Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್
ಕನ್ನಡ ನಟ ದರ್ಶನ್ ಅವರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ 'ಬಾಕ್ಸಾಫೀಸ್ ಸುಲ್ತಾನ' ಮತ್ತು 'ಚಾಲೆಂಜಿಂಗ್ ಸ್ಟಾರ್' ಎಂಬ ಎರಡು ಬಿರುದುಗಳಿವೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ನಡುವೆ ಅವರಿಗೆ ಇನ್ನೂ ಕೆಲವು ಹೊಸ-ಹೊಸ ಬಿರುದುಗಳಿವೆ ದಕ್ಕಿವೆ.
ಹೌದು ಇದೀಗ ದರ್ಶನ್ ಅವರಿಗೆ ಹೊಸದಾಗಿ 'ಈ ಯುಗದ ಬಂಗಾರದ ಮನುಷ್ಯ', 'ಬಾಕ್ಸಾಫೀಸ್ ದಾದಾ', 'ಮೈಸೂರು ಹುಲಿ' ಅಂತ ಬರೋಬ್ಬರಿ ಮೂರು ಬಿರುದುಗಳು ಸಿಕ್ಕಿವೆ. ಅಂದಹಾಗೆ ಈ ಬಿರುದುಗಳನ್ನು ಕೊಟ್ಟವರು ಬೇರಾರು ಅಲ್ಲ. 'ಜಗ್ಗುದಾದಾ' ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ, ನಿರ್ಮಾಪಕ ಗೋವಿಂದ ರಾಜ್ ಮತ್ತು ದರ್ಶನ್ ಅವರ ಖಾಸ ದೋಸ್ತ್ ನಟ ಆದಿತ್ಯ.['ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?]
ಮೇ 9, ಸೋಮವಾರದಂದು ನಡೆದ 'ಜಗ್ಗುದಾದಾ' ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಹೆಗಡೆ ಅವರು "ನಾನು ಈ ಚಿತ್ರವನ್ನು ಮಾಡುತ್ತೇನೆ ಎಂದಾಗ ಎಲ್ಲರೂ ನನಗೆ ಭಯಪಡಿಸಿದರು. ದರ್ಶನ್ ಅವರನ್ನು ಹಾಕ್ಕೊಂಡು ಸಿನಿಮಾ ಮಾಡೋದು ಕಷ್ಟ, ಅವರು ಸಮಯಕ್ಕೆ ಸರಿಯಾಗಿ ಶೂಟಿಂಗ್ ಸೆಟ್ ಗೆ ಬರೋದಿಲ್ಲ ಎಂದಿದ್ದರು. ಆದರೆ ನನಗೆ ಮಾತ್ರ ಆ ವಿಷಯದಲ್ಲಿ ಒಂದು ದಿನವೂ ಸಮಸ್ಯೆ ಆಗಲಿಲ್ಲ" ಎಂದರು.[ದರ್ಶನ್ ರವರ 'ಜಗ್ಗುದಾದಾ' ಚಿತ್ರದ ಹಾಡುಗಳು ಹೇಗಿವೆ.?]
"ಮಾತ್ರವಲ್ಲದೆ ದರ್ಶನ್ ಅವರು ಬೆಳಗ್ಗೆ 10 ರಿಂದ ರಾತ್ರಿ 9 ಘಂಟೆಯವರೆಗೂ ಸೆಟ್ ನಲ್ಲಿ ಇರುತ್ತಿದ್ದರು. ಒಂದು ದಿನ ಬೆಳಗ್ಗೆ 8 ಘಂಟೆಯಿಂದ ಮಧ್ಯರಾತ್ರಿ 2 ಘಂಟೆಯವರೆಗೂ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಅವರ ಕಾಲ್ ಶೀಟ್ ಸಿಗೋದೇ ಕಷ್ಟ ಅಂತದ್ರಲ್ಲಿ ನಾನು ಅವರ ಸಿನಿಮಾ ಮಾಡಿದ್ದೀನಿ. ಅವರನ್ನು "ಈ ಯುಗದ ಬಂಗಾರದ ಮನುಷ್ಯ' ಅಂತ ಕರೆದರೂ ತಪ್ಪಿಲ್ಲ" ಎಂದು ನಿರ್ದೇಶಕ ರಾಘವೇಂದ್ರ ಹೆಗಡೆ ಹೊಸ ಬಿರುದು ದಯಪಾಲಿಸಿದ್ದಾರೆ.[ದರ್ಶನ್ ಅಭಿನಯದ 'ಜಗ್ಗು ದಾದಾ' ಟೈಟಲ್ ಟೀಸರ್ ನೋಡಿದ್ರಾ.?]
ಇದೇ ಸಂದರ್ಭದಲ್ಲಿ ಹಿರಿಯ ನಿರ್ಮಾಪಕ ಗೋವಿಂದ ರಾಜ್ ಅವರು ದರ್ಶನ್ ಅವರನ್ನು 'ಬಾಕ್ಸ್ ಆಫೀಸ್ ದಾದಾ' ಎಂದರೆ ದರ್ಶನ್ ಅವರ ಚಡ್ಡಿ ದೋಸ್ತ್ ನಟ 'ಡೆಡ್ಲಿ' ಆದಿತ್ಯ ಅವರು 'ದರ್ಶನ್ ಅವರನ್ನು ಎಲ್ಲರೂ ಬಾಕ್ಸಾಫೀಸ್ ಸುಲ್ತಾನ', 'ಚಾಲೆಂಜಿಂಗ್ ಸ್ಟಾರ್' ಅಂತೆಲ್ಲಾ ಕರೆಯುತ್ತಾರೆ. ಆದರೆ ನಾನು ಮಾತ್ರ ಅವರನ್ನು ಸದಾ 'ಮೈಸೂರು ಹುಲಿ' ಅಂತ ಕರೆಯೋಕೆ ಇಷ್ಟಪಡ್ತೀನಿ' ಎಂದು ನುಡಿದರು.
ಅಂತೂ ಇಂತೂ ಒಂದೇ ದಿನ ದರ್ಶನ್ ಅವರಿಗೆ ಒಂದಲ್ಲಾ, ಮೂರು ಹೊಸ ಬಿರುದುಗಳು ಸಿಕ್ಕಿದ್ದು, ಇನ್ನು ಮುಂದೆ ಅವರನ್ನು ಯಾವ-ಯಾವ ರೀತಿಯಲ್ಲಿ ಕರೀತೀರಾ ಅನ್ನೋದು ಅಭಿಮಾನಿಗಳಿಗೆ ಬಿಟ್ಟಿದ್ದು.