Don't Miss!
- News ಮತದಾನಕ್ಕೆ ಕೌಂಟ್ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ಗುರು ರಾಜ್ ಕುಮಾರ್
ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವಿದ್ವತ್ ಸಹಾಯಕ್ಕಾಗಿ ಡಾ ರಾಜ್ ಕುಮಾರ್ ಕುಟುಂಬಸ್ಥರು ಮುಂದಾಗಿದ್ದಾರೆ. ವಿದ್ವತ್ ಮೇಲೆ ಹಲ್ಲೆ ಆಗಿರುವುದನ್ನು ತಿಳಿದ ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಗುರು ರಾಜ್ ಕುಮಾರ್ ಮೇಲೆಯೂ ಹಲ್ಲೆ ಮಾಡಲು ಹಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಪ್ರಯತ್ನಿಸಿದ್ದರು ಎನ್ನುವ ವಿಚಾರಗಳು ಕೇಳಿಬಂದಿತ್ತು.
ನಿನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಅವರ ಆರೋಗ್ಯವನ್ನ ವಿಚಾರಿಸಿ ಬಂದಿದ್ದರು. ನಂತ್ರ ಮಾತನಾಡಿದ ಪುನೀತ್ ವಿದ್ವತ್ ಫ್ಯಾಮಿಲಿಗೆ ಬೇಕಾದವರು ಕಾನೂನಿಗಿಂದ ದೊಡ್ಡವರಿಲ್ಲ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎನ್ನುವ ಮಾತಗಳನ್ನ ಹೇಳಿದ್ದರು.
ಹಲ್ಲೆಗೊಳಗಾಗಿರುವ ವಿದ್ವತ್ ಆರೋಗ್ಯ ವಿಚಾರಿಸಿದ ನಟ ಪುನೀತ್
ವಿದ್ವತ್ ಗಾಗಿ ಈಗ ಇಡೀ ರಾಜ್ ಕುಟುಂಬಸ್ಥರು ಮುಂದಾಗಿದ್ದಾರೆ. ನ್ಯಾಯಕ್ಕಾಗಿ ನಿನ್ನೆ ರಾತ್ರಿಯಿಂದಲೇ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದು ಸಾಕಷ್ಟು ಜನರು ಗುರು ಜೊತೆ ಕೈ ಜೋಡಿಸಿದ್ದಾರೆ. ಮುಂದೆ ಓದಿ
ಫೇಸ್ ಬುಕ್ ನಲ್ಲಿ ಶುರುವಾಯ್ತು ಅಭಿಯಾನ
ಗುರು ರಾಜ್ ಕುಮಾರ್ ಅವರ ಸ್ನೇಹಿತ ವಿದ್ವತ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನಿನ ಮೂಲಕ ವಿದ್ವತ್ ಗೆ ನ್ಯಾಯ ಸಿಗಬೇಕೆಂದು ಹ್ಯಾಷ್ ಟ್ಯಾಗ್ ಹಾಕಿ 'ಜಸ್ಟಿಸ್ ಫಾರ್ ವಿದ್ವತ್' ಎಂದು ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನ ಪ್ರಾರಂಭ ಮಾಡಿದ್ದಾರೆ.
ಸ್ನೇಹಿತನ ಬಗ್ಗೆ ಸ್ಟೇಟಸ್ ಹಾಕಿದ ಗುರು
ವಿದ್ವತ್ ಹಾಗೂ ಗುರು ರಾಜ್ ಕುಮಾರ್ ಬಾಲ್ಯ ಸ್ನೇಹಿತರು , ಶಾಲೆಯಿಂದ ಕಾಲೇಜಿನವರೆಗೂ ಇಬ್ಬರೂ ಒಟ್ಟಿಗೆ ಬೆಳೆದು ಬಂದವರು. ಈ ಬಗ್ಗೆ ಗುರು ರಾಜ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ವಿದ್ವತ್ ಜೊತೆ ಇರುವ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬೇಗ ಹುಷಾರಾಗಿ ಬಾ ಸಹೋದರ
ಫೋಟೋ ಜೊತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿರುವ ಗುರು ರಾಜ್ ಕುಮಾರ್. "ನನ್ನ ಸಹೋದರನಿಗೆ ನೋವಾದರೆ ನನಗೂ ನೋವಾಗುತ್ತದೆ. ಅವನ ನೋವು ನನ್ನ ನೋವಿದಂತೆ. ಬೇಗ ಹುಷಾರಾಗಿ ಬಾ" ಎಂದು ಬರೆದುಕೊಂಡಿದ್ದಾರೆ.
ಹೆಚ್ಚಾಗುತ್ತಿದೆ ಫೇಸ್ ಬುಕ್ ಅಭಿಯಾನ
ನಿನ್ನೆ ಪುನೀತ್ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ಕೊಟ್ಟ ನಂತರ ಗುರು ಫೇಸ್ ಬುಕ್ ನಲ್ಲಿ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಗುರು ರಾಜ್ ಕುಮಾರ್ ಜೊತೆಯಲ್ಲಿ ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ಕೈ ಜೋಡಿಸಿದ್ದಾರೆ.