Don't Miss!
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- News Ganesamoorthy Death: ಟಿಕೆಟ್ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಲಿ ಸಂಸದ ಸಾವು
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Lifestyle ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಡಿಗೇಡಿಗಳಿಂದ ವಿನೋದ್ ರಾಜ್ಗೆ ತೊಂದರೆ, ಠಾಣೆ ಮೆಟ್ಟಲೇರಿದ ನಟ
ನಟ ವಿನೋದ್ ರಾಜ್ ಗಾಂಧಿ ನಗರದ ಜಂಜಡಗಳಿಂದ ದೂರ ಉಳಿದು, ತಾಯಿ ಲೀಲಾವತಿ ಅವರೊಟ್ಟಿಗೆ ನೆಲಮಂಗಲದ ಹಳ್ಳಿಯೊಂದರಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
Recommended Video
ಯಾರ ತಂಟೆಗೂ ಹೋಗದೆ, ತಾವಾಯಿತು, ತಮ್ಮ ಕೃಷಿಯಾಯಿತು ಎಂದಿರುವ ವಿನೋದ್ ರಾಜ್ ಗೆ ಕಿಡಿಗೇಡಿಗಳು ಯಾರೊ ಸಮಸ್ಯೆ ಕೊಟ್ಟಿದ್ದಾರೆ.
ನಟ ವಿನೋದ್ ರಾಜ್ ಯಾವುದೇ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ, ಕೃಷಿ ಹಾಗೂ ತಾಯಿಯೇ ಸರ್ವಸ್ವವೆಂದು ಬದುಕುತ್ತಿರುವ ವಿನೋದ್ ರಾಜ್ಗೆ ಅದರ ಅವಶ್ಯಕತೆಯೂ ಬಂದಿಲ್ಲ. ಆದರೆ ಯಾರೊ ಕಿಡಿಗೇಡಿಗಳು ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದಾರೆ.
ವಿನೋದ್ ರಾಜ್ ಹೆಸರಲ್ಲಿ ನಕಲಿ ಖಾತೆ
ವಿನೋದ್ ರಾಜ್ ಹೆಸರಲ್ಲಿ ಯಾರೊ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸಿನಿಮಾ ನಟ-ನಟಿಯರಿಗೆ ಸಂದೇಶಗಳನ್ನು ಕಳಿಸಿ, ಹಣ ಕೇಳುತ್ತಿದ್ದಾರಂತೆ. ವಿಷಯ ಗೊತ್ತಾಗುತ್ತಿದ್ದಂತೆ ವಿನೋದ್ ರಾಜ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಾಯಿಪ್ರಕಾಶ್ ಕರೆ ಮಾಡಿದಾಗ ನನಗೆ ಗೊತ್ತಾಯಿತು: ವಿನೋದ್ ರಾಜ್
'ನಾನು ನನ್ನ ತಾಯಿ, ಹೊಲ, ತೋಟ, ಪರಿಸರ, ಆಸ್ಪತ್ರೆ, ಹಳ್ಳಿ ಎಂದುಕೊಂಡು ಇದ್ದೇವೆ. ನನಗೆ ಸಾಮಾಜಿಕ ಜಾಲತಾಣದ ಬಗ್ಗೆ ಏನೂ ಗೊತ್ತಿಲ್ಲ. ಆದರೆ ಯಾರೊ ನನ್ನ ಹೆಸರಲ್ಲಿ ಖಾತೆ ತೆರೆದು ಸಂದೇಶ ಕಳಿಸಿದ್ದಾರೆ ಎಂದು ನಟ ಸಾಯಿಪ್ರಕಾಶ್ ಕರೆ ಮಾಡಿ ಹೇಳಿದಾಗ ಗೊತ್ತಾಯಿತು' ಎಂದಿದ್ದಾರೆ ವಿನೋದ್ ರಾಜ್.
'ಈಗಾಗಲೇ ಕಷ್ಟ ನೋಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ'
'ಸಮಾಜದಲ್ಲಿ ಕಲಾವಿದರಿಗೆ ಈ ರೀತಿ ಸಮಸ್ಯೆ ಕೊಡಬೇಡಿ, ಈ ರೀತಿ ನಡೆದುಕೊಂಡು ಕೆಟ್ಟ ಹೆಸರು ತರಬೇಡಿ, ಮನೆ ಹಾಳುಮಾಡುವಂತ ಕೆಲಸ ಮಾಡಬೇಡಿ, ಈಗಾಗಲೇ ಸಾಕಷ್ಟು ಕಷ್ಟ ಕಂಡಿದ್ದೇವೆ, ಇನ್ನಷ್ಟು ಕಷ್ಟ ಕೊಡಬೇಡಿ, ಯಾರು ಈ ಕೆಲಸ ಮಾಡಿದ್ದಾರೊ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ' ಎಂದಿದ್ದಾರೆ ವಿನೋದ್ ರಾಜ್.
ಮುಖವಾಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮತ್ತೆ ವಿನೋದ್?
ನೆಲಮಂಗಲದ ಮೈಲನಹಳ್ಳಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿರುವ ವಿನೋದ್ ರಾಜ್, ಈಗ ಸಿನಿಮಾಕ್ಕೆ ಮರುಪ್ರವೇಶ ಮಾಡುವ ಉತ್ಸಾಹದಲ್ಲಿದ್ದಾರೆ. ಮುಖವಾಡ ಎಂಬ ಸಿನಿಮಾ ಮೂಲಕ ವಿನೋದ್ ರಾಜ್ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ.