twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರರಂಗದ ಗಣ್ಯರಿಂದ ಕಾರ್ಮಿಕ ಸಚಿವರ ಭೇಟಿ, ಸಹಾಯಕ್ಕೆ ಮನವಿ

    |

    ಕೊರೊನಾ ದಿಂದ ರಾಜ್ಯ ತತ್ತರಿಸಿದ್ದು, ಬಡವರು, ದಿನಗೂಲಿ ನೌಕರರು ಹೊತ್ತಿನ ಊಟಕ್ಕೆ ಕಷ್ಟಪಡುವಂತಹಾ ಸ್ಥಿತಿ ನಿರ್ಮಾಣವಾಗಿದೆ.

    ಸಿನಿಮಾ ಉದ್ಯಮ ಸಹ ಕೊರೊನಾ ಹೊಡೆತಕ್ಕೆ ಜರ್ಜರಿತವಾಗಿದ್ದು, ಸಾಲ ಪಡೆದ ನಿರ್ಮಾಪಕರು ಬಡ್ಡಿ ತಲೆ ಮೇಲೆ ಹೊತ್ತುಕೊಂಡಿದ್ದರೆ. ಸಿನಿಮಾ ಚಿತ್ರೀಕರಣವನ್ನೇ ನಂಬಿಕೊಂಡಿದ್ದ ದಿನಗೂಲಿ ನೌಕರರ ಪಾಡು ಹೇಳ ತೀರದು.

    ಇಂಥಹಾ ಸಂದಿಗ್ಧ ಸಮಯದಲ್ಲಿ ಸಿನಿಮಾ ಉದ್ಯಮದ ಪ್ರಮುಖರು ಸರ್ಕಾರದ ನೆರವನ್ನು ಬೇಡಿದ್ದು, ಇಂದು ಸಿನಿಮಾದ ಕೆಲವು ಸಂಘ-ಸಂಸ್ಥೆಗಳ ಮುಖಂಡರು, ಕಾರ್ಮಿಕ ಸಚಿವರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದರು.

    Film Organization Leaders Met Labour Minister And Gave Request Letter

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಒಕ್ಕೂಟದ ಕಾರ್ಯದರ್ಶಿ ರವೀಂದ್ರ ಇನ್ನೂ ಹಲವು ಪ್ರಮುಖರು ಇಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

    ದಿನಸಿ, ತರಕಾರಿಗಳು ಇನ್ನಿತರ ಅಗತ್ಯ ಸಾಮಗ್ರಿಗಳ ನೆರವನ್ನು ಸಿನಿಮಾದ ದಿನಗೂಲಿ ನೌಕರರಿಗೆ ವಿಸ್ತರಿಸಿರೆಂದು ಗಣ್ಯರು ಕಾರ್ಮಿಕ ಸಚಿವರನ್ನು ಮನವಿ ಮಾಡಿದರು.

    Film Organization Leaders Met Labour Minister And Gave Request Letter

    ಇಷ್ಟೆ ಅಲ್ಲದೆ, ಸಿನಿಮಾ ಉದ್ಯಮದ ಪ್ರಸ್ತುತ ಸ್ಥಿತಿ, ಅನುಭವಿಸಿರುವ ನಷ್ಟ, ಮುಂದೆ ಆಗಬೇಕಾಗಿರುವ ಕಾರ್ಯಗಳು ಇನ್ನೂ ಹಲವಾರು ವಿಷಯಗಳ ಬಗ್ಗೆ ಈ ಪ್ರಮುಖರು ಸಚಿವರ ಬಳಿ ಚರ್ಚೆ ನಡೆಸಿದ್ದಾರೆ.

    English summary
    Film organization leaders met labor minister Shivaram Hebbar and gave request letter to help cinema daily wagers.
    Wednesday, April 8, 2020, 22:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X