ಫಿಲಂಫೇರ್ ಸೌತ್ ಅವಾರ್ಡ್: ಇವರಲ್ಲಿ ಯಾರಿಗೆ ಪ್ರಶಸ್ತಿ?
60ನೇ ಐಡಿಯಾ ಫಿಲಂಫೇರ್ ಸೌತ್ ಪ್ರಶಸ್ತಿಗೆ ಆಯ್ಕೆಯಾಗುವ ಸೆಲೆಬ್ರಿಟಿಗಳ ನಾಮಿನೇಶನ್ ಪ್ರಕ್ರಿಯೆ ಅಂತಿಮಗೊಂಡಿದೆ. ಈ ಬಾರಿಯ ಪ್ರಶಸ್ತಿಯನ್ನು ಟೈಮ್ಸ್ ಗ್ರೂಪ್ ಪ್ರಸ್ತುತ ಪಡಿಸುತ್ತಿದೆ.
1954ರಲ್ಲಿ ಈ ಪ್ರಶಸ್ತಿ ನೀಡಲು ಆರಂಭವಾಗಿತ್ತಾದರೂ ಕನ್ನಡ ಚಿತ್ರಗಳಿಗೆ ಪ್ರಶಸ್ತಿ ನೀಡಲು ಆರಂಭವಾಗಿದ್ದು 1970ರಲ್ಲಿ. ಜನಮತ ಅಭಿಪ್ರಾಯ ಮತ್ತು ಕಮಿಟಿ ಸದಸ್ಯರ ಮೂಲಕ ಪ್ರಶಸ್ತಿಯನ್ನು ನೀಡಲಾಗುವುದು.
2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರ ಚಿತ್ರ ಐದು ಪ್ರಶಸ್ತಿಯನ್ನು, 2005ರಲ್ಲಿ ಬಿಡುಗಡೆಯಾದ ತಮಿಳು ಅನ್ನಿಯನ್ ಮತ್ತು ತೆಲುಗು ನೂವಸ್ತಾನುಂಟೆ ಚಿತ್ರ ಎಂಟು ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಇದೇ ಜುಲೈ 20ರಂದು ಹೈದರಾಬಾದಿನ international convention center ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿವಿಧ ವಿಭಾಗಗಳಲ್ಲಿ ನಾಮಿನೇಶನ್ ಅಂತಿಮಗೊಂಡ ಪಟ್ಟಿ ಸ್ಲೈಡಿನಲ್ಲಿದೆ. ಅಂತಿಮಗೊಂಡ ಹೆಸರಿಗೆ ನಿಮ್ಮ ಸಹಮತವಿದೆಯೇ ಅಥವಾ ನಿಮ್ಮ ಆಯ್ಕೆ ಬೇರೆಯಾಗಿತ್ತೇ?

ಅತ್ಯುತ್ತಮ ಚಿತ್ರ
ಅದ್ದೂರಿ
ಡ್ರಾಮಾ
ಎದೆಗಾರಿಕೆ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಸಿದ್ಲಿಂಗು

ಅತ್ಯುತ್ತಮ ಚಿತ್ರ ನಿರ್ದೇಶಕ
ಎ ಪಿ ಅರ್ಜುನ್ (ಅದ್ದೂರಿ)
ನಾಗಣ್ಣ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)
ಸಂತು (ಅಲೆಮಾರಿ)
ಸುಮನಾ ಕಿತ್ತೂರು (ಎದೆಗಾರಿಕೆ)
ವಿಜಯ್ ಪ್ರಸಾದ್ (ಸಿದ್ಲಿಂಗು)
(ಚಿತ್ರದಲ್ಲಿ :ಎ ಪಿ ಅರ್ಜುನ್)

ಅತ್ಯುತ್ತಮ ನಟ
ಆದಿತ್ಯ (ಎದೆಗಾರಿಕೆ)
ದರ್ಶನ್ ತೂಗುದೀಪ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)
ಪುನೀತ್ ರಾಜಕುಮಾರ್ (ಅಣ್ಣಾಬಾಂಡ್)
ಯಶ್ (ಡ್ರಾಮಾ)
ಯೋಗೀಶ್ (ಸಿದ್ಲಿಂಗು)

ಅತ್ಯುತ್ತಮ ನಟಿ
ಪ್ರಣೀತಾ (ಭೀಮಾ ತೀರದಲಿ)
ಪ್ರಿಯಾಮಣಿ (ಚಾರುಲತ)
ಪೂಜಾಗಾಂಧಿ (ದಂಡುಪಾಳ್ಯ)
ರಮ್ಯಾ (ಸಿದ್ಲಿಂಗು)
ರಾಧಿಕಾ ಪಂಡಿತ್ (ಅದ್ದೂರಿ)

ಅತ್ಯುತ್ತಮ ಪೋಷಕ ನಟ
ಅತುಲ್ ಕುಲ್ಕರ್ಣಿ (ಎದೆಗಾರಿಕೆ)
ರವಿಕಾಳೆ (ದಂಡುಪಾಳ್ಯ)
ಸಾಯಿಕುಮಾರ್ (ಕಲ್ಪನಾ)
ಶರಣ್ (ಪಾರಿಜಾತ)
ಶಿವಕುಮಾರ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)

ಅತ್ಯುತ್ತಮ ಪೋಷಕ ನಟಿ
ಕ್ಯಾಥರೀನಾ (ಗಾಡ್ ಫಾದರ್)
ಜಯಪ್ರದಾ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ)
ಸಿಂಧು ಲೋಕನಾಥ್ (ಡ್ರಾಮಾ)
ಸುಮನ್ ರಂಗನಾಥ್ (ಸಿದ್ಲಿಂಗು)
ಉಮಾಶ್ರೀ (ಅಲೆಮಾರಿ)

ಅತ್ಯುತ್ತಮ ಸಂಗೀತ ನಿರ್ದೇಶಕ
ಅನೂಪ್ ಸೀಳನ್ (ಸಿದ್ಲಿಂಗು)
ಅರ್ಜುನ್ ಜನ್ಯಾ (ಅಲೆಮಾರಿ)
ಗುರುಕಿರಣ್ (ಗೋವಿಂದಾಯ ನಮ:)
ವಿ ಹರಿಕೃಷ್ಣ (ಅಣ್ಣಾಬಾಂಡ್, ಡ್ರಾಮಾ)

ಅತ್ಯುತ್ತಮ ಚಿತ್ರ ಸಾಹಿತಿ
ಜಯಂತ್ ಕಾಯ್ಕಿಣಿ (ಅಣ್ಣಾಬಾಂಡ್ ಚಿತ್ರದ ಏನೆಂದು ಹೆಸರಿಡಲಿ ಹಾಡು)
ಕವಿರಾಜ್ (ರೋಮಿಯೋ ಚಿತ್ರದ ಆಲೋಚನೆ ಹಾಡು)
ಪವನ್ ಒಡೆಯರ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡು)
ವಿ ನಾಗೇಂದ್ರ ಪ್ರಸಾದ್ (RAMBO ಚಿತ್ರದ ಮನೆತನಕ ಬಾರೇ ಹಾಡು)
ಯೋಗರಾಜ್ ಭಟ್ (ಡ್ರಾಮಾ ಚಿತ್ರದ ಬೊಂಬೆ ಆಡ್ಸೋನು ಹಾಡು)

ಅತ್ಯುತ್ತಮ ಗಾಯಕ
ಅವಿನಾಶ್ ಛೆಬ್ರಿ (ಸಿದ್ಲಿಂಗು ಚಿತ್ರದ ಎಲ್ಲೆಲ್ಲೋ ಓಡುವ ಮನಸೆ ಹಾಡಿಗಾಗಿ)
ಚೇತನ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡಿಗಾಗಿ)
ಫಯಾಜ್ ಖಾನ್ (ಅಲೆಮಾರಿ ಚಿತ್ರದ ಅಲೆ ಅಲೆಯೋ ಹಾಡಿಗಾಗಿ)
ಸೋನು ನಿಗಂ (ಡ್ರಾಮಾ ಚಿತ್ರದ ಚೆಂದುಟಿಯ ಪಕ್ಕದಲಿ ಹಾಡಿಗಾಗಿ)
ವಿ ಹರಿಕೃಷ್ಣ (ಅದ್ದೂರಿ ಚಿತ್ರದ ಆ ಅಮಾಟೆ ಹಾಡಿಗಾಗಿ)

ಅತ್ಯುತ್ತಮ ಗಾಯಕಿ
ಅನುರಾಧಾ ಭಟ್ (ಸಿದ್ಲಿಂಗು ಚಿತ್ರ ಎಲ್ಲೆಲ್ಲೋ ಓಡುವ ಮನಸೆ ಹಾಡಿಗಾಗಿ)
ಇಂದು ನಾಗರಾಜ್ (ಗೋವಿಂದಾಯ ನಮ: ಚಿತ್ರದ ಪ್ಯಾರ್ಗೆ ಆಗ್ಬಿಟ್ಟೈತೆ ಹಾಡಿಗಾಗಿ)
ಶ್ರೇಯಾ ಘೋಷಾಲ್ (ಅಣ್ಣಾ ಬಾಂಡ್ ಚಿತ್ರದ ಏನೆಂದು ಹೆಸರಿಡಲಿ ಮತ್ತು ರೋಮಿಯೋ ಚಿತ್ರದ ಆಲೋಚನೆ ಹಾಡಿಗಾಗಿ)
ವಾಣಿ ಹರಿಕೃಷ್ಣ (ಅದ್ದೂರಿ ಚಿತ್ರದ ಮುಸ್ಸಂಜೆ ವೇಳೇಲಿ ಹಾಡಿಗಾಗಿ)


Click it and Unblock the Notifications











