Don't Miss!
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತಮೂರ್ತಿ ಕುರಿತು ಗಿರೀಶ್ ಕಾಸರವಳ್ಳಿ ಚಿತ್ರ
ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಿದ್ದಾರೆ. ತಮ್ಮ ಸಾಕ್ಷ್ಯಚಿತ್ರಕ್ಕೆ ಅವರು "Ananthamurthy not a Biography But Hypothesis" ಎಂದು ಹೆಸರಿಟ್ಟಿದ್ದಾರೆ.
ಫಿಲಂಸ್ ಡಿವಿಜನ್ ನಿರ್ಮಿಸಿರುವ ಈ ಸಾಕ್ಷ್ಯಚಿತ್ರದ ಪ್ರದರ್ಶನ ಶನಿವಾರ (ಡಿ.14) ಬೆಂಗಳೂರು ಇನ್ಫೆಂಟ್ರಿ ರಸ್ತೆಯಲ್ಲಿರುವ ವಾರ್ತಾ ಇಲಾಖೆಯ ಸುಲೋಚನಾ ಹಾಲ್ ನಲ್ಲಿ ಪ್ರದರ್ಶಿಸಲಾಗುತ್ತಿದೆ. ಬೆಳಗ್ಗೆ 10.30ಕ್ಕೆ ಪ್ರದರ್ಶನವಿರುತ್ತದೆ.
ಈ ಸಾಕ್ಷ್ಯಚಿತ್ರ ಅನಂತಮೂರ್ತಿ ಅವರ ಬಗ್ಗೆ ಹೊಸ ಬೆಳಕು ಚೆಲ್ಲಲಿದೆ. ಅವರ ಸಾಮಾಜಿಕ ಹೋರಾಟ, ಗಾಂಧಿಜಿಯವರ ಆದರ್ಶ, ಸಮಾಜವಾದಿ ಧೋರಣೆ ಇವೆಲ್ಲವನ್ನೂ ಚಿತ್ರದಲ್ಲಿ ನೋಡಬಹುದು. ಹಲವು ದಶಕಗಳಿಂದ ಚಿಂತಕರು, ವಿಮರ್ಶಕರ ಜೊತೆಗಿನ ಅವರ ಒಡನಾಟವನ್ನೂ ಕಾಣಬಹುದಾಗಿದೆ.
ಈ ಸಾಕ್ಷ್ಯಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಅವರು ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಜಿ.ಎಸ್.ಭಾಸ್ಕರ್, ವಿಷಯ ಸಮಾಲೋಚನೆ ಎನ್.ಮನುಚಕ್ರವರ್ತಿ, ಸಂಕಲನ ಮೋಹನ್ ಕಾಮಾಕ್ಷಿ, ಸಂಗೀತ ಬಿಂದು ಮಾಲಿನಿ ಹಾಗೂ ಗೋಕುಲ್ ಅಭಿಷೇಕ್ ಧ್ವನಿ ಇದೆ. (ಒನ್ಇಂಡಿಯಾ ಕನ್ನಡ)