನ ಜನ ಆತಂಕಕ್ಕೀಡಾಗಿದ್ದು, ಹಿರಿಯ ನಟಿ ಲೀಲಾವತಿ ಅವರಿಗೂ ಭೂಕಂಪನದ ಅನುಭವವಾಗಿದೆಯಂತೆ. ಈ ವೇಳೆ ಲೀಲಾವತಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿರುವ ಘಟನೆ ಕೂಡ ನಡೆದಿದೆ.[ಉದ್ಯಾನನಗರಿ ಬೆಂಗಳೂರಿನಲ್ಲೂ ಭೂಕಂಪ?!]
ಹಿರಿಯ ನಟಿ ಲೀಲಾವತಿ ಹಾಗೂ ಅವರ ಮಗ ವಿನೋದ್ ರಾಜ್ ಇಬ್ಬರಿಗೂ ಭೂಕಂಪನದ ಅನುಭವವಾಗಿದ್ದು, ಕೆಲ ಕಾಲ ಗಾಬರಿಯಾಗಿದ್ದರಂತೆ. ಈ ಕುರಿತು ಫಿಲ್ಮಿಬೀಟ್ ಜೊತೆ ಮಾತನಾಡಿದ ವಿನೋದ್ ರಾಜ್ ಅವರು ತಮಗಾದ ಅನುಭವ ಬಗ್ಗೆ ಹೇಳಿಕೊಂಡಿದ್ದಾರೆ.[ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!]
''ಬೆಳಿಗ್ಗೆ ಸುಮಾರು 7.15 ರಿಂದ 7,30 ಸಮಯ. ನಾನು ಬಾತ್ ರೂಂನಲ್ಲಿದ್ದೆ. ಇದ್ದಕ್ಕಿದ್ದಾಗೆ ದೊಡ್ಡ ಶಬ್ದ ಆಯಿತು. ನಾನೇನೋ ತೋಟದಲ್ಲಿ ಕೆಲಸ ನಡೆಯುತ್ತಿರುತ್ತೆ ಅಲ್ವಾ. ಮೊದಲು ಟ್ರ್ಯಾಕ್ಟರ್ ಏನಾದರೂ ಬಂದಿರಬಹುದು ಎಂದು ಕೊಂಡೆ, ಆದ್ರೆ, ಆ ಅನುಭವ 10-12 ಸೆಕೆಂಡ್ ಕಾಲ ಇತ್ತು. ಭಯ ಆಗಿ ಜೋರಾಗಿ ಅಮ್ಮ ಅಮ್ಮ ಅಂತ ಕಿರುಚಿಕೊಂಡೆ. ಆಮೇಲೆ ಅಮ್ಮನ ಬಳಿ ಓಡಿ ಬಂದೆ, ಅಮ್ಮನಿಗೂ ಆದೇ ರೀತಿಯ ಅನುಭವವಾಗಿತ್ತು'' ಎಂದರು.[ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು]