Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಾಟಾ, ಬಿರ್ಲಾಗಳೂ ಪ್ರಶಸ್ತಿ ಕೊಳ್ಳಲು ಸಾಧ್ಯವಿಲ್ಲ
5.
ತಮ್ಮ
ಮುಂದಿನ
ಚಿತ್ರ
ಯಾವಾಗ?
ಯಾವ
ವಿಷಯ
ಆಯ್ಕೆ
ಮಾಡಿಕೊಂಡಿದ್ದೀರಿ?
ಮುಂದೆ
ಯಾವ
ಸಿನಿಮಾ
ಮಾಡಬೇಕು
ಎಂದು
ಯೋಚನೆ
ಮಾಡಬೇಕಿದೆ.
ಮೊದಲೆಲ್ಲಾ
ಕ್ಲಾರಿಟಿ
ಇತ್ತು,
ಯಾವ
ತರಹದ
ಸಿನಿಮಾ
ಮಾಡಬಹುದು
ಎಂದು.
ಈಗ
ಇಷ್ಟೊಂದು
ಆತ್ಮಸ್ಥೈರ್ಯವನ್ನು
ಕುಗ್ಗಿಸುವಂತೆ
ಮಾಡಿದ್ದಾರೆ.
ಆದರೆ
ನನಗೆ
ಆತ್ಮಸ್ಥೈರ್ಯ
ಕುಗ್ಗಿಲ್ಲ,
ಮಾನಸಿಕವಾಗಿ
ಹಿಂಸೆಯನ್ನು
ಅನುಭವಿಸಿದ್ದೇನೆ.
ಮುಂದಿನ
ಸಿನಿಮಾ
ಬಗ್ಗೆ
ಯೋಚನೆ
ಮಾಡಿ
ಹೆಜ್ಜೆ
ಇಡಬೇಕಾಗಿದೆ.
ಎಷ್ಟು
ಎಚ್ಚರಿಕೆ
ತೆಗೆದುಕೊಂಡರೂ
ಸಾಲದು.
ಜವಾಬ್ದಾರಿಯಿಂದ
ನಾನು
ಚಿತ್ರ
ಮಾಡಿದರೂ
ಹೀಗೆಲ್ಲಾ
ಆದರೆ
ಇನ್ನು
ಉಳಿದವರ
ಪಾಡೇನು.
ರಾಷ್ಟ್ರಪ್ರಶಸ್ತಿಗಾಗಿ
ಸಿನಿಮಾ
ಮಾಡ್ತಾರೆ
ಅಂತಾರೆ,
ರಾಷ್ಟ್ರಪ್ರಶಸ್ತಿಗಾಗಿ
ಸಿನಿಮಾ
ಮಾಡ್ತೀನಿ
ಅನ್ನೋದಾದರೆ
ಈ
ಸಿನಿಮಾವನ್ನು
ಹನ್ನೆರಡು
ಕೇಂದ್ರಗಳಲ್ಲಿ
ಯಾಕೆ
ಬಿಡುಗಡೆ
ಮಾಡಬೇಕಾಗಿತ್ತು?
ಜನ
ನೋಡಲಿ
ಎಂಬುದು
ತಾನೆ
ನನ್ನ
ಉದ್ದೇಶ.
ವಿಕೃತ ಮನಸ್ಸು ಎಂಬ ಪದ ಬಳಸುತ್ತಾರೆ. ಆ ಪದ ಕೇಳಿ ನನ್ನ ಮನಸ್ಸಿಗೆ ತುಂಬ ನೋವಾಯಿತು. ಒಂದು ವೇಳೆ ನಿರ್ಮಾಪಕ, ನಿರ್ದೇಶಕರದು ವಿಕೃತ ಮನಸ್ಸೇ ಆಗಿದ್ದರೆ ಚುನಾವಣೆ ಸಂದರ್ಭದಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡಿ ಉಳಿದ ಪಕ್ಷಗಳಿಗೆ ಆಹಾರವಾಗುವಂತೆ ಮಾಡಬಹುದಿತ್ತಲ್ಲಾ. ಚಿತ್ರಕ್ಕೆ ಬೇರೆ ತರಹ ಪ್ರಚಾರ ಸಿಗುತ್ತಿರಲಿಲ್ವಾ, ಹೆಚ್ಚು ಜನ ನೋಡುತ್ತಿರಲಿಲ್ಲವೇ? ಇನ್ನೊಂದಿಷ್ಟು ಕಾಂಟ್ರವರ್ಸಿ ಆಗುತ್ತಿರಲಿಲ್ಲವೇ? ಈ ರೀತಿಯ ಸಲಹೆಗಳು ನಮಗೂ ಬಂದವು. ಆ ರೀತಿಯ ವಿಕೃತ ಮನಸ್ಸಿನವರೇ ಆಗಿದ್ದರೆ ಆಗಲೇ ಬಿಡುಗಡೆ ಮಾಡುತ್ತಿದ್ದೆವು. ಚುನಾವಣೆ ಮುಗಿದ ಒಂದು ವಾರದ ಬಳಿಕ ಚಿತ್ರ ಬಿಡುಗಡೆ ಮಾಡುತ್ತಿರಲಿಲ್ಲ. ಸಾಮಾಜಿಕ ಕಳಕಳಿಯಿಂದ ಚಿತ್ರವನ್ನು ಬಿಡುಗಡೆ ಮಾಡಿದ್ದೇವೆ.
ಯಾವುದೇ ಲಾಬಿ ಮಾಡಿ ರಾಷ್ಟ್ರ ಪ್ರಶಸ್ತಿಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಎಷ್ಟು ದಿನ ಎಂದು ನೀವು ಓಲೈಸಲು ಸಾಧ್ಯ. ಹದಿನೈದು ಮಂದಿ ಜ್ಯೂರಿ ಮೆಂಬರ್ಸ್ ಇರುತ್ತಾರೆ, ಎಲ್ಲಾ ರಾಜ್ಯಗಳಿಂದ ಬಂದಿರುತ್ತಾರೆ. ಅವರೆಲ್ಲರನ್ನೂ ಕೊಂಡುಕೊಳ್ಳಲು ಸಾಧ್ಯವೆ? ಟಾಟಾ, ಬಿರ್ಲಾಗಳಿಂದಲೂ ಸಾಧ್ಯವಿಲ್ಲ, ಅವರನ್ನು ಕೊಂಡುಕೊಳ್ಳಲು. ಎಷ್ಟು ಜನರನ್ನು ಕೊಂಡುಕೊಳ್ಳಲು ಸಾಧ್ಯ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗೆ ಒಂದು ಘನತೆ ಇದೆ. ಆ ಘನತೆ, ಗೌರವನ್ನು ನಾವು ಉಳಿಸಬೇಕು. ಒಂದು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ರದ್ದಾದರೂ ನಾನು ಇದೇ ರೀತಿಯ ಚಿತ್ರವನ್ನು ಮಾಡುತ್ತೇನೆ.